ಕಲಬುರಗಿಯ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಒಂಬತ್ತು ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು
ಕೆಕೆಆರ್ಡಿಬಿ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ ‘ಲಿಟರೇಚರ್ ಫೆಸ್ಟ್‘ ಮಾಡೆಬೇಕು. ಎರಡು ದಿನ ಹೊರ ಜಿಲ್ಲೆ ರಾಜ್ಯದ ಒಂದಿಬ್ಬರು ನಮ್ಮ ಜಿಲ್ಲೆಯ ಒಂದಿಬ್ಬರು ಸಾಹಿತಿಗಳು ಬರುತ್ತಾರೆ. ಹೆಚ್ಚಿನ ವೆಚ್ಚವಾಗುವುದಿಲ್ಲ
ಡಾ .ಪಿ.ಎಸ್.ಶಂಕರ ವೈದ್ಯ ಸಾಹಿತಿ
ಪ್ರಶಸ್ತಿ ಪುರಸ್ಕೃತರು
ಲೋಕಾರ್ಪಣೆಯಾದ ಪುಸ್ತಕಗಳು 2022ನೇ ಸಾಲಿನ ‘ಕನ್ನಡ ನಾಡು ಸಾಹಿತ್ಯ ಶ್ರೀ’ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಡಾ. ಪಿ.ಎಸ್.ಶಂಕರ ಅವರಿಗೆ ಲೇಖಕಿ ವಿಜಯಶ್ರೀ ಸಬರದ ಅವರಿಗೆ ಶ್ರೀಮತಿ ಮಾಪಮ್ಮ ಶಂಭುಲಿಂಗ ಹೊಸಮನಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ಮುರಗೆಪ್ಪ ಹಡಪದ ಮತ್ತು ಮಹಿಪಾಲರೆಡ್ಡಿ ಮನ್ನೂರ ಅವರಿಗೆ ಪ್ರೊ. ಜಿ.ಎಸ್.ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ಅಕ್ಬರ್ ಸಿ.ಕಾಲಿಮಿರ್ಚಿ ಅವರಿಗೆ ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ಮಲ್ಲಿಕಾರ್ಜುನ ಕಡಕೋಳ ಅವರಿಗೆ ಶ್ರೀಮತಿ ಶರಣಮ್ಮ ವೀರಭದ್ರಪ್ಪ ಅಕ್ಕೋಣಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಶೈಲಜಾ ಬಾಗೇವಾಡಿ ಅವರ ‘ನೆಲೋಗಿ ನೀಲಮ್ಮನ ತ್ರಿಪದಿಗಳು’ ಪ್ರಭು ಖಾನಾಪುರೆ ಅವರ ‘ಕಥೆಯಾದ ಕಥೆಗಾರ ಮತ್ತು ಇತರ ಕಥೆಗಳು’ ಶರಣಗೌಡ ಬಿ.ಪಾಟೀಲ ಅವರ ‘ಫ್ಯಾಷನ್ ಪರಮಾತ್ಮ ಮತ್ತು ಇತರ ಕಥೆಗಳು’ ಡಾ.ಕೆ.ಶಶಿಕಾಂತ ಅವರ ‘ನಿದ್ದೆಗೆಡಿಸಿದ ಬುದ್ಧ’ ಡಾ.ವಿಶ್ವರಾಜ ಪಾಟೀಲ ಅವರ ‘ವಿರಭೋಗ್ಯ ವಸುಂಧರಾ ಮತ್ತು ತ್ರಯಸ್ಥ ನಾಟಕಗಳು’ ಡಾ.ಎಸ್.ಎಸ್.ಗುಬ್ಬಿ ಅವರ ‘ಆತ್ಮ ನಿನಾದ’ ಆಂಜನೇಯ ಜಾಲಿಬೆಂಚಿ ಅವರ ‘ಎಲ್ಲಿಗೆ ಪಯಣ ಯಾವುದು ದಾರಿ‘ ರಾಘವೇಂದ್ರ ಮಂಗಳೂರು ಅವರ ‘ನ್ಯಾನೋ ಕಥೆಗಳು’ ಪ್ರೊ. ಲಿಂಗಪ್ಪ ಗೋನಾಲ ಅವರ ‘ವಚನ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ‘ ಪ್ರಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.