<p><strong>ಕಲಬುರಗಿ:</strong> ಇಂದಿರಾ ಆವಾಸ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಿಸದೆ ನಕಲಿ ಕಾಗದ ಸೃಷ್ಟಿಸಿ, ಸರ್ಕಾರವನ್ನು ವಂಚಿಸಿದ ಆರೋಪ ಸಾಬೀತು ಆಗಿದ್ದರಿಂದ ಚಿಂಚೋಳಿಯ ಜೆಎಂಎಫ್ಸಿ ನ್ಯಾಯಾಲಯವು ಅಪರಾಧಿ ಪಿಡಿಒಗೆ 1 ವರ್ಷ ಜೈಲು ಶಿಕ್ಷೆ ಹಾಗೂ ₹ 90 ಸಾವಿರ ದಂಡ ವಿಧಿಸಿದೆ.</p>.<p>ಚಿಂಚೋಳಿ ತಾಲ್ಲೂಕಿನ ಚೆಂಗಟಾ ಗ್ರಾಮ ಪಂಚಾಯಿತಿಗೆ 2009–10ನೇ ಸಾಲಿನಲ್ಲಿ ಇಂದಿರಾ ಆವಾಸ ಯೋಜನೆ ಅಡಿ ಮನೆಗಳು ಮಂಜೂರು ಆಗಿದ್ದವು. ಪಂಚಾಯಿತಿ ಅಧ್ಯಕ್ಷ, ಪಿಡಿಒ ಹಾಗೂ ಕೆಲವು ಸದಸ್ಯರು ಸೇರಿ ಮನೆಗಳನ್ನು ನಿರ್ಮಾಣ ಮಾಡದೆ, ಸರ್ಕಾರವನ್ನು ವಂಚಿಸಿದ್ದರು. ಈ ಬಗ್ಗೆ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಅಕ್ಕಮಹಾದೇವಿ ಅವರು ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.</p>.<p>ವಿಚಾರಣೆ ನಡೆಸಿದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ದತ್ತಕುಮಾರ ಅವರು, ಗ್ರಾ.ಪಂ ಅಧ್ಯಕ್ಷರಾಗಿದ್ದ ಜ್ಯೋತಿ ರಾಠೋಡ ಅವರಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ, ₹50,000 ದಂಡ, ಬಾಬು ಪೋಮು ಅವರಿಗೆ 6 ತಿಂಗಳ ಸಾದಾ ಜೈಲು ಶಿಕ್ಷೆ, ₹ 40,000 ದಂಡ, ಪಿಡಿಒ ಅಶೋಕ ಚನ್ನಪ್ಪ ಅವರಿಗೆ 1 ವರ್ಷ ಜೈಲು ಶಿಕ್ಷೆ, ₹ 90 ಸಾವಿರ ದಂಡ, ಪಂಚಾಯಿತಿ ಸದಸ್ಯರಾದ ಖ್ಯಾದಮ್ಮ ಶಂಕ್ರೆಪ್ಪ ಮತ್ತು ಸುವರ್ಣಾ ಅಂಬರಾಯ ಅವರಿಗೆ ತಲಾ ₹ 5,000 ದಂಡ ವಿಧಿಸಿ ಆದೇಶಿಸಿದ್ದಾರೆ.</p>.<p>ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಶಾಂತಕುಮಾರ ಜಿ.ಪಾಟೀಲ ವಾದ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಇಂದಿರಾ ಆವಾಸ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಿಸದೆ ನಕಲಿ ಕಾಗದ ಸೃಷ್ಟಿಸಿ, ಸರ್ಕಾರವನ್ನು ವಂಚಿಸಿದ ಆರೋಪ ಸಾಬೀತು ಆಗಿದ್ದರಿಂದ ಚಿಂಚೋಳಿಯ ಜೆಎಂಎಫ್ಸಿ ನ್ಯಾಯಾಲಯವು ಅಪರಾಧಿ ಪಿಡಿಒಗೆ 1 ವರ್ಷ ಜೈಲು ಶಿಕ್ಷೆ ಹಾಗೂ ₹ 90 ಸಾವಿರ ದಂಡ ವಿಧಿಸಿದೆ.</p>.<p>ಚಿಂಚೋಳಿ ತಾಲ್ಲೂಕಿನ ಚೆಂಗಟಾ ಗ್ರಾಮ ಪಂಚಾಯಿತಿಗೆ 2009–10ನೇ ಸಾಲಿನಲ್ಲಿ ಇಂದಿರಾ ಆವಾಸ ಯೋಜನೆ ಅಡಿ ಮನೆಗಳು ಮಂಜೂರು ಆಗಿದ್ದವು. ಪಂಚಾಯಿತಿ ಅಧ್ಯಕ್ಷ, ಪಿಡಿಒ ಹಾಗೂ ಕೆಲವು ಸದಸ್ಯರು ಸೇರಿ ಮನೆಗಳನ್ನು ನಿರ್ಮಾಣ ಮಾಡದೆ, ಸರ್ಕಾರವನ್ನು ವಂಚಿಸಿದ್ದರು. ಈ ಬಗ್ಗೆ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಅಕ್ಕಮಹಾದೇವಿ ಅವರು ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.</p>.<p>ವಿಚಾರಣೆ ನಡೆಸಿದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ದತ್ತಕುಮಾರ ಅವರು, ಗ್ರಾ.ಪಂ ಅಧ್ಯಕ್ಷರಾಗಿದ್ದ ಜ್ಯೋತಿ ರಾಠೋಡ ಅವರಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ, ₹50,000 ದಂಡ, ಬಾಬು ಪೋಮು ಅವರಿಗೆ 6 ತಿಂಗಳ ಸಾದಾ ಜೈಲು ಶಿಕ್ಷೆ, ₹ 40,000 ದಂಡ, ಪಿಡಿಒ ಅಶೋಕ ಚನ್ನಪ್ಪ ಅವರಿಗೆ 1 ವರ್ಷ ಜೈಲು ಶಿಕ್ಷೆ, ₹ 90 ಸಾವಿರ ದಂಡ, ಪಂಚಾಯಿತಿ ಸದಸ್ಯರಾದ ಖ್ಯಾದಮ್ಮ ಶಂಕ್ರೆಪ್ಪ ಮತ್ತು ಸುವರ್ಣಾ ಅಂಬರಾಯ ಅವರಿಗೆ ತಲಾ ₹ 5,000 ದಂಡ ವಿಧಿಸಿ ಆದೇಶಿಸಿದ್ದಾರೆ.</p>.<p>ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಶಾಂತಕುಮಾರ ಜಿ.ಪಾಟೀಲ ವಾದ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>