<p><strong>ಸೇಡಂ: </strong>ರಸ್ತೆಯಲ್ಲಿ ದೊರೆತ 7 ತೊಲಿ ಚಿನ್ನಾಭರಣ ಮತ್ತು ಮೊಬೈಲ್ ಒಳಗೊಂಡ ಚೀಲವನ್ನು ಸಂಬಂಧಪಟ್ಟವರಿಗೆ ಹಿಂದುರಿಗಿಸಿದ ವಿದ್ಯಾರ್ಥಿನಿ ವೈಷ್ಣವಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ, ಕ್ಷೇತ್ರಶಿಕ್ಷಣಾಧಿಕಾರಿ ನಾಗಪ್ಪ ಪೋತಲ್ ಮತ್ತು ಪಿಎಸ್ಐ ಅಯ್ಯಪ್ಪ ಧರ್ಮಾವರಂ ಅವರು ಮಂಗಳವಾರ ವಿದ್ಯಾರ್ಥಿನಿ ಹಾಗೂ ಪಾಲಕರನ್ನು ಸನ್ಮಾನಿಸಿದರು.</p>.<p>ಪಟ್ಟಣದ ಕೋಮಿಟಿ ಗಲ್ಲಿಯ ನಿವಾಸಿ ಭೀಮಾಶಂಕರ ಚನ್ನಕ್ಕಿ ಅವರ ಪುತ್ರಿ ವೈಷ್ಣವಿಗೆ ಭಾನುವಾರ ರಸ್ತೆಯಲ್ಲಿ ಚಿನ್ನಾಭರಣದ ಚೀಲ ದೊರೆತಿತ್ತು. ಅದರಲ್ಲಿದ್ದ ಮೊಬೈಲ್ ಮೂಲಕ ಸಂಬಂಧಿಕರನ್ನು ಸಂಪರ್ಕಿಸಿ ಚೀಲ ಮರಳಿಸಿದ್ದರು. ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮಂಗಳವಾರ ಸುದ್ದಿ ಪ್ರಕಟವಾಗಿದ್ದನ್ನು ಕಂಡು, ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.</p>.<p>ಕ್ಷೇತ್ರಶಿಕ್ಷಣಾಧಿಕಾರಿ ನಾಗಪ್ಪ ಪೋತಲ್ ಮಾತನಾಡಿ, ‘ಸೇಡಂನ ಸರ್ಕಾರಕನ್ಯಾಪ್ರೌಢಶಾಲೆಯಲ್ಲಿ 9ನೇ ತರಗತಿ ಓದಿತ್ತಿರುವ ವಿದ್ಯಾರ್ಥಿನಿಯ ನಡೆ ಎಲ್ಲ ಮಕ್ಕಳಿಗೂ ಮಾದರಿಯಾದದ್ದು. ₹ 4 ಲಕ್ಷದಷ್ಟು ವಸ್ತುಗಳನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ವೈಷ್ಣವಿ, ನಮಗೂ ಹೆಮ್ಮೆ ತಂದಿದ್ದಾರೆ’ ಎಂದರು.</p>.<p>‘ವಿದ್ಯಾರ್ಥಿನಿ ಪೊಲೀಸ್ ಇಲಾಖೆಯ ಪ್ರೀತಿಗೆ ಪಾತ್ರವಾಗಿದ್ದಾರೆ. ಅಪರಾಧ ನಿಯಂತ್ರಣಕ್ಕೆ ಇಂಥ ದಿಟ್ಟ ಮನಸ್ಸುಗಳ ಸಹಕಾರ ಬೇಕು’ ಎಂದರು.</p>.<p>ಪ್ರೌಢಶಾಲೆಯ ಉಪಪ್ರಾಚಾರ್ಯ ಸತ್ಯಕುಮಾರ ಬಾಗೋಡಿ, ಪೊಲೀಸ್ ಸಿಬ್ಬಂದಿ ಅಮೋಘ ಕಾಂಬಳೆ, ಮುಖಂಡ ದತ್ತಾತ್ರೇಯ ಐನಾಪೂರ, ಭೀಮಾಶಂಕರ ಚನ್ನಕ್ಕಿ, ವಿಠ್ಠಲರೆಡ್ಡಿ, ಶಿಕ್ಷಕ ಭೀಮಣ್ಣ ಶ್ರೀಕಾಂತ ಊಡಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಡಂ: </strong>ರಸ್ತೆಯಲ್ಲಿ ದೊರೆತ 7 ತೊಲಿ ಚಿನ್ನಾಭರಣ ಮತ್ತು ಮೊಬೈಲ್ ಒಳಗೊಂಡ ಚೀಲವನ್ನು ಸಂಬಂಧಪಟ್ಟವರಿಗೆ ಹಿಂದುರಿಗಿಸಿದ ವಿದ್ಯಾರ್ಥಿನಿ ವೈಷ್ಣವಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ, ಕ್ಷೇತ್ರಶಿಕ್ಷಣಾಧಿಕಾರಿ ನಾಗಪ್ಪ ಪೋತಲ್ ಮತ್ತು ಪಿಎಸ್ಐ ಅಯ್ಯಪ್ಪ ಧರ್ಮಾವರಂ ಅವರು ಮಂಗಳವಾರ ವಿದ್ಯಾರ್ಥಿನಿ ಹಾಗೂ ಪಾಲಕರನ್ನು ಸನ್ಮಾನಿಸಿದರು.</p>.<p>ಪಟ್ಟಣದ ಕೋಮಿಟಿ ಗಲ್ಲಿಯ ನಿವಾಸಿ ಭೀಮಾಶಂಕರ ಚನ್ನಕ್ಕಿ ಅವರ ಪುತ್ರಿ ವೈಷ್ಣವಿಗೆ ಭಾನುವಾರ ರಸ್ತೆಯಲ್ಲಿ ಚಿನ್ನಾಭರಣದ ಚೀಲ ದೊರೆತಿತ್ತು. ಅದರಲ್ಲಿದ್ದ ಮೊಬೈಲ್ ಮೂಲಕ ಸಂಬಂಧಿಕರನ್ನು ಸಂಪರ್ಕಿಸಿ ಚೀಲ ಮರಳಿಸಿದ್ದರು. ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮಂಗಳವಾರ ಸುದ್ದಿ ಪ್ರಕಟವಾಗಿದ್ದನ್ನು ಕಂಡು, ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.</p>.<p>ಕ್ಷೇತ್ರಶಿಕ್ಷಣಾಧಿಕಾರಿ ನಾಗಪ್ಪ ಪೋತಲ್ ಮಾತನಾಡಿ, ‘ಸೇಡಂನ ಸರ್ಕಾರಕನ್ಯಾಪ್ರೌಢಶಾಲೆಯಲ್ಲಿ 9ನೇ ತರಗತಿ ಓದಿತ್ತಿರುವ ವಿದ್ಯಾರ್ಥಿನಿಯ ನಡೆ ಎಲ್ಲ ಮಕ್ಕಳಿಗೂ ಮಾದರಿಯಾದದ್ದು. ₹ 4 ಲಕ್ಷದಷ್ಟು ವಸ್ತುಗಳನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ವೈಷ್ಣವಿ, ನಮಗೂ ಹೆಮ್ಮೆ ತಂದಿದ್ದಾರೆ’ ಎಂದರು.</p>.<p>‘ವಿದ್ಯಾರ್ಥಿನಿ ಪೊಲೀಸ್ ಇಲಾಖೆಯ ಪ್ರೀತಿಗೆ ಪಾತ್ರವಾಗಿದ್ದಾರೆ. ಅಪರಾಧ ನಿಯಂತ್ರಣಕ್ಕೆ ಇಂಥ ದಿಟ್ಟ ಮನಸ್ಸುಗಳ ಸಹಕಾರ ಬೇಕು’ ಎಂದರು.</p>.<p>ಪ್ರೌಢಶಾಲೆಯ ಉಪಪ್ರಾಚಾರ್ಯ ಸತ್ಯಕುಮಾರ ಬಾಗೋಡಿ, ಪೊಲೀಸ್ ಸಿಬ್ಬಂದಿ ಅಮೋಘ ಕಾಂಬಳೆ, ಮುಖಂಡ ದತ್ತಾತ್ರೇಯ ಐನಾಪೂರ, ಭೀಮಾಶಂಕರ ಚನ್ನಕ್ಕಿ, ವಿಠ್ಠಲರೆಡ್ಡಿ, ಶಿಕ್ಷಕ ಭೀಮಣ್ಣ ಶ್ರೀಕಾಂತ ಊಡಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>