ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಋಣಭಾರ ಹಾಕಿ ಹಣ ನೀಡದ ಡಿಸಿಸಿ ಬ್ಯಾಂಕ್‌

ಅರ್ಜಿ ಪಡೆದು 7 ತಿಂಗಳಾದರೂ ರೈತರಿಗೆ ಸಿಗದ ಸಾಲ
Published : 21 ಜುಲೈ 2023, 19:55 IST
Last Updated : 21 ಜುಲೈ 2023, 19:55 IST
ಫಾಲೋ ಮಾಡಿ
Comments
ಸಾಲ ನೀಡದೇ ಜಮೀನಿನ ಮೇಲೆ ಋಣಭಾರ ಹಾಕಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್‌ನವರು ಶೀಘ್ರವೇ ಸಾಲ ಮಂಜೂರು ಮಾಡಿದ ಹಣ ನೀಡಬೇಕು.
– ಶರಣಬಸಪ್ಪ ಮಮಶೆಟ್ಟಿ ,ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ
ಸಾಲ ಮಂಜೂರಾಗಿದೆ ಎಂದು ಹೇಳಿ ನನ್ನ ಜಮೀನಿನ ಪಾಣಿಯಲ್ಲಿ ಋಣಭಾರ ಹಾಕಿದ್ದಾರೆ. ಇದರಿಂದ ಬೇರೆ ಬ್ಯಾಂಕ್‌ನಲ್ಲಿ ಸಹ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ.
ಲಾಡ್ಲೇಸಾಬ, ಕಡಣಿ ಕಡಣಿ ಗ್ರಾಮದ ರೈತ
‘₹5 ಕೋಟಿ ಹಣ ಪಾವತಿ ಬಾಕಿ’
‘ಅಪೆಕ್ಸ್‌ ಬ್ಯಾಂಕ್‌ನಿಂದ ಹಣ ಬಿಡುಗಡೆಯಾಗಬಹುದು ಎಂಬ ಭರವಸೆ ಮೇಲೆ ರೈತರಿಂದ ಅರ್ಜಿ ಪ‍ಡೆದು ಸಾಲ ನೀಡಲು ಮುಂದಾಗಿದ್ದೆವು. ಹಣ ಬಿಡುಗಡೆಯಾಗದಿರುವುದರಿಂದ ಸಮಸ್ಯೆಯಾಗಿದೆ’ ಎಂದು ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಸುರೇಶ ಸಜ್ಜನ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಸಾಲ ಮಂಜೂರು ಮಾಡಲಾದ ರೈತರಿಗೆ ಒಟ್ಟು ₹5 ಕೋಟಿ ಹಣ ಪಾವತಿಸಬೇಕಾಗಿದೆ. ಈ ಕುರಿತು ನಿಯೋಗ ತೆಗೆದುಕೊಂಡು ಹೋಗಿ ಅ‍ಪೆಕ್ಸ್ ಬ್ಯಾಂಕ್‌ ಅಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. ಹಣ ನೀಡುವ ಭರವಸೆ ನೀಡಿದ್ದಾರೆ. ಬಿಡುಗಡೆಯಾದ ತಕ್ಷಣವೇ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು’ ಎಂದರು. ‘ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗೆ ಸರ್ಕಾರದಿಂದ ₹50 ಕೋಟಿ ಬಡ್ಡಿ ಸಬ್ಸಿಡಿ ಬಾಕಿ ಹಣ ಬರಬೇಕು. ಬ್ಯಾಂಕ್‌ ವ್ಯಾಪ್ತಿಯಲ್ಲಿ ₹25 ಕೋಟಿಕೂ ಅಧಿಕ ವಸೂಲಾಗದ ಸಾಲ ಇದೆ. ಇದರಿಂದಾಗಿ ರೈತರಿಗೆ ಹೊಸ ಸಾಲ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT