<p><strong>ಚಿಂಚೋಳಿ( ಕಲಬುರಗಿ ಜಿಲ್ಲೆ): </strong>ಪುರಸಭೆ ವ್ಯಾಪ್ತಿಯ ಚಂದಾಪುರದ ಪಟೇಲ ಕಾಲೋನಿ ಹಾಗೂ ಆಶ್ರಯ ಕಾಲೋನಿಯಲ್ಲಿ 20 ಮನೆಗಳಲ್ಲಿ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.</p>.<p>ತಕ್ಷಣ ಪುರಸಭೆ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿದ್ದು, ನೀರು ತೆರವಿಗೆ ಶ್ರಮಿಸಿದ್ದಾರೆ. ಮುಖ್ಯಾಧಿಕಾರಿ ಅಭಯಕುಮಾರ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.</p>.<p>ಚಂದಾಪುರದಲ್ಲಿರುವ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಚೇರಿ ಜಲಾವೃತವಾಗಿದೆ. ಬಸವ ನಗರದಲ್ಲಿ ಬೊಂದು ಮನೆಗೆ ನೀರು ನುಗ್ಗಿದ್ದು ಹಾರಕೂಡ ಶಾಲೆ ಮತ್ತು ಪಂಚಾಯತ ರಾಜ್ ಕಚೇರಿ ಸುತ್ತಲೂ ನೀರಿನ ಹೊಂಡಗಳು ನಿರ್ಮಾಣವಾಗಿವೆ.</p>.<p>ಮಳೆಯಿಂದ ಕಲ್ಲೂರು ರೋಡ್ ಸೋಮಲಿಂಗದಳ್ಳಿ ಮಧ್ಯೆ ರಸ್ತೆಯ ಚಿಕ್ಕ ಸಿಡಿಯ ಭುಜಕ್ಕೆ ಹಾನಿಯಾಗಿದೆ. ಮುರ್ಕಿ ಹಂದರಕಿ ರಾಜ್ಯ ಹೆದ್ದಾರಿ 122ರಲ್ಲಿ ಬರುವ ಗಣಾಪುರ ಬಳಿಯ ಸೇತುವೆ ಮಳೆ ನೀರಿನ ಪ್ರವಾಹದಲ್ಲಿ ಮುಳುಗಿದ್ದರಿಂದ ಹೆದ್ದಾರಿ ಸಂಚಾರ ಬಂದ್ ಆಗಿದೆ.</p>.<p>ಮಳೆ ನೀರು ರೈತರ ಹೊಲಗಳಿಗೆ ನುಗ್ಗಿ ನೂರಾರು ಎಕರೆ ಬೆಳೆ ನಾಶವಾಗಿದೆ. ಅನೇಕ ಕಡೆಗಳಲ್ಲಿ ಬದುಗಳು ಒಡೆದುಹೋಗಿವೆ. ತಗ್ಗು ಪ್ರದೇಶದ ಹೊಲಗಳು ಜಲಾವೃತ್ತವಾಗಿವೆ. ಮಳೆ ನೀರಿನಿಂದ ಮುಲ್ಲಾಮಾರಿನದಿಯಲ್ಲಿ ಪ್ರವಾಹ ಉಂಟಾಗಿದೆ.</p>.<p>ಚತ್ರಸಾಲ ಬಳಿ ರಾಜ್ಯ ಹೆದ್ದಾರಿ 122ರಲ್ಲಿ ಸೇತುವೆ ರಕ್ಷಣಾ ಗೋಡೆ ಹಾಗೂ ರಸ್ತೆಯ ಭುಜ ಹಾಳಾಗಿದೆ.</p>.<p>ಚಂದಾಪುರ ಆಶ್ರಯ ಕಾಲೋನಿ ನಿವಾಸಿಗಳಾದ ರಾಜಕುಮಾರ ಸಾಯಪ್ಪ, ವೆಂಕಟೇಶ್, ಶ್ರೀನಿವಾಸ, ಸಾಯಮ್ಮ ದಾಸರ, ಮಹಿಬೂಬಖಾನ್, ಮಹಿಬೂಬಿ ಇಬ್ರಾಹಿಂ, ಅಜಮೋದ್ದೀನ ಬಾಬುಮಿಯ್ಯ, ಮನೆಯಲ್ಲಿ ನೀರು ತುಂಬಿ ದಿನಸಿ ಪದಾರ್ಥಗಳು ಹಾಳಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ( ಕಲಬುರಗಿ ಜಿಲ್ಲೆ): </strong>ಪುರಸಭೆ ವ್ಯಾಪ್ತಿಯ ಚಂದಾಪುರದ ಪಟೇಲ ಕಾಲೋನಿ ಹಾಗೂ ಆಶ್ರಯ ಕಾಲೋನಿಯಲ್ಲಿ 20 ಮನೆಗಳಲ್ಲಿ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.</p>.<p>ತಕ್ಷಣ ಪುರಸಭೆ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿದ್ದು, ನೀರು ತೆರವಿಗೆ ಶ್ರಮಿಸಿದ್ದಾರೆ. ಮುಖ್ಯಾಧಿಕಾರಿ ಅಭಯಕುಮಾರ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.</p>.<p>ಚಂದಾಪುರದಲ್ಲಿರುವ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಚೇರಿ ಜಲಾವೃತವಾಗಿದೆ. ಬಸವ ನಗರದಲ್ಲಿ ಬೊಂದು ಮನೆಗೆ ನೀರು ನುಗ್ಗಿದ್ದು ಹಾರಕೂಡ ಶಾಲೆ ಮತ್ತು ಪಂಚಾಯತ ರಾಜ್ ಕಚೇರಿ ಸುತ್ತಲೂ ನೀರಿನ ಹೊಂಡಗಳು ನಿರ್ಮಾಣವಾಗಿವೆ.</p>.<p>ಮಳೆಯಿಂದ ಕಲ್ಲೂರು ರೋಡ್ ಸೋಮಲಿಂಗದಳ್ಳಿ ಮಧ್ಯೆ ರಸ್ತೆಯ ಚಿಕ್ಕ ಸಿಡಿಯ ಭುಜಕ್ಕೆ ಹಾನಿಯಾಗಿದೆ. ಮುರ್ಕಿ ಹಂದರಕಿ ರಾಜ್ಯ ಹೆದ್ದಾರಿ 122ರಲ್ಲಿ ಬರುವ ಗಣಾಪುರ ಬಳಿಯ ಸೇತುವೆ ಮಳೆ ನೀರಿನ ಪ್ರವಾಹದಲ್ಲಿ ಮುಳುಗಿದ್ದರಿಂದ ಹೆದ್ದಾರಿ ಸಂಚಾರ ಬಂದ್ ಆಗಿದೆ.</p>.<p>ಮಳೆ ನೀರು ರೈತರ ಹೊಲಗಳಿಗೆ ನುಗ್ಗಿ ನೂರಾರು ಎಕರೆ ಬೆಳೆ ನಾಶವಾಗಿದೆ. ಅನೇಕ ಕಡೆಗಳಲ್ಲಿ ಬದುಗಳು ಒಡೆದುಹೋಗಿವೆ. ತಗ್ಗು ಪ್ರದೇಶದ ಹೊಲಗಳು ಜಲಾವೃತ್ತವಾಗಿವೆ. ಮಳೆ ನೀರಿನಿಂದ ಮುಲ್ಲಾಮಾರಿನದಿಯಲ್ಲಿ ಪ್ರವಾಹ ಉಂಟಾಗಿದೆ.</p>.<p>ಚತ್ರಸಾಲ ಬಳಿ ರಾಜ್ಯ ಹೆದ್ದಾರಿ 122ರಲ್ಲಿ ಸೇತುವೆ ರಕ್ಷಣಾ ಗೋಡೆ ಹಾಗೂ ರಸ್ತೆಯ ಭುಜ ಹಾಳಾಗಿದೆ.</p>.<p>ಚಂದಾಪುರ ಆಶ್ರಯ ಕಾಲೋನಿ ನಿವಾಸಿಗಳಾದ ರಾಜಕುಮಾರ ಸಾಯಪ್ಪ, ವೆಂಕಟೇಶ್, ಶ್ರೀನಿವಾಸ, ಸಾಯಮ್ಮ ದಾಸರ, ಮಹಿಬೂಬಖಾನ್, ಮಹಿಬೂಬಿ ಇಬ್ರಾಹಿಂ, ಅಜಮೋದ್ದೀನ ಬಾಬುಮಿಯ್ಯ, ಮನೆಯಲ್ಲಿ ನೀರು ತುಂಬಿ ದಿನಸಿ ಪದಾರ್ಥಗಳು ಹಾಳಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>