<p><strong>ಕಲಬುರ್ಗಿ: </strong>‘ಯಾವ ಮೂಲಸೌಕರ್ಯವೂ ಇಲ್ಲದ ಕೋವಿಡ್ ಐಸೊಲೇಶನ್ ಕೇಂದ್ರದಲ್ಲಿ ನಾಯಿಯೂ ಇರುವುದಿಲ್ಲ. ಇಲ್ಲಿಯೇ ಇನ್ನಷ್ಟು ದಿನ ಇದ್ದರೆ ಜೀವಂತ ಶವ ಆಗ್ತೀನಿ’ ಎಂದು ಫರಹತಾಬಾದ್ ಪೊಲೀಸ್ ಠಾಣೆಯ ಕೋವಿಡ್ ಸೋಂಕಿತ ಕಾನ್ಸ್ಟೆಬಲ್ ಒಬ್ಬರು ಹಿರಿಯ ಅಧಿಕಾರಿಗಳಿಗೆ ಆಡಿಯೊ ರೆಕಾರ್ಡಿಂಗ್ ಹಾಗೂ ವಿಡಿಯೊ ಕಳಿಸಿದ್ದಾರೆ.</p>.<p>ಕಮಿಷನರೇಟ್ ವ್ಯಾಪ್ತಿಯ ಪ್ರದೇಶದ ಎಲ್ಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಿಸಲಾಗಿದ್ದು, ಅದರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟ ಈ ಕಾನ್ಸ್ಟೆಬಲ್ರನ್ನು ಐಸೋಲೇಶನ್ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿ ಬೆಡ್ ಶೀಟ್, ತಲೆದಿಂಬು, ಕುಡಿಯುವ ನೀರಿನಂತಹ ಮೂಲಸೌಕರ್ಯಗಳು ಇರಲಿಲ್ಲ ಎಂದು ದೂರಿದ್ದಾರೆ.</p>.<p>ಇದಕ್ಕೆ ಹೇಳಿಕೆ ನೀಡಿರುವ ಪೊಲೀಸ್ ಕಮಿಷನರ್ ಸತೀಶಕುಮಾರ್ ಎನ್, ಆಂಬುಲೆನ್ಸ್ ಚಾಲಕ ಪೊಲೀಸರಿಗಾಗಿ ಕಾಯ್ದಿರಿಸಿರುವ ಐಸೋಲೇಶನ್ ಕೇಂದ್ರಕ್ಕೆ ಕರೆದೊಯ್ಯುವ ಬದಲು ಬೇರೆ ಕೇಂದ್ರಕ್ಕೆ ಕರೆದೊಯ್ದಿದ್ದರಿಂದ ಈ ಅವಾಂತರವಾಗಿದೆ. ನಂತರ ಕಾನ್ಸ್ಟೆಬಲ್ ಗಾಬರಿಯಾಗಿ ಸಂದೇಶ ಕಳಿಸಿದರು.</p>.<p>ಒಂದೇ ಗಂಟೆಯಲ್ಲಿ ಅವರನ್ನು ಪೊಲೀಸರಿಗಾಗಿ ನಿಗದಿಪಡಿಸಿದ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಕುಡಿಯುವ ನೀರಿನ ಬಾಟಲಿ, ಸ್ಟೀಲ್ ಪ್ಲೇಟ್, ಟೂತ್ ಬ್ರಷ್, ಪೇಸ್ಟ್, 2 ಟವೆಲ್, ಬೆಡ್ ಶೀಟ್, 12 ಬ್ರೂ ಪ್ಯಾಕೆಟ್, ಅರ್ಧ ಕೆ.ಜಿ. ಹಾಲಿನ ಪೌಡರ್, ಅರ್ಧ ಕೆ.