ಮುಂಬೈನಿಂದ ಬಂದಿದ್ದ ಸೋಮನಾಥನನ್ನು ಆಶಾ ಕಾರ್ಯಕರ್ತೆ ನೀಡಿದ ಮಾಹಿತಿ ಮೇರೆಗೆ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ನಲ್ಲಿರಿಸಲಾಗಿತ್ತು. ಆಶಾ ಕಾರ್ಯಕರ್ತೆಯನ್ನು ಕರೆದ ಸೋಮನಾಥ, ‘ಊಟಕ್ಕೆ ಚಿಕನ್, ಮೀನು ತರಿಸಿಕೊಡಬೇಕು. ಮಕ್ಕಳಿಗೆ ಚಿಪ್ಸ್ ಕೊಡಿಸಬೇಕು’ ಎಂದು ಕೇಳಿದ್ದಾನೆ. ‘ಇವುಗಳನ್ನು ಪೂರೈಸುವ ಅಧಿಕಾರ ನನಗಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದ್ದಕ್ಕೆ ಸಿಟ್ಟಾದ ಸೋಮನಾಥ ಏಕಾಏಕಿ ಕೈ ತಿರುವಿ ಹಲ್ಲೆ ಮಾಡಿದ್ದಾನೆ. ಸೋಮನಾಥ ಪತ್ನಿ ಸುಧಾರಾಣಿ, ಸಂಬಂಧಿಗಳಾದ ಸುಶೀಲಾಬಾಯಿ, ಲಕ್ಷ್ಮಣ ಅವರೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರೇಣುಕಾ ಅವರು ದೂರಿನಲ್ಲಿ ತಿಳಿಸಿದ್ದಾರೆ.