ಎಸಿಬಿ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಗೌರೀಶ ಕಾಶೆಂಪೂರ, ‘ಆರೋಪಿ ಹಿರಿಯ ಕೆೆಎಎಸ್ ಅಧಿಕಾರಿಯಾಗಿದ್ದರಿಂದ ಉತ್ತಮ ಸಂಬಳ, ಸವಲತ್ತು ಪಡೆಯುತ್ತಿದ್ದರು. ಆದರೂ, ಕೋವಿಡ್ ಕೆಲಸ ಮಾಡಿದ್ದಕ್ಕೆ ಕೊಡಬೇಕಿದ್ದ ಹಣದಲ್ಲೂ ಲಂಚಕ್ಕಾಗಿ ಕೈಚಾಚಿದ್ದಾರೆ. ಅಲ್ಲದೇ, ಅನಾರೋಗ್ಯದ ಕಾರಣ ನೀಡಿ ಬಹುತೇಕ ದಿನಗಳನ್ನು ಆಸ್ಪತ್ರೆಯಲ್ಲೇ ಕಳೆದಿದ್ದಾರೆ. ಜಾಮೀನು ನೀಡಿದರೆ ತನಿಖೆಗೆ ಸಹಕರಿಸದಿರುವ ಸಾಧ್ಯತೆ ಇದೆ’ ಎಂದು ವಾದ ಮಂಡಿಸಿದರು.