<p><strong>ಕಲಬುರಗಿ:</strong> ಸಾಂಘಿಕ ಪ್ರದರ್ಶನ ನೀಡಿದ ಕುಡ್ಲ ಚಾಲೆಂಜರ್ಸ್ ತಂಡವು ಕರಾವಳಿ ಪ್ರೀಮಿಯರ್ ಲೀಗ್(ಕೆಪಿಎಲ್) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಕೃಷ್ಣಾ (17 ರನ್), ದಿವಾಕರ್(18 ರನ್), ಯತೀಶ್(11 ರನ್) ಹಾಗೂ ರಾಘವೇಂದ್ರ ಸಾಲಿಯಾನ್ (12ಕ್ಕೆ3) ಉತ್ತಮ ಆಟದ ಬಲದಿಂದ 35 ರನ್ಗಳಿಂದ ಕುಂದಾಪುರ ವಾರಿಯರ್ಸ್ ತಂಡದ ವಿರುದ್ಧ ಗೆಲುವಿನ ನಗೆ ಬೀರಿತು.</p>.<p>ಗಣೇಶೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಸಂಘದಿಂದ ನಗರದ ಎನ್.ವಿ. ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕುಡ್ಲ ತಂಡವು, 8 ಓವರ್ಗಳಲ್ಲಿ 6 ವಿಕೆಟ್ಗಳಿಗೆ 77 ರನ್ಗಳಿಸಿತು.</p>.<p>ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಕುಂದಾಪುರ ತಂಡವು ನಿಗದಿತ 8 ಓವರ್ಗಳಲ್ಲಿ ಕೇವಲ 42 ರನ್ ಮಾತ್ರವೇ ಗಳಿಸಿತು. ತಂಡದ ಯಾವೊಬ್ಬ ಆಟಗಾರರು ಎರಡಂಕಿ ಮೊತ್ತ ಗಳಿಸಲಿಲ್ಲ.</p>.<p>ಟೂರ್ನಿಯಲ್ಲಿ ಕುಡ್ಲ ಚಾಲೆಂಜರ್ಸ್, ಉಡುಪಿ ಸೂಪರ್ ಕಿಂಗ್ಸ್, ಕುಂದಾಪುರ ವಾರಿಯರ್ಸ್, ಕಲಬುರಗಿ ಟೈಟನ್ಸ್ ತಂಡಗಳು ಪಾಲ್ಗೊಂಡಿದ್ದವು.</p>.<p>ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ, ಶಿವಾನಂದ ಹುನಗಂಟಿ, ಮಹಾಕೀರ್ತಿ ಶೆಟ್ಟಿ, ಸುನೀಲ್ ಶೆಟ್ಟಿ, ಸತ್ಯನಾಥ್ ಶೆಟ್ಟಿ, ಅರುಣಾಚಲ್ ಭಟ್, ಸುದರ್ಶನ್ ಜತ್ತನ್, ಕಿರಣ್ ಜತ್ತನ್, ನರಸಿಂಹ ಮೆಂಡನ್, ರಾಜೇಂದ್ರ ಉಪಾಧ್ಯಾಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಸಾಂಘಿಕ ಪ್ರದರ್ಶನ ನೀಡಿದ ಕುಡ್ಲ ಚಾಲೆಂಜರ್ಸ್ ತಂಡವು ಕರಾವಳಿ ಪ್ರೀಮಿಯರ್ ಲೀಗ್(ಕೆಪಿಎಲ್) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಕೃಷ್ಣಾ (17 ರನ್), ದಿವಾಕರ್(18 ರನ್), ಯತೀಶ್(11 ರನ್) ಹಾಗೂ ರಾಘವೇಂದ್ರ ಸಾಲಿಯಾನ್ (12ಕ್ಕೆ3) ಉತ್ತಮ ಆಟದ ಬಲದಿಂದ 35 ರನ್ಗಳಿಂದ ಕುಂದಾಪುರ ವಾರಿಯರ್ಸ್ ತಂಡದ ವಿರುದ್ಧ ಗೆಲುವಿನ ನಗೆ ಬೀರಿತು.</p>.<p>ಗಣೇಶೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಸಂಘದಿಂದ ನಗರದ ಎನ್.ವಿ. ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕುಡ್ಲ ತಂಡವು, 8 ಓವರ್ಗಳಲ್ಲಿ 6 ವಿಕೆಟ್ಗಳಿಗೆ 77 ರನ್ಗಳಿಸಿತು.</p>.<p>ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಕುಂದಾಪುರ ತಂಡವು ನಿಗದಿತ 8 ಓವರ್ಗಳಲ್ಲಿ ಕೇವಲ 42 ರನ್ ಮಾತ್ರವೇ ಗಳಿಸಿತು. ತಂಡದ ಯಾವೊಬ್ಬ ಆಟಗಾರರು ಎರಡಂಕಿ ಮೊತ್ತ ಗಳಿಸಲಿಲ್ಲ.</p>.<p>ಟೂರ್ನಿಯಲ್ಲಿ ಕುಡ್ಲ ಚಾಲೆಂಜರ್ಸ್, ಉಡುಪಿ ಸೂಪರ್ ಕಿಂಗ್ಸ್, ಕುಂದಾಪುರ ವಾರಿಯರ್ಸ್, ಕಲಬುರಗಿ ಟೈಟನ್ಸ್ ತಂಡಗಳು ಪಾಲ್ಗೊಂಡಿದ್ದವು.</p>.<p>ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ, ಶಿವಾನಂದ ಹುನಗಂಟಿ, ಮಹಾಕೀರ್ತಿ ಶೆಟ್ಟಿ, ಸುನೀಲ್ ಶೆಟ್ಟಿ, ಸತ್ಯನಾಥ್ ಶೆಟ್ಟಿ, ಅರುಣಾಚಲ್ ಭಟ್, ಸುದರ್ಶನ್ ಜತ್ತನ್, ಕಿರಣ್ ಜತ್ತನ್, ನರಸಿಂಹ ಮೆಂಡನ್, ರಾಜೇಂದ್ರ ಉಪಾಧ್ಯಾಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>