<p><strong>ಚಿಂಚೋಳಿ</strong>: ತಾಲ್ಲೂಕಿನ ಒಂಟಿಚಿಂತಾ ಸಂಗಾಪುರ ಮಧ್ಯೆ ಬರುವ ಎತ್ತಿಪೋತೆ ಜಲಪಾತ ಮರು ಜೀವ ಪಡೆದುಕೊಂಡಿದ್ದು ಶುಕ್ರವಾರ ಸುರಿದ ಭಾರಿ ಮಳೆಗೆ ಮೈದುಂಬಿ ಹರಿಯುತ್ತಿದೆ.</p>.<p>ಜಲಪಾತದ ಮೇಲ್ಭಾಗದ ತೆಲಂಗಾಣದಲ್ಲಿ ಸುರಿದ ಮಳೆಯಿಂದ ಎತ್ತಿಪೋತೆ ನಾಲೆಗೆ ಪ್ರವಾಹ ಬಂದಿದೆ. ಇದರಿಂದ ಮೇಲಿಂದ ನೀರು ಬೀಳುವ ಎರಡು ತಾಣಗಳು ನಯನ ಮನೋಹರವಾಗಿ ಗೋಚರಿಸುತ್ತ ಪ್ರವಾಸಿಗರನ್ನು ಸೆಳೆಯುತ್ತಿವೆ.</p>.<p>ಕುಂಚಾವರಂ ಕಾಡಿನಲ್ಲಿ ಬರುವ ಚಿಂಚೋಳಿ ವನ್ಯಜೀವಿ ಧಾಮದ ಪ್ರಕೃತಿಯ ರಮಣೀಯ ತಾಣ ಸುವರ್ಣ ವರ್ಣದ ನೀರಿನಿಂದ ಕಂಗೊಳಿಸುತ್ತಿದೆ. ಇದರ ಜತೆಗೆ ತಾಲ್ಲೂಕಿನ ಕುಸ್ರಂಪಳ್ಳಿ ಗೊಟ್ಟಮಗೊಟ್ಟ ಮಧ್ಯೆ ಕಾಡಿನಲ್ಲಿ ರಾಚೇನಹಳ್ಳಿ ನಾಲಾ ಮೈದುಂಬಿ ಹರಿಯುತ್ತಿರುವುದರಿಂದ ಮಾಣಿಕಪುರ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ.</p>.<p>ಇಲ್ಲಿ ಮೂರು ಕಡೆಗಳಲ್ಲಿ ನೀರು ಮೇಲಿಂದ ಕೆಳಗೆ ಬೀಳುವ ದೃಶ್ಯ ಮನಸ್ಸಿಗೆ ಮುದ ನೀಡಲಿದೆ. ದಟ್ಟ ಕಾಡಿನ ಮಧ್ಯೆ ಇರುವ ಈ ಜಲಪಾತಕ್ಕೆ ಒಬ್ಬರೇ ಹೋಗುವುದು ಅಪಾಯಕಾರಿ ಜತೆಗೆ ಇದೇ ಕಾಡಿನಲ್ಲಿ ಚಿರತೆ ಗೋಚರಿಸಿದ್ದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಪರಿಸರ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.</p>.<p>ಮಹಾ ಮಳೆಯಿಂದ ಚಂದ್ರಪಳ್ಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ ಕೆಲವೇ ಗಂಟೆಗಳಲ್ಲಿ 2 ಮೀಟರ್ ನೀರು ಹರಿದು ಬಂದಿದೆ ಎಂದು ಸಿದ್ದಾರೂಢ ಹೊಕ್ಕುಂಡಿ ತಿಳಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ತಾಲ್ಲೂಕಿನ ಒಂಟಿಚಿಂತಾ ಸಂಗಾಪುರ ಮಧ್ಯೆ ಬರುವ ಎತ್ತಿಪೋತೆ ಜಲಪಾತ ಮರು ಜೀವ ಪಡೆದುಕೊಂಡಿದ್ದು ಶುಕ್ರವಾರ ಸುರಿದ ಭಾರಿ ಮಳೆಗೆ ಮೈದುಂಬಿ ಹರಿಯುತ್ತಿದೆ.</p>.<p>ಜಲಪಾತದ ಮೇಲ್ಭಾಗದ ತೆಲಂಗಾಣದಲ್ಲಿ ಸುರಿದ ಮಳೆಯಿಂದ ಎತ್ತಿಪೋತೆ ನಾಲೆಗೆ ಪ್ರವಾಹ ಬಂದಿದೆ. ಇದರಿಂದ ಮೇಲಿಂದ ನೀರು ಬೀಳುವ ಎರಡು ತಾಣಗಳು ನಯನ ಮನೋಹರವಾಗಿ ಗೋಚರಿಸುತ್ತ ಪ್ರವಾಸಿಗರನ್ನು ಸೆಳೆಯುತ್ತಿವೆ.</p>.<p>ಕುಂಚಾವರಂ ಕಾಡಿನಲ್ಲಿ ಬರುವ ಚಿಂಚೋಳಿ ವನ್ಯಜೀವಿ ಧಾಮದ ಪ್ರಕೃತಿಯ ರಮಣೀಯ ತಾಣ ಸುವರ್ಣ ವರ್ಣದ ನೀರಿನಿಂದ ಕಂಗೊಳಿಸುತ್ತಿದೆ. ಇದರ ಜತೆಗೆ ತಾಲ್ಲೂಕಿನ ಕುಸ್ರಂಪಳ್ಳಿ ಗೊಟ್ಟಮಗೊಟ್ಟ ಮಧ್ಯೆ ಕಾಡಿನಲ್ಲಿ ರಾಚೇನಹಳ್ಳಿ ನಾಲಾ ಮೈದುಂಬಿ ಹರಿಯುತ್ತಿರುವುದರಿಂದ ಮಾಣಿಕಪುರ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ.</p>.<p>ಇಲ್ಲಿ ಮೂರು ಕಡೆಗಳಲ್ಲಿ ನೀರು ಮೇಲಿಂದ ಕೆಳಗೆ ಬೀಳುವ ದೃಶ್ಯ ಮನಸ್ಸಿಗೆ ಮುದ ನೀಡಲಿದೆ. ದಟ್ಟ ಕಾಡಿನ ಮಧ್ಯೆ ಇರುವ ಈ ಜಲಪಾತಕ್ಕೆ ಒಬ್ಬರೇ ಹೋಗುವುದು ಅಪಾಯಕಾರಿ ಜತೆಗೆ ಇದೇ ಕಾಡಿನಲ್ಲಿ ಚಿರತೆ ಗೋಚರಿಸಿದ್ದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಪರಿಸರ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.</p>.<p>ಮಹಾ ಮಳೆಯಿಂದ ಚಂದ್ರಪಳ್ಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ ಕೆಲವೇ ಗಂಟೆಗಳಲ್ಲಿ 2 ಮೀಟರ್ ನೀರು ಹರಿದು ಬಂದಿದೆ ಎಂದು ಸಿದ್ದಾರೂಢ ಹೊಕ್ಕುಂಡಿ ತಿಳಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>