<p>ಕಲಬುರಗಿ: ‘ಎಲ್ಲರ ಪರಿಶ್ರಮದಿಂದ ವೈದ್ಯಾಧಿಕಾರಿಗಳ ಸಂಘಟನೆ ಬಲಗೊಳಿಸಬಹುದು. ಕಲಬುರಗಿಯಲ್ಲಿ ರಾಜ್ಯಮಟ್ಟದ ಸಮಾವೇಶ ಆಗಬೇಕು. ಇದಕ್ಕೆ ಆದ್ಯತೆ ನೀಡುವುದರ ಜತೆ ಸಂಘಟನೆ ಬಲಗೊಳಿಸೋಣ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹ ನಿರ್ದೆಶಕ ಡಾ. ಶಂಕ್ರಪ್ಪ ಮೈಲಾರಿ ಹೇಳಿದರು.</p>.<p>ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಸಂಜೆ ನಡೆದ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಡಾ. ಅಂಬಾರಾಯ ಎಸ್. ರುದ್ರವಾಡಿ ಮಾತನಾಡಿ, ‘ಸಂಘ ಕಟ್ಟಿ 40 ವರ್ಷಗಳಾಗಿವೆ. ನಮ್ಮ ಹಿರಿಯರು ಸಂಘಟನೆ ಸ್ಥಾಪನೆ ಮಾಡಿ ಬಹಳಷ್ಟು ಕೆಲಸ ಮಾಡಿದ್ದಾರೆ, ಅದನ್ನು ನಾವು ಮುಂದುವರಿಸಿಕೊಂಡು ಹೋಗೋಣ’ ಎಂದರು. </p>.<p>ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಮಾತನಾಡಿ, ‘ಸಂಘಟನೆಯನ್ನು ಎಲ್ಲರೂ ಕೂಡಿ ಬೆಳೆಸಬೇಕು. ಸಮಸ್ಯೆ ಏನೇ ಇದ್ದರು ಸಂಘಕ್ಕೆ ಮೊದಲು ತಿಳಿಸಬೇಕು. ಬಳಿಕ ಸಮಸ್ಯೆ ಬಗೆಹರಿಸಿಕೊಂಡಾಗ ಮಾತ್ರ ಉತ್ತಮ ಸಂಘಟನೆ ಆಗಲು ಸಾಧ್ಯ’ ಎಂದ ಹೇಳಿದರು.</p>.<p>ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಲಬುರಗಿ ಶಾಖೆಯ ಅಧ್ಯಕ್ಷ ಡಾ.ಶರಣಬಸಪ್ಪ ಗಣಜಲಖೇಡ ಅಧ್ಯಕ್ಷತೆ ವಹಿಸಿದ್ದರು.</p>.<p class="Subhead">ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಲಬುರಗಿ ಶಾಖೆಯ ಪದಾಧಿಕಾರಿಗಳು: ಡಾ.ವಿನೋದಕುಮಾರ ಎಸ್.ಎಚ್., ಡಾ. ಇರ್ಫಾನ್ ಅಲಿ (ಉಪಾಧ್ಯಕ್ಷರು), ಡಾ.ಸಂತೋಷ ಅಲಗೂರು (ಕಾರ್ಯದರ್ಶಿ), ಡಾ. ದೀಪಕಕುಮಾರ ರಾಠೋಡ (ಖಜಾಂಚಿ), ಡಾ. ಸಂಧ್ಯಾ ಕಾನೇಕರ್, ಡಾ. ಅಮೃತಾ ಕುಲಕರ್ಣಿ (ಜಂಟಿ ಕಾರ್ಯದರ್ಶಿಗಳು).</p>.<p>ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಬಳಿಕ ಅವರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.</p>.<p>ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರುಕಿಯಾ ಆಸ್ತಾ ರಬಾ, ಡಾ. ನಾಗರಾಜ ಪಾಟೀಲ, ಡಾ. ಪೂರ್ಣಿಮಾ, ಡಾ. ಅಮೃತಾ ದೇಶಪಾಂಡೆ ಸೇರಿದಂತೆ ಜಿಲ್ಲೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಎಲ್ಲರ ಪರಿಶ್ರಮದಿಂದ ವೈದ್ಯಾಧಿಕಾರಿಗಳ ಸಂಘಟನೆ ಬಲಗೊಳಿಸಬಹುದು. ಕಲಬುರಗಿಯಲ್ಲಿ ರಾಜ್ಯಮಟ್ಟದ ಸಮಾವೇಶ ಆಗಬೇಕು. ಇದಕ್ಕೆ ಆದ್ಯತೆ ನೀಡುವುದರ ಜತೆ ಸಂಘಟನೆ ಬಲಗೊಳಿಸೋಣ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹ ನಿರ್ದೆಶಕ ಡಾ. ಶಂಕ್ರಪ್ಪ ಮೈಲಾರಿ ಹೇಳಿದರು.</p>.<p>ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಸಂಜೆ ನಡೆದ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಡಾ. ಅಂಬಾರಾಯ ಎಸ್. ರುದ್ರವಾಡಿ ಮಾತನಾಡಿ, ‘ಸಂಘ ಕಟ್ಟಿ 40 ವರ್ಷಗಳಾಗಿವೆ. ನಮ್ಮ ಹಿರಿಯರು ಸಂಘಟನೆ ಸ್ಥಾಪನೆ ಮಾಡಿ ಬಹಳಷ್ಟು ಕೆಲಸ ಮಾಡಿದ್ದಾರೆ, ಅದನ್ನು ನಾವು ಮುಂದುವರಿಸಿಕೊಂಡು ಹೋಗೋಣ’ ಎಂದರು. </p>.<p>ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಮಾತನಾಡಿ, ‘ಸಂಘಟನೆಯನ್ನು ಎಲ್ಲರೂ ಕೂಡಿ ಬೆಳೆಸಬೇಕು. ಸಮಸ್ಯೆ ಏನೇ ಇದ್ದರು ಸಂಘಕ್ಕೆ ಮೊದಲು ತಿಳಿಸಬೇಕು. ಬಳಿಕ ಸಮಸ್ಯೆ ಬಗೆಹರಿಸಿಕೊಂಡಾಗ ಮಾತ್ರ ಉತ್ತಮ ಸಂಘಟನೆ ಆಗಲು ಸಾಧ್ಯ’ ಎಂದ ಹೇಳಿದರು.</p>.<p>ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಲಬುರಗಿ ಶಾಖೆಯ ಅಧ್ಯಕ್ಷ ಡಾ.ಶರಣಬಸಪ್ಪ ಗಣಜಲಖೇಡ ಅಧ್ಯಕ್ಷತೆ ವಹಿಸಿದ್ದರು.</p>.<p class="Subhead">ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಲಬುರಗಿ ಶಾಖೆಯ ಪದಾಧಿಕಾರಿಗಳು: ಡಾ.ವಿನೋದಕುಮಾರ ಎಸ್.ಎಚ್., ಡಾ. ಇರ್ಫಾನ್ ಅಲಿ (ಉಪಾಧ್ಯಕ್ಷರು), ಡಾ.ಸಂತೋಷ ಅಲಗೂರು (ಕಾರ್ಯದರ್ಶಿ), ಡಾ. ದೀಪಕಕುಮಾರ ರಾಠೋಡ (ಖಜಾಂಚಿ), ಡಾ. ಸಂಧ್ಯಾ ಕಾನೇಕರ್, ಡಾ. ಅಮೃತಾ ಕುಲಕರ್ಣಿ (ಜಂಟಿ ಕಾರ್ಯದರ್ಶಿಗಳು).</p>.<p>ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಬಳಿಕ ಅವರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.</p>.<p>ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರುಕಿಯಾ ಆಸ್ತಾ ರಬಾ, ಡಾ. ನಾಗರಾಜ ಪಾಟೀಲ, ಡಾ. ಪೂರ್ಣಿಮಾ, ಡಾ. ಅಮೃತಾ ದೇಶಪಾಂಡೆ ಸೇರಿದಂತೆ ಜಿಲ್ಲೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>