<p><strong>ಕಲಬುರಗಿ (ಡಾ.ಶರಣಬಸವಪ್ಪ ಅಪ್ಪ ವೇದಿಕೆ):</strong> ‘ಕನ್ನಡ ಸಾಹಿತ್ಯವನ್ನು ಜಗತ್ತಿನಾದ್ಯಂತ ಪಸರಿಸಲು ತಾಂತ್ರಿಕತೆ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ದ್ರಾಕ್ಷಾಯಣಿ ಎಸ್.ಅಪ್ಪ ಪ್ರತಿಪಾದಿಸಿದರು.</p>.<p>ನಗರದ ಕನ್ನಡ ಭವನದ ಆವರಣದ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರ ಅವರು ಮಾತನಾಡಿದರು.</p>.<p>‘ಕನ್ನಡ ಭಾಷೆ ಮತ್ತು ಸಾಹಿತ್ಯವು ಕೇವಲ ಹಳ್ಳಿಗಳಿಗೆ ಸೀಮಿತವಾಗಬಾರದು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕನ್ನಡ ಸಾಹಿತ್ಯವು ವಿಶ್ವಮಟ್ಟಕ್ಕೆ ತಲುಪುವಂತಾಗಬೇಕು. ವೈದ್ಯರು, ಎಂಜಿನಿಯರ್ಗಳು ಸೇರಿದಂತೆ ಪ್ರತಿಯೊಬ್ಬ ವಿದ್ಯಾವಂತ ಕನ್ನಡಿಗರು ತಮ್ಮ ವೃತ್ತಿಯ ಜೊತೆಗೆ ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಹಳೆಯ ಬೇರು, ಹೊಸ ಚಿಗುರು ಎನ್ನುವಂತೆ ಹಿರಿಯ ಸಾಹಿತಿಗಳ ಅನುಭವದೊಂದಿಗೆ ಯುವಕರನ್ನು ಪ್ರೋತ್ಸಾಹಿಸಿ ಕನ್ನಡವನ್ನು ಬೆಳೆಸಬೇಕಿದೆ. ಶರಣರ ಸಾಹಿತ್ಯ ಮಾರ್ಗ ನಮಗೆ ಎಂದಿಗೂ ಆದರ್ಶವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕೇವಲ ಚರ್ಚೆಗೆ ಸೀಮಿತವಾಗದೆ ಕ್ರಿಯಾತ್ಮಕವಾಗಿರಬೇಕು. ರೈತರು, ಕಾರ್ಮಿಕರು, ನಿರ್ಗತಿಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಕೆಲಸ ಮಾಡಬೇಕು’ ಎಂದರು.</p>.<p>ದೊಡ್ಡಪ್ಪ ಅಪ್ಪ, ಶರಣಬಸಪ್ಪ ಅಪ್ಪ ಅವರ ಕನ್ನಡದ ಮೇಲಿನ ಅಗಣಿತ ಪ್ರೀತಿ ಹಾಗೂ ಕನ್ನಡ ನಾಡು ಕಟ್ಟುವಲ್ಲಿ ಅವರು ನೀಡಿದ ಕೊಡುಗೆಯನ್ನೂ ಇದೇ ವೇಳೆ ಅವರು ಸ್ಮರಿಸಿದರು.</p>.<p>ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಮರೇಶ್ವರಿ ಚಿಂಚನಸೂರ, ಜಿಲ್ಲಾ ಸರ್ಕಾರಿ ನೌಕರ ಸಂಘದ ರಾಜ್ಯ ಸಮಿತಿ ಸದಸ್ಯ ಧರ್ಮರಾಜ ಜವಳಿ, ಕುಸನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕುಪೇಂದ್ರ ಬರಗಾಲಿ, ಸರ್ಕಾರಿ ನೌಕರರ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಅಧ್ಯಕ್ಷ ಸೇವಂತಾ ಪಿ. ಚವ್ಹಾಣ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪವನಸಿಂಗ್ ಠಾಕೂರ್, ಭರತರಾಜ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.