<p><strong>ಚಿಂಚೋಳಿ: </strong>ಪರಿಸರ ಪ್ರವಾಸಿ ತಾಣಗಳಿಂದ ಪ್ರಸಿದ್ಧ ಪಡೆದ ತಾಲ್ಲೂಕಿನ ಪ್ರೇಕ್ಷಣೀಯ ತಾಣಗಳಿಗೆ ಮಳೆಯಿಂದ ಈಗ ಜೀವಕಳೆ ಬಂದಿದೆ.</p>.<p>ಹಣ್ಣೆಲೆ ಉದುರಿ ಬರಡಾಗಿದ್ದ ಕಾಡು ಚಿಗುರೊಡೆದು ಹಸಿರುಡುಗೆತೊಟ್ಟು ಶೋಭಿಸುತ್ತಿದೆ. ಬಿಸಿಲು ನಾಡಿನ ತಂಪನೆಯ ತಾಣವಾದ ತಾಲ್ಲೂಕಿನ ಕುಂಚಾವರಂ ಕಾಡಿನ ವನ್ಯಜೀವಿ ಧಾಮದಲ್ಲಿನ ಪ್ರವಾಸಿ ತಣಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.</p>.<p>ಜೂನ್ ತಿಂಗಳಲ್ಲಿ ಕಡಿಮೆ ಮಳೆ ಆಗಿದ್ದರಿಂದ ಇದ್ದು ಇಲ್ಲದಂತೆ ಮಿಂಚಿ ಮರೆಯಾಗುತ್ತಿದ್ದ ಜಲಧಾರೆಗಳು ಜುಲೈನಲ್ಲಿ ಸುರಿದ ನಿರಂತರ ಮಳೆಯಿಂದ ಈಗ ಜೀವ ಪಡೆದುಕೊಂಡು ಭೋರ್ಗರೆಯುತ್ತಿವೆ.</p>.<p>ತಾಲ್ಲೂಕಿನ ಎತ್ತಿಪೋತೆ ಹಾಗೂ ಮಾಣಿಕಪುರ ಜಲಪಾತ ಈಗ ಪ್ರವಾಸಿಗರ ಕಣ್ಮನ ತಣಿಸುತ್ತಿವೆ. ಇನ್ನಷ್ಟು ಮಳೆ ಸುರಿದರೆ ಜಲಪಾತಗಳು ಇನ್ನಷ್ಟು ಮೈದುಂಬಿ ಭೋರ್ಗರೆಯಲಿವೆ. ಜಲಪಾತ ಭೋರ್ಗರೆದಂತೆ ಚದ್ರಂಪಳ್ಳಿ ಜಲಾಶಯಕ್ಕೆ 1 ಮೀಟರ್ಗೂ ಅಧಿಕ ನೀರು ಸಂಗ್ರಹವಾಗಿದೆ.</p>.<p>ನೆಲವೆಲ್ಲ ಹಸಿರಾಗಿ ಕಾಡು ಮೈದುಂಬಿಕೊಂಡಿದೆ. ಎಲ್ಲೆಡೆ ಹಸಿರ ರಾಶಿ ಕಣ್ಣಿಗೆ ಹಬ್ಬ ಉಂಟು ಮಾಡಿದರೆ ಮನಸ್ಸಿಗೆ ಮುದ ನೀಡಲಿದೆ.<br />ಇಲ್ಲಿನ ಚಂದ್ರಂಪಳ್ಳಿ ಜಲಾಶಯಕ್ಕೆ ಜೂನ್ ತಿಂಗಳಿನಿಂದಲೇ ಪ್ರವಾಸಿಗರು ಬರುತ್ತಿದ್ದಾರೆ. ಮಳೆಯಲ್ಲೂ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.</p>.<p>ಈಚೆಗೆ ಪ್ರವಾಸೋದ್ಯಮ ಸಚಿವ ಸಿಪಿ ಯೋಗೀಶ್ವರ್ ಅವರು ಭೇಟಿ ನೀಡಿ ಎತ್ತಿಪೋತೆ ಹಾಗೂ ತಾಲ್ಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರಥಮ ಹಂತದಲ್ಲಿ ₹ 2 ಕೋಟಿ ಮಂಜೂರು ಮಾಡಿದ್ದರು. ಹೆಚ್ಚಿನ ಅನುದಾನ ನೀಡುವ ಆಶ್ವಾಸನೆ ಸಹ ನೀಡಿದ್ದರು. </p>.<p>ಎತ್ತಿಪೋತೆಯಲ್ಲಿ ನೆರೆಯ ತೆಲಂಗಾಣದ ಕೆಲವರು ಪ್ರವಾಸಿಗರ ವಾಹನಗಳಿಂದ ಗ್ರಾಮ ಪಂಚಾಯಿತಿ ಹೆಸರಲ್ಲಿ ತೆರಿಗೆ ವಸೂಲು ಮಾಡುತ್ತಿದ್ದಾರೆ. ಕರ್ನಾಟಕ ನೆಲದಲ್ಲಿ ನೆರೆಯ ತೆಲಂಗಾಣದವರಿಗೆ ಹಣ ವಸೂಲಿಗೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆ ಮುಖಂಡ ಸುರೇಶ ಬಂಡಿ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ: </strong>ಪರಿಸರ ಪ್ರವಾಸಿ ತಾಣಗಳಿಂದ ಪ್ರಸಿದ್ಧ ಪಡೆದ ತಾಲ್ಲೂಕಿನ ಪ್ರೇಕ್ಷಣೀಯ ತಾಣಗಳಿಗೆ ಮಳೆಯಿಂದ ಈಗ ಜೀವಕಳೆ ಬಂದಿದೆ.</p>.<p>ಹಣ್ಣೆಲೆ ಉದುರಿ ಬರಡಾಗಿದ್ದ ಕಾಡು ಚಿಗುರೊಡೆದು ಹಸಿರುಡುಗೆತೊಟ್ಟು ಶೋಭಿಸುತ್ತಿದೆ. ಬಿಸಿಲು ನಾಡಿನ ತಂಪನೆಯ ತಾಣವಾದ ತಾಲ್ಲೂಕಿನ ಕುಂಚಾವರಂ ಕಾಡಿನ ವನ್ಯಜೀವಿ ಧಾಮದಲ್ಲಿನ ಪ್ರವಾಸಿ ತಣಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.</p>.<p>ಜೂನ್ ತಿಂಗಳಲ್ಲಿ ಕಡಿಮೆ ಮಳೆ ಆಗಿದ್ದರಿಂದ ಇದ್ದು ಇಲ್ಲದಂತೆ ಮಿಂಚಿ ಮರೆಯಾಗುತ್ತಿದ್ದ ಜಲಧಾರೆಗಳು ಜುಲೈನಲ್ಲಿ ಸುರಿದ ನಿರಂತರ ಮಳೆಯಿಂದ ಈಗ ಜೀವ ಪಡೆದುಕೊಂಡು ಭೋರ್ಗರೆಯುತ್ತಿವೆ.</p>.<p>ತಾಲ್ಲೂಕಿನ ಎತ್ತಿಪೋತೆ ಹಾಗೂ ಮಾಣಿಕಪುರ ಜಲಪಾತ ಈಗ ಪ್ರವಾಸಿಗರ ಕಣ್ಮನ ತಣಿಸುತ್ತಿವೆ. ಇನ್ನಷ್ಟು ಮಳೆ ಸುರಿದರೆ ಜಲಪಾತಗಳು ಇನ್ನಷ್ಟು ಮೈದುಂಬಿ ಭೋರ್ಗರೆಯಲಿವೆ. ಜಲಪಾತ ಭೋರ್ಗರೆದಂತೆ ಚದ್ರಂಪಳ್ಳಿ ಜಲಾಶಯಕ್ಕೆ 1 ಮೀಟರ್ಗೂ ಅಧಿಕ ನೀರು ಸಂಗ್ರಹವಾಗಿದೆ.</p>.<p>ನೆಲವೆಲ್ಲ ಹಸಿರಾಗಿ ಕಾಡು ಮೈದುಂಬಿಕೊಂಡಿದೆ. ಎಲ್ಲೆಡೆ ಹಸಿರ ರಾಶಿ ಕಣ್ಣಿಗೆ ಹಬ್ಬ ಉಂಟು ಮಾಡಿದರೆ ಮನಸ್ಸಿಗೆ ಮುದ ನೀಡಲಿದೆ.<br />ಇಲ್ಲಿನ ಚಂದ್ರಂಪಳ್ಳಿ ಜಲಾಶಯಕ್ಕೆ ಜೂನ್ ತಿಂಗಳಿನಿಂದಲೇ ಪ್ರವಾಸಿಗರು ಬರುತ್ತಿದ್ದಾರೆ. ಮಳೆಯಲ್ಲೂ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.</p>.<p>ಈಚೆಗೆ ಪ್ರವಾಸೋದ್ಯಮ ಸಚಿವ ಸಿಪಿ ಯೋಗೀಶ್ವರ್ ಅವರು ಭೇಟಿ ನೀಡಿ ಎತ್ತಿಪೋತೆ ಹಾಗೂ ತಾಲ್ಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರಥಮ ಹಂತದಲ್ಲಿ ₹ 2 ಕೋಟಿ ಮಂಜೂರು ಮಾಡಿದ್ದರು. ಹೆಚ್ಚಿನ ಅನುದಾನ ನೀಡುವ ಆಶ್ವಾಸನೆ ಸಹ ನೀಡಿದ್ದರು. </p>.<p>ಎತ್ತಿಪೋತೆಯಲ್ಲಿ ನೆರೆಯ ತೆಲಂಗಾಣದ ಕೆಲವರು ಪ್ರವಾಸಿಗರ ವಾಹನಗಳಿಂದ ಗ್ರಾಮ ಪಂಚಾಯಿತಿ ಹೆಸರಲ್ಲಿ ತೆರಿಗೆ ವಸೂಲು ಮಾಡುತ್ತಿದ್ದಾರೆ. ಕರ್ನಾಟಕ ನೆಲದಲ್ಲಿ ನೆರೆಯ ತೆಲಂಗಾಣದವರಿಗೆ ಹಣ ವಸೂಲಿಗೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆ ಮುಖಂಡ ಸುರೇಶ ಬಂಡಿ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>