‘ನಾವು ನವೆಂಬರ್ 2 ರಿಂದ 20ರವರೆಗೂ ಅನುಮತಿ ಕೇಳಿದ್ದೆವು. ಆದರೆ, 10 ದಿನ ಮಾತ್ರ ಕೊಟ್ಟಿದ್ದಾರೆ. ಹಬ್ಬಕ್ಕೂ ಎರಡು ದಿನ ಮುಂಚಿತವಾಗಿ ಜನರು ಪಟಾಕಿ ಖರೀದಿಸುತ್ತಾರೆ. ಈ ಬಾರಿ ನಿರೀಕ್ಷೆಗಿಂತ ವ್ಯಾಪಾರ ಕಡಿಮೆಯಾಗಿದ್ದು, ದರವೂ ಹೆಚ್ಚಾಗಿದೆ’ ಎನ್ನುತ್ತಾರೆ ಶರಣಬಸವೇಶ್ವರ ಪಟಾಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಪಡಶೆಟ್ಟಿ. ‘ನಗರದಲ್ಲಿ ಅನಧಿಕೃತ ಪಟಾಕಿ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದೆ. ಹಣ ಪಾವತಿಸಿ ಅನುಮತಿ ಪಡೆದ ನಮಗೆ ನಷ್ಟವಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಇದನ್ನು ತಡೆಯಬೇಕು.ಜಾಗ, ಟೆಂಟ್, ಕಾರ್ಮಿಕರ ವೆಚ್ಚ ಹೆಚ್ಚಾಗಿದೆ. ಅನುಮತಿ ಶುಲ್ಕ ಕಡಿಮೆ ಮಾಡಬೇಕು’ ಎಂದು ಮನವಿ ಮಾಡಿದರು. ‘ವ್ಯಾಪಾರ ಮಂದಗತಿಯಲ್ಲಿದೆ. ಪ್ರತಿ ವರ್ಷ ಸಾವಿರ, ಎರಡು ಸಾವಿರ ಮೊತ್ತದ ಪಟಾಕಿ ಖರೀದಿಸುತ್ತಿದ್ದವರು ಈ ವರ್ಷ ಕಡಿಮೆ ಖರೀದಿಸುತ್ತಿದ್ದಾರೆ. ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದೇವೆ’ ಎನ್ನುತ್ತಾರೆ ಶರಣಬಸವೇಶ್ವರ ಪಟಾಕಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಶಿವಶರಣಪ್ಪ ಹೂಗಾರ.