</p>.<p><strong>ಮೂರು ಗೋಷ್ಠಿಗಳು:</strong></p>.<p>ಸಮ್ಮೇಳನದ ಎರಡನೇ ದಿನವೂ ಮೂರು ಗೋಷ್ಠಿಗಳು ನಡೆದವು. ‘ಸಮ್ಮೇಳನಾಧ್ಯಕ್ಷ ಬದುಕು–ಬರಹ’ ಗೋಷ್ಠಿಯಲ್ಲಿ ನರಸಪ್ಪ ಚಿನಕಟ್ಟಿ ಚಿತ್ತಾಪುರ ಮುಡುಬಿ ಗುಂಡೇರಾವ ಬಾಲ್ಯ, ಶಿಕ್ಷಣ, ಉದ್ಯೋಗದ ಆದಿಯಾಗಿ ಈತನಕದ ಸಾಹಿತ್ಯ ಕೃಷಿಯ ಮೇಲೆ ಬೆಳಕು ಚೆಲ್ಲಿದರು.</p>.<p>‘ಅನ್ನ ಅರಿವು–ಅಕ್ಷರ ನೆರವು’ ಗೋಷ್ಠಿಯಲ್ಲಿ ‘ಕೃಷಿತೊ ನಾಸ್ತಿ ದುರ್ಭಿಕ್ಷಂ’ ಕುರಿತು ರೈತ ಮುಖಂಡ ಆದಿನಾಥ ಹೀರಾ, ‘ರೈತರು ದೇಶದ ಬೆನ್ನೆಲುಬು ಮತ್ತು ಹಸಿವು ನೀಗಿಸುವ ಶಕ್ತಿಯಾಗಿದ್ದಾರೆ. ಮಳೆ ನೀರು ಸಂಗ್ರಹಿಸದಿದ್ದರೆ ಮುಂದಿನ ಪೀಳಿಗೆಗೆ ನೆಲೆ ಇಲ್ಲದಂತಾಗುತ್ತದೆ. ಕೊಳವೆಬಾವಿಗಳು ಬತ್ತಿ ಹೋಗುತ್ತಿದ್ದು, ಮಳೆ ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸುವುದು ಅನಿವಾರ್ಯ. ನೀರಿದ್ದರೆ ಮಾತ್ರವೇ ನಾಳೆಗಳು ಉಳಿಯಲಿವೆ. ನೀರನ್ನು ಅಮೃತದಂತೆ ಭಾವಿಸಬೇಕಿದೆ’ ಎಂದರು.</p>.<p>‘ಆಹಾರ- ಪರಿಸರದಲ್ಲಿ ಆರೋಗ್ಯದ ಚಿಂತನೆ’ ಕುರಿತು ಶರಣಕುಮಾರ ಕಂಠಿ ವಿಚಾರ ಮಂಡಿಸಿದರು. ‘ಅಸಿಡಿಟಿಯೇ ಎಲ್ಲ ರೋಗಗಳ ತಾಯಿ’ ಎಂದು ಎಚ್ಚರಿಸಿದರು.</p>.<p>‘ಮುಳುಗದಿರಲಿ ಬದುಕು’ ಗೋಷ್ಠಿಯಲ್ಲಿ ‘ಸಾಮಾಜಿಕ ಸಾಮರಸ್ಯ ಹಾಡು ಪಾಡು ಹರುಷ’ ಕುರಿತು ಬಾಬುರಾವ ಶೇರಿಕಾರ ವಿಚಾರ ಮಂಡಿಸಿದರು. ‘ದೇಶವು ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಜಗತ್ತೇ ಬೆರಗಾಗುವಂಥ ಸಾಧನೆ ಮಾಡುತ್ತಿದೆ. ಸಾಮಾಜಿಕ ಸಾಮರಸ್ಯದ ವಿಚಾರಕ್ಕೆ ಬಂದಾಗ ನಾವು ಇಂದಿಗೂ ಹಳೆಯ ಪದ್ಧತಿಗಳಿಗೆ ಅಂಟಿಕೊಂಡಿದ್ದೇವೆ. ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ಬೇರುಗಳು ಗಟ್ಟಿಯಾಗಿರುವುದು ಕಳವಳಕಾರಿ’ ಎಂದು ಬೇಸರಿಸಿದರು.</p>.<p>‘ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣ–ಒಂದು ಅವಲೋಕನ’ ಕುರಿತು ಕಲ್ಯಾಣಕುಮಾರ ಶೀಲವಂತ ವಿಚಾರ ಮಂಡಿಸಿದರು. ‘ಶಿಕ್ಷಕರು ಕೇವಲ ಪುಸ್ತಕದಲ್ಲಿನ ಮಾಹಿತಿ ನೀಡುವವರಾಗದೇ ಮಕ್ಕಳಲ್ಲಿ ಸಂಸ್ಕಾರ ಮತ್ತು ನೈತಿಕತೆ ಬಿತ್ತುವ ಶಿಲ್ಪಿಗಳಾಗಬೇಕು’ ಎಂದು ಸಲಹೆ ನೀಡಿದರು.</p>.<p><strong>ಸಾಹಿತ್ಯಾಭಿಮಾನಿಗಳ ಕೊರತೆ:</strong></p>.<p>ಸಮ್ಮೇಳನದ ಸಮಾರೋಪ ಸಮಾರಂಭಕ್ಕೆ ಸಾಹಿತ್ಯಾಸಕ್ತ ಪ್ರೇಕ್ಷಕರ ಕೊರತೆ ಕಾಡಿತು. ಒಒಡಿ ಸೌಲಭ್ಯ ಪಡೆದ ಬಹುತೇಕ ಶಿಕ್ಷಕರು ಊರುಗಳತ್ತ ಮುಖಮಾಡಿದ್ದರು. ಹೀಗಾಗಿ ಕುರ್ಚಿಗಳು ಖಾಲಿ ಹೊಡೆದವು.</p>.<p><strong>‘ಸಂತೋಷವೇ ಬದುಕಿನ ಮುಖ್ಯ ಗುರಿ’</strong></p><p>‘ಸಂತೋಷವೇ ನಮ್ಮ ಬದುಕಿನ ಮುಖ್ಯ ಗುರಿಯಾಗಬೇಕು’ ಎಂದು ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿದ ಸಂಸ್ಕೃತಿ ಚಿಂತಕಿ ಭುವನೇಶ್ವರಿ ಚಿಮಕೋಡ ಪ್ರತಿಪಾದಿಸಿದರು. ‘ಇಂದಿನ ಐಟಿ–ಬಿಟಿಯ ಕಂಪ್ಯೂಟರ್ ಯುಗದಲ್ಲಿ ಜನ ಸಂತೋಷವಾಗಿ ಬದುಕುವುದನ್ನೇ ಮರೆತಿದ್ದಾರೆ. 24 ಗಂಟೆಯೂ ಕಂಪ್ಯೂಟರ್ಗಳಲ್ಲಿ ಮುಳುಗಿ ಕಣ್ಣು–ಬೆನ್ನು ನೋವು ಎದುರಿಸುತ್ತಿದ್ದಾರೆ. ಹಿಂದೆಲ್ಲ ಜನಪದ ಸಾಹಿತ್ಯ ಬದುಕಿಗೆ ಖುಷಿ ತುಂಬುತ್ತಿತ್ತು’ ಎಂದರು.</p><p>‘ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಅತಿಮುಖ್ಯ. ನೈತಿಕತೆಯೇ ಇಲ್ಲದ ಶಿಕ್ಷಣ ನೀರಿಲ್ಲದ ಊರಿನಂತೆ. ಹೀಗಾಗಿ ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು. ಸರ್ಕಾರವೂ ಶಿಕ್ಷಕರನ್ನು ಬಿಸಿಯೂಟ ಇತ್ಯಾದಿ ಕೆಲಸಗಳಿಂದ ಬಿಡಿಸಿ ನೈತಿಕ ಶಿಕ್ಷಣ ಬೋಧಿಸಲು ಹಚ್ಚಬೇಕು’ ಎಂದು ಒತ್ತಾಯಿಸಿದರು.</p><p><strong>ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿರ್ಣಯಗಳು</strong></p><ul><li><p>ಕಲಬುರಗಿಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಬೇಕು. ಕಲ್ಯಾಣ ಭಾಗದ ಸಮಸ್ಯೆ ಪರಿಹರಿಸಲು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು</p></li><li><p>ಹಂಪಿ ಉತ್ಸವದ ಮಾದರಿಯಂತೆ ರಾಷ್ಟ್ರಕೂಟ ಉತ್ಸವ ಕಲಬುರಗಿ ಉತ್ಸವಗಳನ್ನು ಆಚರಿಸಬೇಕು</p></li><li><p>ಕಲ್ಯಾಣ ನಾಡಿನ ಪ್ರಮುಖ ಐತಿಹಾಸಿಕ ಸ್ಥಳಗಳಾದ ನಾಗಾವಿ ಮಳಖೇಡ ಸನ್ನತಿ ಬಿಜನಳ್ಳಿಯನ್ನು ರಾಷ್ಟ್ರೀಯ ಸ್ಮಾರಕಗಳಾಗಿ ಘೋಷಿಸಿ ಅಭಿವೃದ್ಧಿ ಪಡಿಸಬೇಕು. ಈ ಸ್ಥಳಗಳ ಮಹತ್ವ ಪಠ್ಯಕ್ರಮದಲ್ಲಿ ಅಳವಡಿಸಬೇಕು</p></li><li><p>ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಮುಲಸೌಕರ್ಯಗಳನ್ನು ಕಲ್ಪಿಸಿ ಶಿಕ್ಷಕರನ್ನು ನೇಮಿಸಬೇಕು</p></li><li><p>ಜಿಲ್ಲೆಯ ಸಿಮೆಂಟ್ ಫ್ಯಾಕ್ಟರಿಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು</p></li><li><p>ಜಿಲ್ಲೆಯ ಎರಡು ಕಡೆ ಉದ್ಯೋಗ ಕಲ್ಪಿಸುವ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು</p></li><li><p>ಕಲಬುರಗಿಗೆ ಮಂಜೂರಾಗಿರುವ ಜವಳಿ ಪಾರ್ಕ್ ಶೀಘ್ರವೇ ಅನುಷ್ಠಾನಗೊಳಿಸಬೇಕು</p></li></ul>.<div><blockquote>ಕಲಬುರಗಿಯನ್ನು ಕರ್ನಾಟಕದ ಉಪರಾಜಧಾನಿ ಆಗಿಸಬೇಕು ಎಂಬ ಬೇಡಿಕೆ ನ್ಯಾಯೋಚಿತ. ಈ ಕುರಿತು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವೆ.</blockquote><span class="attribution">ಬಸವರಾಜ ಮತ್ತಿಮಡು, ಶಾಸಕ</span></div>.<div><blockquote>ಕನ್ನಡಕ್ಕೆ ಶ್ರೀಕಾರ ಬರೆದ ನಾಡು ಕಲಬುರಗಿ. ಇಲ್ಲಿ ಕಾವ್ಯಗಳು ಹುಟ್ಟಬೇಕು. ಸಾಹಿತ್ಯ ರಚನೆಯಾಗಬೇಕು. ಅಂಥ ಶಕ್ತಿ ಮಕ್ಕಳಲ್ಲಿ ಬೆಳೆಸಬೇಕಿದೆ.</blockquote><span class="attribution">ಮುಡಬಿ ಗುಂಡೇರಾವ, ಸಮ್ಮೇಳನದ ಅಧ್ಯಕ್ಷ</span></div>.<div><blockquote>ಕನ್ನಡ ಭಾಷೆ ಉಳಿಯಬೇಕು ಬೆಳೆಯಬೇಕು. ಸಾಹಿತಿಗಳು ಸಾಹಿತ್ಯ ರಚನೆ ಮೂಲಕ ಕನ್ನಡಕ್ಕೆ ಚೈತನ್ಯ ಕೊಡಬೇಕು.</blockquote><span class="attribution">ಸಾರಂಗಧರ ಸ್ವಾಮೀಜಿ, ಸುಲಫಲ ಶ್ರೀಶೈಲ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ (ಡಾ.