ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ‌ಮಹಾಸಭಾ ಜಿಲ್ಲಾ ಘಟಕಕ್ಕೆ ಚುನಾವಣೆ: ಖಂಡ್ರೆ ಸಂಧಾನ ಯತ್ನ

Last Updated 23 ಸೆಪ್ಟೆಂಬರ್ 2019, 7:47 IST
ಅಕ್ಷರ ಗಾತ್ರ

ಕಲಬುರ್ಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ‌ ಘಟಕದ ನೂತ‌ನ ಪದಾಧಿಕಾರಿಗಳನ್ನು ಶತಾಯಗತಾಯ ಅವಿರೋಧ ಆಯ್ಕೆ ಮಾಡಲು ಉದ್ದೇಶಿರುವ ಮಹಾ ಸಭಾ ಮುಖಂಡ ಈಶ್ವರ ಖಂಡ್ರೆ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಸಮಾಜದ ಮುಖಂಡರನ್ನು ಕರೆಸಿ ‌ಮಾತುಕತೆ ನಡೆಸುತ್ತಿದ್ದಾರೆ.

ಹಾಲಿ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳದ ಮತ್ತೊಂದು ಬಣವು ಸಮಾಜದ ಹಿರಿಯ ಮುಖಂಡ ಜಿ.ಡಿ.ಅಣಕಲ್ ಅವರನ್ನು ಅಧ್ಯಕ್ಷರನ್ನಾಗಿ‌ ಮಾಡಲು ಒಪ್ಪಿದರೆ ಉಳಿದ ಆಕಾಂಕ್ಷಿಗಳು ಸ್ಪರ್ಧೆಯಿಂದ ‌ಹಿಂದೆ ಸರಿಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸಮಾಜದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿರುವ ಖಂಡ್ರೆ ಅರುಣಕುಮಾರ ಪಾಟೀಲ ವಿರೋಧಿ ಗುಂಪಿನಿಂದ ಪದಾಧಿಕಾರಿಗಳಾಗಿ ಆಯ್ಕೆ ಬಯಸಿ ಸ್ಪರ್ಧಿಸಿರುವವರ ನಾಮ ಪತ್ರ ವಾಪಸ್ ಪಡೆಯುವ ಪತ್ರಗಳನ್ನು ಪಡೆದುಕೊಂಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಪಾಟೀಲ ವಿರುದ್ಧ ಸ್ಪರ್ಧಿಸಿರುವ ಅಣಕಲ್ ಅವರು ಮಾತ್ರ ತಮ್ಮ ಪತ್ರವನ್ನು ನೀಡಿಲ್ಲ.

ಇಂದು ಮಧ್ಯಾಹ್ನ 3ರವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT