ಕೋವಿಡ್ ಲ್ಯಾಬ್ ಆರಂಭ ಕುರಿತು ಹೇಳಿಕೆ ನೀಡಿರುವ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಸಾರ್ವಜನಿಕರಿಗಾಗಿ ಆರ್.ಟಿ.ಪಿ.ಸಿ.ಆರ್. ಮತ್ತು ರ್ಯಾಪಿಡ್ ಆಂಟಿಜೆನ್ ಟೆಸ್ಟಿಂಗ್ ಆರಂಭಿಸಲಾಗುವುದು ಈ ತಪಾಸಣೆಯ ವರದಿಯನ್ನು ಕೇವಲ 5 ಗಂಟೆಗಳಲ್ಲಿ ನೀಡಲಾಗುವುದು. ಕೋವಿಡ್ ವೈರಾಣುದೊಂದಿಗೆ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ನರ್ಸ್, ಆಯಾ ಮತ್ತು ಇತರ ಸಿಬ್ಬಂದಿಗೆ ಪ್ರೋತ್ಸಾಹಕರ ಭತ್ಯೆಯಾಗಿ ₹ 50 ಸಾವಿರವರೆಗಿನ ಔಷಧಗಳನ್ನು ಮತ್ತು ಚಿಕಿತ್ಸೆಯನ್ನು ಒದಗಿಸಲಾಗುವುದು ಮತ್ತು ವೈದ್ಯರ ಮನೋಬಲ ತುಂಬಲು ಸುಮಾರು 80 ಕೊರೊನಾ ವಾರಿಯರ್ಸ್ ವೈದ್ಯರಿಗೆ ಬಡ್ತಿಯನ್ನು ನೀಡಲಾಗಿದೆ ಎಂದಿದ್ದಾರೆ.