<p><strong>ಕಲಬುರಗಿ</strong>: ಕ್ರೈಸ್ತ ಸಮುದಾಯದ ಪವಿತ್ರ ಆಚರಣೆಯಾದ ಗುಡ್ ಫ್ರೈಡೆಯನ್ನು ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ, ಪ್ರಾರ್ಥನೆಯೊಂದಿಗೆ ಶುಕ್ರವಾರ ಶದ್ಧಾಭಕ್ತಿಯಿಂದ ಆಚರಿಸಲಾಯಿತು.</p>.<p>ಹಿಂದೂಸ್ತಾನ್ ಕವನೆಂಟ್ ಚರ್ಚ್, ತಾಜ್ ಸುಲ್ತಾನಪುರ ಸಮೀಪದ ಹೋಲಿಪೆಲೊಶಿಪ್ ಚರ್ಚ್ ಸೇರಿ ವಿವಿಧ ಚರ್ಚ್ಗಳಲ್ಲಿ ಏಸು ಕ್ರಿಸ್ತರು ಸಿಲುಬೆಗೆ ಏರಿದ ಅವಧಿಯಲ್ಲಿ ಎದುರಿಸಿದ ಕಷ್ಟ, ಶೋಷಣೆಗಳನ್ನು ಸ್ಮರಿಸುವ ಶಿಲುಬೆಯ ಮಾರ್ಗ, ಅಧ್ಯಾತ್ಮ ಪೂಜಾ ವಿಧಿಯನ್ನು ನಡೆಸಿ, ವಿಶೇಷವಾಗಿ ಪ್ರಾರ್ಥಿಸಲಾಯಿತು.</p>.<p>ನಗರದ ಕ್ರೈಸ್ಟ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ನಲ್ಲಿ ರೇ.ಯಶವಂತ ಮೂಡಲಗಿ, ರೆ. ಪಾಲ್ ಮದಕರ್, ರೆ.ಡಿಸೋಜಾ ಥಾಮಸ್ ನೇತೃತ್ವದಲ್ಲಿ ಯೇಸು ದೇವನು ಸಿಲುಬೆಯ ಮೇಲೆ ನುಡಿದ ಸಪ್ತ ಸಂದೇಶಗಳನ್ನು ಓದಲಾಯಿತು.</p>.<p>ಬೆಳಿಗ್ಗೆ 11.30 ಗಂಟೆಗೆ ಆರಂಭವಾದ ಪಾರ್ಥನೆಯು ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಪೌಲ್ ಮಧುಕರ್ ಡಿ.ಎಸ್, ಸುಲೋಮನ್ ದೀವಾಕರ್, ಅನಿತಾ ಕುಮಾರಿ ಡಿಸೋಜಾ, ಯಶವಂತ ಮೂಡಲಗಿ, ಸುಮಂತ್ ಸರಡಗಿ, ಪಿ.ಎಸ್. ಮಚೀಯಾ, ಡಿಸೋಜ್ ಥಾಮಸ್ ಅವರು ಏಸುದೇವರ ಸಂದೇಶವನ್ನು ಓದಿದರು.</p>.<p>ನಗರದ ವಿವಿಧ ಚರ್ಚ್ಗಳಲ್ಲಿ ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ನಗರದ ಸೇಂಟ್ ಮೇರಿ ಚರ್ಚ್ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಯೇಸುದೇವರ ಸಿಲುಬೆ ಆದಿ ಎಂಬ ಯೇಸು ಮರಣದ ಬಗ್ಗೆ ಧ್ಯಾನಿಸಿದರು. ಬಳಿಕ ಚರ್ಚ್ಗೆ ತೆರೆಳಿದ ನೂರಾರು ಜನರು ಏಸು ದೇವರ ಪಾಡು, ಮರಣದ ಬಗ್ಗೆ ಬೈಬಲ್ ಗ್ರಂಥದ ವಾಚನವನ್ನು ಓದಿದರು.</p>.<p>ಧರ್ಮಗುರು ಸ್ಯಾನಿಲೋಬೊ ಅವರಿಂದ ಏಸು ದೇವರ ಪ್ರಾಣ ತ್ಯಾಗ ಮಾಡಿರುವುದರ ಬಗ್ಗೆ ಪ್ರಬೋಧನೆ ನಡೆಯಿತು. ಕಲಬುರಗಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂದಾ, ಫಾದರ್ ಲಾಜರ್ ಚೇತನ್, ಇತರರು ಭಾಗಿಯಾಗಿದ್ದರು.</p>.<p> <strong>‘ಪ್ರಾಣ ತ್ಯಾಗ ಮಾಡಿದ ದಿನ ಗುಡ್ಪ್ರೈಡೆ’</strong> </p><p>‘ಇಡೀ ಮನುಕುಲದ ರಕ್ಷಣೆಗಾಗಿ ಶಿಲುಬೆ ಮೇಲೆ ಪ್ರಾಣ ತ್ಯಾಗ ಮಾಡಿದ ಈ ದಿನವನ್ನು ‘ಗುಡ್ ಫ್ರೈಡೇ’ ಎಂದು ಆಚರಿಸಲಾಗುತ್ತದೆ. ಸಮುದಾಯದ ಜನ ಮನೆಗಳಲ್ಲಿ ಉಪವಾಸ ಆಚರಿಸುತ್ತಾರೆ. ಯೇಸುವಿನ ಮರಣದಲ್ಲಿ ಪಾಲ್ಗೊಳ್ಳಲು ಇದೊಂದು ಅವಕಾಶ ಎಂದು ಭಾವಿಸುತ್ತಾರೆ’ ಎಂದು ಫಾದರ್ ಜೋಸೆಫ್ ಪ್ರವೀಣ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಕ್ರೈಸ್ತ ಸಮುದಾಯದ ಪವಿತ್ರ ಆಚರಣೆಯಾದ ಗುಡ್ ಫ್ರೈಡೆಯನ್ನು ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ, ಪ್ರಾರ್ಥನೆಯೊಂದಿಗೆ ಶುಕ್ರವಾರ ಶದ್ಧಾಭಕ್ತಿಯಿಂದ ಆಚರಿಸಲಾಯಿತು.</p>.<p>ಹಿಂದೂಸ್ತಾನ್ ಕವನೆಂಟ್ ಚರ್ಚ್, ತಾಜ್ ಸುಲ್ತಾನಪುರ ಸಮೀಪದ ಹೋಲಿಪೆಲೊಶಿಪ್ ಚರ್ಚ್ ಸೇರಿ ವಿವಿಧ ಚರ್ಚ್ಗಳಲ್ಲಿ ಏಸು ಕ್ರಿಸ್ತರು ಸಿಲುಬೆಗೆ ಏರಿದ ಅವಧಿಯಲ್ಲಿ ಎದುರಿಸಿದ ಕಷ್ಟ, ಶೋಷಣೆಗಳನ್ನು ಸ್ಮರಿಸುವ ಶಿಲುಬೆಯ ಮಾರ್ಗ, ಅಧ್ಯಾತ್ಮ ಪೂಜಾ ವಿಧಿಯನ್ನು ನಡೆಸಿ, ವಿಶೇಷವಾಗಿ ಪ್ರಾರ್ಥಿಸಲಾಯಿತು.</p>.<p>ನಗರದ ಕ್ರೈಸ್ಟ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ನಲ್ಲಿ ರೇ.ಯಶವಂತ ಮೂಡಲಗಿ, ರೆ. ಪಾಲ್ ಮದಕರ್, ರೆ.ಡಿಸೋಜಾ ಥಾಮಸ್ ನೇತೃತ್ವದಲ್ಲಿ ಯೇಸು ದೇವನು ಸಿಲುಬೆಯ ಮೇಲೆ ನುಡಿದ ಸಪ್ತ ಸಂದೇಶಗಳನ್ನು ಓದಲಾಯಿತು.</p>.<p>ಬೆಳಿಗ್ಗೆ 11.30 ಗಂಟೆಗೆ ಆರಂಭವಾದ ಪಾರ್ಥನೆಯು ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಪೌಲ್ ಮಧುಕರ್ ಡಿ.ಎಸ್, ಸುಲೋಮನ್ ದೀವಾಕರ್, ಅನಿತಾ ಕುಮಾರಿ ಡಿಸೋಜಾ, ಯಶವಂತ ಮೂಡಲಗಿ, ಸುಮಂತ್ ಸರಡಗಿ, ಪಿ.ಎಸ್. ಮಚೀಯಾ, ಡಿಸೋಜ್ ಥಾಮಸ್ ಅವರು ಏಸುದೇವರ ಸಂದೇಶವನ್ನು ಓದಿದರು.</p>.<p>ನಗರದ ವಿವಿಧ ಚರ್ಚ್ಗಳಲ್ಲಿ ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ನಗರದ ಸೇಂಟ್ ಮೇರಿ ಚರ್ಚ್ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಯೇಸುದೇವರ ಸಿಲುಬೆ ಆದಿ ಎಂಬ ಯೇಸು ಮರಣದ ಬಗ್ಗೆ ಧ್ಯಾನಿಸಿದರು. ಬಳಿಕ ಚರ್ಚ್ಗೆ ತೆರೆಳಿದ ನೂರಾರು ಜನರು ಏಸು ದೇವರ ಪಾಡು, ಮರಣದ ಬಗ್ಗೆ ಬೈಬಲ್ ಗ್ರಂಥದ ವಾಚನವನ್ನು ಓದಿದರು.</p>.<p>ಧರ್ಮಗುರು ಸ್ಯಾನಿಲೋಬೊ ಅವರಿಂದ ಏಸು ದೇವರ ಪ್ರಾಣ ತ್ಯಾಗ ಮಾಡಿರುವುದರ ಬಗ್ಗೆ ಪ್ರಬೋಧನೆ ನಡೆಯಿತು. ಕಲಬುರಗಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂದಾ, ಫಾದರ್ ಲಾಜರ್ ಚೇತನ್, ಇತರರು ಭಾಗಿಯಾಗಿದ್ದರು.</p>.<p> <strong>‘ಪ್ರಾಣ ತ್ಯಾಗ ಮಾಡಿದ ದಿನ ಗುಡ್ಪ್ರೈಡೆ’</strong> </p><p>‘ಇಡೀ ಮನುಕುಲದ ರಕ್ಷಣೆಗಾಗಿ ಶಿಲುಬೆ ಮೇಲೆ ಪ್ರಾಣ ತ್ಯಾಗ ಮಾಡಿದ ಈ ದಿನವನ್ನು ‘ಗುಡ್ ಫ್ರೈಡೇ’ ಎಂದು ಆಚರಿಸಲಾಗುತ್ತದೆ. ಸಮುದಾಯದ ಜನ ಮನೆಗಳಲ್ಲಿ ಉಪವಾಸ ಆಚರಿಸುತ್ತಾರೆ. ಯೇಸುವಿನ ಮರಣದಲ್ಲಿ ಪಾಲ್ಗೊಳ್ಳಲು ಇದೊಂದು ಅವಕಾಶ ಎಂದು ಭಾವಿಸುತ್ತಾರೆ’ ಎಂದು ಫಾದರ್ ಜೋಸೆಫ್ ಪ್ರವೀಣ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>