ಮಠದ ಈಗಿನ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಶಿವಯೋಗಿಗಳು ಸಿದ್ಧರಾಮ ಶಿವಯೋಗಿಗಳ ಕರ್ತೃ ಗದ್ದುಗೆಯ ಗೋಪುರದ ಮೇಲಿನ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಪೀಠದ ಸುತ್ತ ಸೇರಿದ್ದ ಅಪಾರ ಭಕ್ತರು ಚಪ್ಪಾಳೆ ತಟ್ಟಿ, ಸಿಳ್ಳೆ, ಕೇಕೆ ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸಿದರು. ಶಿವಯೋಗಿಗಳಿಗೆ ಜಯವಾಗಲಿ ಎಂದು ಘೋಷಣೆ ಮೊಳಗಿಸಿದರು. ವಿವಿಧ ವಾದ್ಯಮೇಳಗಳ ತಂಡಗಳು ಮಂಗಳನಾದ ನುಡಿಸಿದವು. ಈ ಮೂಲಕ ನಿರಂತರ ಶಿವನಾಮ ಜಪ ಭಜನೆಗೂ ಪೂಜ್ಯರು ಮುಕ್ತಾಯ ಹಾಡಿದರು.