ಜಿ. ಸಕ್ಕರೆ, ಬಕೆಟ್, ಮಗ್, ಬಿಸಿ ನೀರು, ವೈಫೈ ಕನೆಕ್ಷನ್, ಮಾಸ್ಕ್, ಸ್ಯಾನಿಟೈಜರ್ ನೀಡಲಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>‘ಯಾವ ಮೂಲಸೌಕರ್ಯವೂ ಇಲ್ಲದ ಕೋವಿಡ್ ಐಸೊಲೇಶನ್ ಕೇಂದ್ರದಲ್ಲಿ ನಾಯಿಯೂ ಇರುವುದಿಲ್ಲ. ಇಲ್ಲಿಯೇ ಇನ್ನಷ್ಟು ದಿನ ಇದ್ದರೆ ಜೀವಂತ ಶವ ಆಗ್ತೀನಿ’ ಎಂದು ಫರಹತಾಬಾದ್ ಪೊಲೀಸ್ ಠಾಣೆಯ ಕೋವಿಡ್ ಸೋಂಕಿತ ಕಾನ್ಸ್ಟೆಬಲ್ ಒಬ್ಬರು ಹಿರಿಯ ಅಧಿಕಾರಿಗಳಿಗೆ ಆಡಿಯೊ ರೆಕಾರ್ಡಿಂಗ್ ಹಾಗೂ ವಿಡಿಯೊ ಕಳಿಸಿದ್ದಾರೆ.</p>.<p>ಕಮಿಷನರೇಟ್ ವ್ಯಾಪ್ತಿಯ ಪ್ರದೇಶದ ಎಲ್ಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಿಸಲಾಗಿದ್ದು, ಅದರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟ ಈ ಕಾನ್ಸ್ಟೆಬಲ್ರನ್ನು ಐಸೋಲೇಶನ್ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿ ಬೆಡ್ ಶೀಟ್, ತಲೆದಿಂಬು, ಕುಡಿಯುವ ನೀರಿನಂತಹ ಮೂಲಸೌಕರ್ಯಗಳು ಇರಲಿಲ್ಲ ಎಂದು ದೂರಿದ್ದಾರೆ.</p>.<p>ಇದಕ್ಕೆ ಹೇಳಿಕೆ ನೀಡಿರುವ ಪೊಲೀಸ್ ಕಮಿಷನರ್ ಸತೀಶಕುಮಾರ್ ಎನ್, ಆಂಬುಲೆನ್ಸ್ ಚಾಲಕ ಪೊಲೀಸರಿಗಾಗಿ ಕಾಯ್ದಿರಿಸಿರುವ ಐಸೋಲೇಶನ್ ಕೇಂದ್ರಕ್ಕೆ ಕರೆದೊಯ್ಯುವ ಬದಲು ಬೇರೆ ಕೇಂದ್ರಕ್ಕೆ ಕರೆದೊಯ್ದಿದ್ದರಿಂದ ಈ ಅವಾಂತರವಾಗಿದೆ. ನಂತರ ಕಾನ್ಸ್ಟೆಬಲ್ ಗಾಬರಿಯಾಗಿ ಸಂದೇಶ ಕಳಿಸಿದರು.</p>.<p>ಒಂದೇ ಗಂಟೆಯಲ್ಲಿ ಅವರನ್ನು ಪೊಲೀಸರಿಗಾಗಿ ನಿಗದಿಪಡಿಸಿದ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಕುಡಿಯುವ ನೀರಿನ ಬಾಟಲಿ, ಸ್ಟೀಲ್ ಪ್ಲೇಟ್, ಟೂತ್ ಬ್ರಷ್, ಪೇಸ್ಟ್, 2 ಟವೆಲ್, ಬೆಡ್ ಶೀಟ್, 12 ಬ್ರೂ ಪ್ಯಾಕೆಟ್, ಅರ್ಧ ಕೆ.ಜಿ. ಹಾಲಿನ ಪೌಡರ್, ಅರ್ಧ ಕೆ.ಜಿ. ಸಕ್ಕರೆ, ಬಕೆಟ್, ಮಗ್, ಬಿಸಿ ನೀರು, ವೈಫೈ ಕನೆಕ್ಷನ್, ಮಾಸ್ಕ್, ಸ್ಯಾನಿಟೈಜರ್ ನೀಡಲಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>