ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಕೌಂಟರ್ ಬಗ್ಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ: ಸಂಸದ ಜಾಧವ

ಸಂತ್ರಸ್ತೆ ಕುಟುಂಬಕ್ಕೆ ಸಂಸದ, ಶಾಸಕರಿಂದ ಸಾಂತ್ವನ
Last Updated 7 ಡಿಸೆಂಬರ್ 2019, 10:05 IST
ಅಕ್ಷರ ಗಾತ್ರ

ಚಿಂಚೋಳಿ: ‘ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ್ದಕ್ಕೆ ಇಡೀ ದೇಶವೇ ಸಂಭ್ರಮಿಸುತ್ತಿದೆ’ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದರು.

ತಾಲ್ಲೂಕಿನ ಯಾಕಾಪುರಕ್ಕೆ ಭೇಟಿ ನೀಡಿ ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಕುಟುಂಬದವರಿಗೆ
ಸಾಂತ್ವನ ಹೇಳಿ ಮಾತನಾಡಿದರು.

‘ಯಾಕಾಪುರ ಘಟನೆ ಅತ್ಯಂತ ಹೇಯಕೃತ್ಯ. ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು’ ಎಂದರು. ಸಂತ್ರಸ್ತೆ ಕುಟುಂಬಕ್ಕೆ ವೈಯಕ್ತಿಕ ನೆರವು ನೀಡಿದರು.

ಶಾಸಕ ಡಾ.ಅವಿನಾಶ ಜಾಧವ, ಬಿಜೆಪಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ, ಉಪಾಧ್ಯಕ್ಷ ಶ್ರೀಮಂತ ಕಟ್ಟಿಮನಿ, ಹಿರಿಯ ಮುಖಂಡರಾದ ಶರಣಪ್ ತಳವಾರ, ಚಂದ್ರಶೇಖರ ಗುತ್ತೇದಾರ, ತಾ.ಪಂ. ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಬಸವರಾಜ ಬಿರಾದಾರ, ಬಿಜೆಪಿ ಮುಖಂಡರಾದ ಶಿವಕುಮಾರ ನಿಂಗದಳ್ಳಿ, ಚಂದ್ರಶೆಟ್ಟಿ ಜಾಧವ, ಲಕ್ಷ್ಮಣ ಆವುಂಟಿ, ಅಬ್ದುಲ್‌ ವಾಹಬ್, ಬುರಾನ್‌ ಪಟೇಲ್‌ ದಸ್ತಾಪುರ, ಪ್ರೇಮಸಿಂಗ್‌ ಜಾಧವ್, ಅಶೋಕ ಚವ್ಹಾಣ, ರಾಜಕುಮಾರ ಪವಾರ ಇದ್ದರು.

ಇಲಿಯಾಸ ಬಾಗವಾನ ಸಾಂತ್ವನ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಇಲಿಯಾಸ
ಬಾಗವಾನ ಯಾಕಾಪುರಕ್ಕೆ ಭೇಟಿ ನೀಡಿ ಸಂತ್ರಸ್ತೆ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT