‘ಶ್ರೀನಿವಾಸ 2013ರಿಂದಲೇ ಡಾ. ವಿಶ್ವನಾಥ ಅವರ ಬಳಿ ಹಲ್ಲುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ. ಹಲವು ಬಾರಿ ಚಿಕಿತ್ಸೆಗಾಗಿ ಬರುತ್ತಿದ್ದ. ಆದರೆ, ನೋವು ವಾಸಿಯಾಗಿರಲಿಲ್ಲ. ಇದೇ ದ್ವೇಷದಿಂದ ಅವರಿಗೆ ಚಾಕು ಹಾಕುವ ಸಂಚು ರೂಪಿಸಿದ ಶ್ರೀನಿವಾಸ, ಮಂಗಳವಾರ ಬೆಳಿಗ್ಗೆ ವೈದ್ಯರು ಕ್ಲಿನಿಕ್ಗೆ ಬರುವ ಮುಂಚೆಯೇ ಬಂದು ಕುಳಿತಿದ್ದಾನೆ. ವೈದ್ಯರು ಬಂದಿದ್ದನ್ನು ಖಚಿತಪಡಿಸಿಕೊಂಡು ಅವರ ಎದುರು ಬಂದು ಚಾಕು ಹಾಕಿದ್ದು, ತಕ್ಷಣವೇ ವಿಶ್ವನಾಥ ಅವರು ಹಿಂದೆ ಸರಿದಿದ್ದಾರೆ. ಹೊಟ್ಟೆಯ ಕೊಂಚ ಭಾಗಕ್ಕೆ ಗಾಯವಾಗಿ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು’ ಎಂದು ಸ್ಟೇಶನ್ ಬಜಾರ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ ತಿಳಿಸಿದರು.