ತಾಲ್ಲೂಕಿಗೆ ಮಂಜೂರಾದ ಅನುದಾನ ನಿಯಮ ಬಾಹಿರವಾಗಿ ಅನ್ಯ ತಾಲ್ಲೂಕಿಗೆ ವರ್ಗಾಯಿಸಿದ್ದು ಅಕ್ಷಮ್ಯ ಅಪರಾಧ. ತನಿಖೆ ನಡೆಸಿದರೆ ಸಾಲದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ನನ್ನ ಹೋರಾಟ ನಿಲ್ಲದು
ಡಾ.ಅವಿನಾಶ ಜಾಧವ, ಚಿಂಚೋಳಿ ಶಾಸಕ
ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಕೈಗೊಂಡ ಕುಡಿವ ನೀರು ಪೂರೈಸುವ ಯೋಜನೆಗಳು ವಿಫಲವಾಗಿವೆ. ರಸ್ತೆಗಳು ಅಗೆದು ಹಾಗೆಯೇ ಬಿಡಲಾಗಿದೆ. ಇದರ ವಿರುದ್ಧ ನಾನು ಲೋಕಾಯುಕ್ತರಿಗೆ ದೂರು ನೀಡುತ್ತೇನೆ