ಶರಣಬಸವಪ್ಪ ಅಪ್ಪ ವೇದಿಕೆ):</strong> ‘ಕನ್ನಡ ಸಾಹಿತ್ಯವನ್ನು ಜಗತ್ತಿನಾದ್ಯಂತ ಪಸರಿಸಲು ತಾಂತ್ರಿಕತೆ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ದ್ರಾಕ್ಷಾಯಣಿ ಎಸ್.ಅಪ್ಪ ಪ್ರತಿಪಾದಿಸಿದರು.</p>.<p>ನಗರದ ಕನ್ನಡ ಭವನದ ಆವರಣದ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರ ಅವರು ಮಾತನಾಡಿದರು.</p>.<p>‘ಕನ್ನಡ ಭಾಷೆ ಮತ್ತು ಸಾಹಿತ್ಯವು ಕೇವಲ ಹಳ್ಳಿಗಳಿಗೆ ಸೀಮಿತವಾಗಬಾರದು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕನ್ನಡ ಸಾಹಿತ್ಯವು ವಿಶ್ವಮಟ್ಟಕ್ಕೆ ತಲುಪುವಂತಾಗಬೇಕು. ವೈದ್ಯರು, ಎಂಜಿನಿಯರ್ಗಳು ಸೇರಿದಂತೆ ಪ್ರತಿಯೊಬ್ಬ ವಿದ್ಯಾವಂತ ಕನ್ನಡಿಗರು ತಮ್ಮ ವೃತ್ತಿಯ ಜೊತೆಗೆ ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಹಳೆಯ ಬೇರು, ಹೊಸ ಚಿಗುರು ಎನ್ನುವಂತೆ ಹಿರಿಯ ಸಾಹಿತಿಗಳ ಅನುಭವದೊಂದಿಗೆ ಯುವಕರನ್ನು ಪ್ರೋತ್ಸಾಹಿಸಿ ಕನ್ನಡವನ್ನು ಬೆಳೆಸಬೇಕಿದೆ. ಶರಣರ ಸಾಹಿತ್ಯ ಮಾರ್ಗ ನಮಗೆ ಎಂದಿಗೂ ಆದರ್ಶವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕೇವಲ ಚರ್ಚೆಗೆ ಸೀಮಿತವಾಗದೆ ಕ್ರಿಯಾತ್ಮಕವಾಗಿರಬೇಕು. ರೈತರು, ಕಾರ್ಮಿಕರು, ನಿರ್ಗತಿಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಕೆಲಸ ಮಾಡಬೇಕು’ ಎಂದರು.</p>.<p>ದೊಡ್ಡಪ್ಪ ಅಪ್ಪ, ಶರಣಬಸಪ್ಪ ಅಪ್ಪ ಅವರ ಕನ್ನಡದ ಮೇಲಿನ ಅಗಣಿತ ಪ್ರೀತಿ ಹಾಗೂ ಕನ್ನಡ ನಾಡು ಕಟ್ಟುವಲ್ಲಿ ಅವರು ನೀಡಿದ ಕೊಡುಗೆಯನ್ನೂ ಇದೇ ವೇಳೆ ಅವರು ಸ್ಮರಿಸಿದರು.</p>.<p>ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಮರೇಶ್ವರಿ ಚಿಂಚನಸೂರ, ಜಿಲ್ಲಾ ಸರ್ಕಾರಿ ನೌಕರ ಸಂಘದ ರಾಜ್ಯ ಸಮಿತಿ ಸದಸ್ಯ ಧರ್ಮರಾಜ ಜವಳಿ, ಕುಸನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕುಪೇಂದ್ರ ಬರಗಾಲಿ, ಸರ್ಕಾರಿ ನೌಕರರ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಅಧ್ಯಕ್ಷ ಸೇವಂತಾ ಪಿ. ಚವ್ಹಾಣ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪವನಸಿಂಗ್ ಠಾಕೂರ್, ಭರತರಾಜ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.</p>.<p><strong>ಮೂರು ಗೋಷ್ಠಿಗಳು:</strong></p>.<p>ಸಮ್ಮೇಳನದ ಎರಡನೇ ದಿನವೂ ಮೂರು ಗೋಷ್ಠಿಗಳು ನಡೆದವು. ‘ಸಮ್ಮೇಳನಾಧ್ಯಕ್ಷ ಬದುಕು–ಬರಹ’ ಗೋಷ್ಠಿಯಲ್ಲಿ ನರಸಪ್ಪ ಚಿನಕಟ್ಟಿ ಚಿತ್ತಾಪುರ ಮುಡುಬಿ ಗುಂಡೇರಾವ ಬಾಲ್ಯ, ಶಿಕ್ಷಣ, ಉದ್ಯೋಗದ ಆದಿಯಾಗಿ ಈತನಕದ ಸಾಹಿತ್ಯ ಕೃಷಿಯ ಮೇಲೆ ಬೆಳಕು ಚೆಲ್ಲಿದರು.</p>.<p>‘ಅನ್ನ ಅರಿವು–ಅಕ್ಷರ ನೆರವು’ ಗೋಷ್ಠಿಯಲ್ಲಿ ‘ಕೃಷಿತೊ ನಾಸ್ತಿ ದುರ್ಭಿಕ್ಷಂ’ ಕುರಿತು ರೈತ ಮುಖಂಡ ಆದಿನಾಥ ಹೀರಾ, ‘ರೈತರು ದೇಶದ ಬೆನ್ನೆಲುಬು ಮತ್ತು ಹಸಿವು ನೀಗಿಸುವ ಶಕ್ತಿಯಾಗಿದ್ದಾರೆ. ಮಳೆ ನೀರು ಸಂಗ್ರಹಿಸದಿದ್ದರೆ ಮುಂದಿನ ಪೀಳಿಗೆಗೆ ನೆಲೆ ಇಲ್ಲದಂತಾಗುತ್ತದೆ. ಕೊಳವೆಬಾವಿಗಳು ಬತ್ತಿ ಹೋಗುತ್ತಿದ್ದು, ಮಳೆ ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸುವುದು ಅನಿವಾರ್ಯ. ನೀರಿದ್ದರೆ ಮಾತ್ರವೇ ನಾಳೆಗಳು ಉಳಿಯಲಿವೆ. ನೀರನ್ನು ಅಮೃತದಂತೆ ಭಾವಿಸಬೇಕಿದೆ’ ಎಂದರು.</p>.<p>‘ಆಹಾರ- ಪರಿಸರದಲ್ಲಿ ಆರೋಗ್ಯದ ಚಿಂತನೆ’ ಕುರಿತು ಶರಣಕುಮಾರ ಕಂಠಿ ವಿಚಾರ ಮಂಡಿಸಿದರು. ‘ಅಸಿಡಿಟಿಯೇ ಎಲ್ಲ ರೋಗಗಳ ತಾಯಿ’ ಎಂದು ಎಚ್ಚರಿಸಿದರು.</p>.<p>‘ಮುಳುಗದಿರಲಿ ಬದುಕು’ ಗೋಷ್ಠಿಯಲ್ಲಿ ‘ಸಾಮಾಜಿಕ ಸಾಮರಸ್ಯ ಹಾಡು ಪಾಡು ಹರುಷ’ ಕುರಿತು ಬಾಬುರಾವ ಶೇರಿಕಾರ ವಿಚಾರ ಮಂಡಿಸಿದರು. ‘ದೇಶವು ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಜಗತ್ತೇ ಬೆರಗಾಗುವಂಥ ಸಾಧನೆ ಮಾಡುತ್ತಿದೆ. ಸಾಮಾಜಿಕ ಸಾಮರಸ್ಯದ ವಿಚಾರಕ್ಕೆ ಬಂದಾಗ ನಾವು ಇಂದಿಗೂ ಹಳೆಯ ಪದ್ಧತಿಗಳಿಗೆ ಅಂಟಿಕೊಂಡಿದ್ದೇವೆ. ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ಬೇರುಗಳು ಗಟ್ಟಿಯಾಗಿರುವುದು ಕಳವಳಕಾರಿ’ ಎಂದು ಬೇಸರಿಸಿದರು.</p>.<p>‘ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣ–ಒಂದು ಅವಲೋಕನ’ ಕುರಿತು ಕಲ್ಯಾಣಕುಮಾರ ಶೀಲವಂತ ವಿಚಾರ ಮಂಡಿಸಿದರು. ‘ಶಿಕ್ಷಕರು ಕೇವಲ ಪುಸ್ತಕದಲ್ಲಿನ ಮಾಹಿತಿ ನೀಡುವವರಾಗದೇ ಮಕ್ಕಳಲ್ಲಿ ಸಂಸ್ಕಾರ ಮತ್ತು ನೈತಿಕತೆ ಬಿತ್ತುವ ಶಿಲ್ಪಿಗಳಾಗಬೇಕು’ ಎಂದು ಸಲಹೆ ನೀಡಿದರು.</p>.<p><strong>ಸಾಹಿತ್ಯಾಭಿಮಾನಿಗಳ ಕೊರತೆ:</strong></p>.<p>ಸಮ್ಮೇಳನದ ಸಮಾರೋಪ ಸಮಾರಂಭಕ್ಕೆ ಸಾಹಿತ್ಯಾಸಕ್ತ ಪ್ರೇಕ್ಷಕರ ಕೊರತೆ ಕಾಡಿತು. ಒಒಡಿ ಸೌಲಭ್ಯ ಪಡೆದ ಬಹುತೇಕ ಶಿಕ್ಷಕರು ಊರುಗಳತ್ತ ಮುಖಮಾಡಿದ್ದರು. ಹೀಗಾಗಿ ಕುರ್ಚಿಗಳು ಖಾಲಿ ಹೊಡೆದವು.</p>.<p><strong>‘ಸಂತೋಷವೇ ಬದುಕಿನ ಮುಖ್ಯ ಗುರಿ’</strong></p><p>‘ಸಂತೋಷವೇ ನಮ್ಮ ಬದುಕಿನ ಮುಖ್ಯ ಗುರಿಯಾಗಬೇಕು’ ಎಂದು ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿದ ಸಂಸ್ಕೃತಿ ಚಿಂತಕಿ ಭುವನೇಶ್ವರಿ ಚಿಮಕೋಡ ಪ್ರತಿಪಾದಿಸಿದರು. ‘ಇಂದಿನ ಐಟಿ–ಬಿಟಿಯ ಕಂಪ್ಯೂಟರ್ ಯುಗದಲ್ಲಿ ಜನ ಸಂತೋಷವಾಗಿ ಬದುಕುವುದನ್ನೇ ಮರೆತಿದ್ದಾರೆ. 24 ಗಂಟೆಯೂ ಕಂಪ್ಯೂಟರ್ಗಳಲ್ಲಿ ಮುಳುಗಿ ಕಣ್ಣು–ಬೆನ್ನು ನೋವು ಎದುರಿಸುತ್ತಿದ್ದಾರೆ. ಹಿಂದೆಲ್ಲ ಜನಪದ ಸಾಹಿತ್ಯ ಬದುಕಿಗೆ ಖುಷಿ ತುಂಬುತ್ತಿತ್ತು’ ಎಂದರು.</p><p>‘ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಅತಿಮುಖ್ಯ. ನೈತಿಕತೆಯೇ ಇಲ್ಲದ ಶಿಕ್ಷಣ ನೀರಿಲ್ಲದ ಊರಿನಂತೆ. ಹೀಗಾಗಿ ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು. ಸರ್ಕಾರವೂ ಶಿಕ್ಷಕರನ್ನು ಬಿಸಿಯೂಟ ಇತ್ಯಾದಿ ಕೆಲಸಗಳಿಂದ ಬಿಡಿಸಿ ನೈತಿಕ ಶಿಕ್ಷಣ ಬೋಧಿಸಲು ಹಚ್ಚಬೇಕು’ ಎಂದು ಒತ್ತಾಯಿಸಿದರು.</p><p><strong>ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿರ್ಣಯಗಳು</strong></p><ul><li><p>ಕಲಬುರಗಿಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಬೇಕು. ಕಲ್ಯಾಣ ಭಾಗದ ಸಮಸ್ಯೆ ಪರಿಹರಿಸಲು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು</p></li><li><p>ಹಂಪಿ ಉತ್ಸವದ ಮಾದರಿಯಂತೆ ರಾಷ್ಟ್ರಕೂಟ ಉತ್ಸವ ಕಲಬುರಗಿ ಉತ್ಸವಗಳನ್ನು ಆಚರಿಸಬೇಕು</p></li><li><p>ಕಲ್ಯಾಣ ನಾಡಿನ ಪ್ರಮುಖ ಐತಿಹಾಸಿಕ ಸ್ಥಳಗಳಾದ ನಾಗಾವಿ ಮಳಖೇಡ ಸನ್ನತಿ ಬಿಜನಳ್ಳಿಯನ್ನು ರಾಷ್ಟ್ರೀಯ ಸ್ಮಾರಕಗಳಾಗಿ ಘೋಷಿಸಿ ಅಭಿವೃದ್ಧಿ ಪಡಿಸಬೇಕು. ಈ ಸ್ಥಳಗಳ ಮಹತ್ವ ಪಠ್ಯಕ್ರಮದಲ್ಲಿ ಅಳವಡಿಸಬೇಕು</p></li><li><p>ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಮುಲಸೌಕರ್ಯಗಳನ್ನು ಕಲ್ಪಿಸಿ ಶಿಕ್ಷಕರನ್ನು ನೇಮಿಸಬೇಕು</p></li><li><p>ಜಿಲ್ಲೆಯ ಸಿಮೆಂಟ್ ಫ್ಯಾಕ್ಟರಿಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು</p></li><li><p>ಜಿಲ್ಲೆಯ ಎರಡು ಕಡೆ ಉದ್ಯೋಗ ಕಲ್ಪಿಸುವ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು</p></li><li><p>ಕಲಬುರಗಿಗೆ ಮಂಜೂರಾಗಿರುವ ಜವಳಿ ಪಾರ್ಕ್ ಶೀಘ್ರವೇ ಅನುಷ್ಠಾನಗೊಳಿಸಬೇಕು</p></li></ul>.<div><blockquote>ಕಲಬುರಗಿಯನ್ನು ಕರ್ನಾಟಕದ ಉಪರಾಜಧಾನಿ ಆಗಿಸಬೇಕು ಎಂಬ ಬೇಡಿಕೆ ನ್ಯಾಯೋಚಿತ. ಈ ಕುರಿತು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವೆ.</blockquote><span class="attribution">ಬಸವರಾಜ ಮತ್ತಿಮಡು, ಶಾಸಕ</span></div>.<div><blockquote>ಕನ್ನಡಕ್ಕೆ ಶ್ರೀಕಾರ ಬರೆದ ನಾಡು ಕಲಬುರಗಿ. ಇಲ್ಲಿ ಕಾವ್ಯಗಳು ಹುಟ್ಟಬೇಕು. ಸಾಹಿತ್ಯ ರಚನೆಯಾಗಬೇಕು. ಅಂಥ ಶಕ್ತಿ ಮಕ್ಕಳಲ್ಲಿ ಬೆಳೆಸಬೇಕಿದೆ.</blockquote><span class="attribution">ಮುಡಬಿ ಗುಂಡೇರಾವ, ಸಮ್ಮೇಳನದ ಅಧ್ಯಕ್ಷ</span></div>.<div><blockquote>ಕನ್ನಡ ಭಾಷೆ ಉಳಿಯಬೇಕು ಬೆಳೆಯಬೇಕು. ಸಾಹಿತಿಗಳು ಸಾಹಿತ್ಯ ರಚನೆ ಮೂಲಕ ಕನ್ನಡಕ್ಕೆ ಚೈತನ್ಯ ಕೊಡಬೇಕು.</blockquote><span class="attribution">ಸಾರಂಗಧರ ಸ್ವಾಮೀಜಿ, ಸುಲಫಲ ಶ್ರೀಶೈಲ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>