<p>ಕಲಬುರ್ಗಿ: ತಾಲ್ಲೂಕಿನ ಕರೆಬೋಸಗಾ ಗ್ರಾಮದಲ್ಲಿ ಈಚೆಗೆ ನಡೆದ ಮಹೇಶ ಚಿಡುಗುಂಪಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಇಲ್ಲಿನ ರಾಮನಗರದ ಮಲ್ಲಿಕಾರ್ಜುನ ಅಲ್ಲಾಪುರ ಅಲಿಯಾಸ್ ಕೋಳಿ ಮಲ್ಲು, ಹುಸೇನಿ ನಗರದ ಮಹ್ಮದಚಾಂದ್ ಭಾಗವಾನ್, ನಿಜಾಮ ಭಾರಿಯಾ, ಶೇಖರೋಜಾದ ಡೆಕ್ಕನ್ ಕಾಲೊನಿಯ ಆಸೀಫ್ ಸಲೀಂ ಅಹ್ಮದ್ ಮತ್ತು ದೇವಿ ನಗರದ ಕಿರಣ ಠಾಕೂರ ಬಂಧಿತರು. ಇವರಿಂದ ಕೊಲೆಗೆ ಬಳಸಿದ ಮಾಕರಾಸ್ತ್ರ ಹಾಗೂ ಶವ ಸಾಗಿಸಿದ ಆಟೊ ವಶಕ್ಕೆ ಪಡೆಯಲಾಗಿದೆ.</p>.<p>ಕೊಲೆಗೀಡಾದಮಹೇಶ ಚಿಡುಗುಂಪಿ ಅಲಿಯಾಸ್ ಡಾಲರ್ ಮಹೇಶ ಎಂ.ಒ.ಬಿ ಪಟ್ಟಿಯಲ್ಲಿದ್ದ. ಕೆಲ ವರ್ಷಗಳ ಹಿಂದೆತಾಜಸುಲ್ತಾನಪುರ ಗ್ರಾಮದಿಂದ ನಗರದ ಗಾಜಿಪುರದಲ್ಲಿ ವಾಸವಾಗಿದ್ದ. ಕಳವು ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಮಹೇಶ ಈಚೆಗಷ್ಟೇ ಬಿಡುಗಡೆಯಾಗಿ ಬಂದಿದ್ದ.</p>.<p>ಮಹೇಶ ಹಾಗೂ ಕೊಲೆ ಆರೋಪಿಗಳ ಮಧ್ಯೆ ಹಣಕಾಸಿನ ವ್ಯವಹಾರಕ್ಕಾಗಿ ಹಿಂದೆ ಜಗಳಗಳು ನಡೆದಿದ್ದವು. ಇದೇ ವೈಷಮ್ಯಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸುಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಜೆ.ಎಚ್.ಇನಾಮದಾರ, ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಭಾಸು ಚವ್ಹಾಣ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರ್ಗಿ: ತಾಲ್ಲೂಕಿನ ಕರೆಬೋಸಗಾ ಗ್ರಾಮದಲ್ಲಿ ಈಚೆಗೆ ನಡೆದ ಮಹೇಶ ಚಿಡುಗುಂಪಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಇಲ್ಲಿನ ರಾಮನಗರದ ಮಲ್ಲಿಕಾರ್ಜುನ ಅಲ್ಲಾಪುರ ಅಲಿಯಾಸ್ ಕೋಳಿ ಮಲ್ಲು, ಹುಸೇನಿ ನಗರದ ಮಹ್ಮದಚಾಂದ್ ಭಾಗವಾನ್, ನಿಜಾಮ ಭಾರಿಯಾ, ಶೇಖರೋಜಾದ ಡೆಕ್ಕನ್ ಕಾಲೊನಿಯ ಆಸೀಫ್ ಸಲೀಂ ಅಹ್ಮದ್ ಮತ್ತು ದೇವಿ ನಗರದ ಕಿರಣ ಠಾಕೂರ ಬಂಧಿತರು. ಇವರಿಂದ ಕೊಲೆಗೆ ಬಳಸಿದ ಮಾಕರಾಸ್ತ್ರ ಹಾಗೂ ಶವ ಸಾಗಿಸಿದ ಆಟೊ ವಶಕ್ಕೆ ಪಡೆಯಲಾಗಿದೆ.</p>.<p>ಕೊಲೆಗೀಡಾದಮಹೇಶ ಚಿಡುಗುಂಪಿ ಅಲಿಯಾಸ್ ಡಾಲರ್ ಮಹೇಶ ಎಂ.ಒ.ಬಿ ಪಟ್ಟಿಯಲ್ಲಿದ್ದ. ಕೆಲ ವರ್ಷಗಳ ಹಿಂದೆತಾಜಸುಲ್ತಾನಪುರ ಗ್ರಾಮದಿಂದ ನಗರದ ಗಾಜಿಪುರದಲ್ಲಿ ವಾಸವಾಗಿದ್ದ. ಕಳವು ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಮಹೇಶ ಈಚೆಗಷ್ಟೇ ಬಿಡುಗಡೆಯಾಗಿ ಬಂದಿದ್ದ.</p>.<p>ಮಹೇಶ ಹಾಗೂ ಕೊಲೆ ಆರೋಪಿಗಳ ಮಧ್ಯೆ ಹಣಕಾಸಿನ ವ್ಯವಹಾರಕ್ಕಾಗಿ ಹಿಂದೆ ಜಗಳಗಳು ನಡೆದಿದ್ದವು. ಇದೇ ವೈಷಮ್ಯಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸುಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಜೆ.ಎಚ್.ಇನಾಮದಾರ, ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಭಾಸು ಚವ್ಹಾಣ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>