<p><strong>ಕಲಬುರಗಿ:</strong> ‘ಸೈಬರ್ ಭದ್ರತೆ ಅತ್ಯಗತ್ಯ. ಬೌದ್ಧಿಕ ಆಸ್ತಿಯ ಸುರಕ್ಷತೆಗಾಗಿ ಪ್ರತಿಯೊಬ್ಬರೂ ಅದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅನುಸರಿಸಬೇಕು’ ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.</p>.<p>ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಭದ್ರತಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಈ ತರಬೇತಿ ಕಾರ್ಯಕ್ರಮವು ಮಾಲ್ವೇರ್, ರಾನ್ಸಮ್ವೇರ್, ಫಿಶಿಂಗ್ ದಾಳಿಗಳು ಮತ್ತು ಡಿಜಿಟಲ್ ಸ್ವತ್ತುಗಳನ್ನು ಗುರಿಯಾಗಿಸುವ ಇತರ ದುರುದ್ದೇಶಪೂರಿತ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ’ ಎಂದರು.</p>.<p>ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ‘ಸೈಬರ್ ಭದ್ರತೆ ನಿಖರವಾದ ಡೇಟಾವನ್ನು ಖಚಿತಪಡಿಸುತ್ತದೆ ಮತ್ತು ಯಾವುದೇ ವ್ಯಕ್ತಿಯ ಸೂಕ್ಷ್ಮ ಮಾಹಿತಿ ತಿರುಚುವುದನ್ನು ತಪ್ಪಿಸುತ್ತದೆ’ ಎಂದರು.</p>.<p>ಎನ್ಐಐಟಿ ಫೌಂಡೇಶನ್ ಪ್ರಾದೇಶಿಕ ವ್ಯವಸ್ಥಾಪಕ ನೀಲೇಶ್ ಖನ್ನಾ ಮಾತನಾಡಿ, ‘ಸೈಬರ್ ಭದ್ರತೆಯ ಸಹಾಯದಿಂದ ವೈಯಕ್ತಿಕ ಡೇಟಾವನ್ನು ರಕ್ಷಿಸಬಹುದು’ ಎಂದು ಹೇಳಿದರು.</p>.<p>ಪ್ರೊ.ಎ.ಎನ್. ವಿಜಯಕುಮಾರ್ ಹಾಜರಿದ್ದರು. ನೋಡಲ್ ಅಧಿಕಾರಿ ಪ್ರೊ.ಆರ್.ಎಸ್. ಹೆಗಾಡಿ ಸ್ವಾಗತಿಸಿದರು. ಐಕ್ಯೂಎಸಿ ನಿರ್ದೇಶಕ ಅಮರೇಂದ್ರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಸೈಬರ್ ಭದ್ರತೆ ಅತ್ಯಗತ್ಯ. ಬೌದ್ಧಿಕ ಆಸ್ತಿಯ ಸುರಕ್ಷತೆಗಾಗಿ ಪ್ರತಿಯೊಬ್ಬರೂ ಅದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅನುಸರಿಸಬೇಕು’ ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.</p>.<p>ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಭದ್ರತಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಈ ತರಬೇತಿ ಕಾರ್ಯಕ್ರಮವು ಮಾಲ್ವೇರ್, ರಾನ್ಸಮ್ವೇರ್, ಫಿಶಿಂಗ್ ದಾಳಿಗಳು ಮತ್ತು ಡಿಜಿಟಲ್ ಸ್ವತ್ತುಗಳನ್ನು ಗುರಿಯಾಗಿಸುವ ಇತರ ದುರುದ್ದೇಶಪೂರಿತ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ’ ಎಂದರು.</p>.<p>ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ‘ಸೈಬರ್ ಭದ್ರತೆ ನಿಖರವಾದ ಡೇಟಾವನ್ನು ಖಚಿತಪಡಿಸುತ್ತದೆ ಮತ್ತು ಯಾವುದೇ ವ್ಯಕ್ತಿಯ ಸೂಕ್ಷ್ಮ ಮಾಹಿತಿ ತಿರುಚುವುದನ್ನು ತಪ್ಪಿಸುತ್ತದೆ’ ಎಂದರು.</p>.<p>ಎನ್ಐಐಟಿ ಫೌಂಡೇಶನ್ ಪ್ರಾದೇಶಿಕ ವ್ಯವಸ್ಥಾಪಕ ನೀಲೇಶ್ ಖನ್ನಾ ಮಾತನಾಡಿ, ‘ಸೈಬರ್ ಭದ್ರತೆಯ ಸಹಾಯದಿಂದ ವೈಯಕ್ತಿಕ ಡೇಟಾವನ್ನು ರಕ್ಷಿಸಬಹುದು’ ಎಂದು ಹೇಳಿದರು.</p>.<p>ಪ್ರೊ.ಎ.ಎನ್. ವಿಜಯಕುಮಾರ್ ಹಾಜರಿದ್ದರು. ನೋಡಲ್ ಅಧಿಕಾರಿ ಪ್ರೊ.ಆರ್.ಎಸ್. ಹೆಗಾಡಿ ಸ್ವಾಗತಿಸಿದರು. ಐಕ್ಯೂಎಸಿ ನಿರ್ದೇಶಕ ಅಮರೇಂದ್ರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>