ತಂಡದ ಮುಖ್ಯಸ್ಥ ರಮೇಶಕುಮಾರ ಘಂಟಾ, ಸದಸ್ಯ ಭರತೇಂದು ಸಿಂಗ್, ರಾಜ್ಯ ವಿಪತ್ತು ನಿರ್ವಹಣಾ ತಂಡದ ಡಾ.ಮನೋಜ್ ರಾಜನ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ತಹಶೀಲ್ದಾರ್ ನಾಗಮ್ಮ ಎಂ.ಕೆ. ಅವರು ತಾಲ್ಲೂಕಿನ ಬಿದನೂರ ಗ್ರಾಮದ ಹತ್ತಿರ ಮಳೆಯಿಂದ ಒಡೆದು ಹೋದ ಕೆರೆ ಹಾಗೂ ಗೊಬ್ಬುರ (ಬಿ) ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾಳಾದ ತೊಗರಿ ಬೆಳೆ ಮತ್ತು ತಾಲ್ಲೂಕಿನ ಚಿಣಮಗೇರಾ ಗ್ರಾಮದಲ್ಲಿ ಹಾಳಾದ ರಸ್ತೆಗಳನ್ನು ಮತ್ತು ಗೌರ(ಬಿ) ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಹಾಳಾದ ಮನೆಗಳನ್ನು ವೀಕ್ಷಣೆ ಮಾಡಿದರು.