ತಾಲ್ಲೂಕಿನ ಕೆರೆಬೋಸಗಾ ಗ್ರಾಮದಲ್ಲಿರುವ ನಂದಿ ಗೋಶಾಲೆಯಲ್ಲಿ ಹಸುವಿಗೆ ಪೂಜೆ ಸಲ್ಲಿಸಿ, ಬಾಳೆಹಣ್ಣು ತಿನ್ನಿಸಿದ ಶಾಸಕ, ‘ದೇಶದಾದ್ಯಂತ ಏಕಕಾಲಕ್ಕೆ ಈ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಕೂಡ ಗುರಿ ಮೀರಿ ಸಾಧನೆ ತೋರಲಾಗಿದೆ. ಎರಡನೇ ಸುತ್ತಿನ ಕಾರ್ಯಕ್ರಮವನ್ನೂ ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು. ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ.ಪಿ.ಎಂ.ಪ್ರಸಾದ್ ಮೂರ್ತಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ ಮೋಟಗಿ (ಕೇಶವ), ಇಲಾಖೆಯ ಉಪನಿರ್ದೇಶಕ ಡಾ.ಬಿ.ಎಸ್. ಪಾಟೀಲ, ನಂದಿ ಗೋ ಶಾಲೆಯ ಅಧ್ಯಕ್ಷ ಬಸವರಾಜ ಉಪ್ಪಿನ, ಪಯೋನಿಧಿ ಗೋ ಶಾಲೆಯ ಕೃಷ್ಣ ಕೆಂಭಾವಿ, ಇಲಾಖೆಯ ಪಶುವೈದ್ಯಾಧಿಕಾರಿ (ತಾಂತ್ರಿಕ) ಡಾ. ಯಲ್ಲಪ್ಪ ಇಂಗಳೆ, ಸಹಾಯಕ ನಿರ್ದೇಶಕ ಡಾ.ಎಸ್.ಕೆ. ಟಕ್ಕಳಕಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ದೇವಿಂದ್ರಪ್ಪ ಬಿರೇದಾರ, ಶರಣ ಸಿರಸಗಿ ಪಶು ವೈದ್ಯಾಧಿಕಾರಿ ವೈಜನಾಥ್ ಮಮ್ಮಾಣಿ ಮತ್ತು ಡಾ.ಪರಿಮಳಾ ಇದ್ದರು.