ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜು, ‘ಜೆಸ್ಕಾಂನಲ್ಲಿ ಶುಚಿಗಾರರಾಗಿ ಕೆಲಸ ಮಾಡುತ್ತಿದ್ದ ತಂದೆ ಬಸವರಾಜ ಅವರು 2005ರಲ್ಲಿ ಮೃತಪಟ್ಟರು. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕೆಂದು ಜೆಸ್ಕಾಂಗೆ ಎಲ್ಲಾ ದಾಖಲಾತಿಗಳನ್ನು ನೀಡಲಾಗಿದೆ. ಅನುಕಂಪದ ನೌಕರಿ ನೀಡುವ ಬಗೆಗಿನ ನ್ಯಾಯಾಲಯದ ಆದೇಶದ ಪ್ರತಿಯನ್ನು ಸಲ್ಲಿಸಲಾಗಿದೆ. ಒಂದು ವಾರದೊಳಗೆ ನೌಕರಿಯ ಆದೇಶ ನೀಡಲಾಗುವುದು ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ತಿಳಿಸಿದ್ದರು. ಆ ನಂತರ ಈ ಬಗ್ಗೆ ಕೇಳಲು ಹೋದರೆ ಅವರ ಆಪ್ತ ಸಹಾಯಕರು ಒಳಗೇ ಬಿಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.