<p><strong>ಚಿಂಚೋಳಿ</strong>: ತಾಲ್ಲೂಕಿನಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಇದರಿಂದ ಮುಂಗಾರು ಚಟುವಟಿಕೆಗಳು ಬಿರುಸು ಪಡೆಯುವಂತಾಗಿದೆ.</p>.<p>ಮೃಗಶಿರಾ(ಮಿರುಗಾ) ಮಳೆ ಪ್ರಾರಂಭವಾದ ಮೇಲೆ ಮಳೆಯ ಕೊರತೆ ಎದುರಾಗಿತ್ತು ಆದರೆ ಮೃಗಶಿರಾ ಮಳೆಯ ಎರಡನೇ ಚರಣದಲ್ಲಿ ಉತ್ತಮ ಮಳೆ ಸುರಿಯುವ ಮೂಲಕ ಮುಂಗಾರು ಬಿತ್ತನೆ ನಡೆಸಿದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.</p>.<p>ಗುಡುಗು ಮಿಂಚಿನೊಂದಿಗೆ ಸುರಿದ ಜೋರು ಮಳೆಯಿಂದ ಚಿಂಚೋಳಿ, ಚಂದಾಪುರ, ಸುಲೇಪೇಟ, ಚಿಮ್ಮನಚೋಡ, ಐನಾಪುರ, ಚಂದನಕೇರಾ, ಯಲಕಪಳ್ಳಿ, ಐನೋಳ್ಳಿ, ನರನಾಳ ಮೊದಲಾದ ಕಡೆಗಳಲ್ಲಿ ಜೋರು ಮಳೆ ಸುರಿದು ಚರಂಡಿಗಳು ತುಂಬಿ ಹರಿದವು.</p>.<p>ರೈತರ ಹೊಲದಲ್ಲಿ ಉಳುಮೆ ಮಾಡಿದ ಸಾಲುಗಳಲ್ಲಿ ನೀರು ಹರಿದು ಹದವಾದ ಮಳೆಯಿಂದ ವರುಣದೇವ ಭೂಮಿಯನ್ನು ತಣಿಸಿದನು.</p>.<p>ತಾಲ್ಲೂಕಿನ ಮರಪಳ್ಳಿ, ಗಡಿಕೇಶ್ವಾರ, ರಾಯಕೋಡ, ಪೋಲಕಪಳ್ಳಿ, ಚಿಮ್ಮಾಈದಲಾಯಿ, ಅಣವಾರ, ಕನಕಪುರ, ಗಂಗನಪಳ್ಳಿ, ಗಾರಂಪಳ್ಳಿ, ಗೌಡನಹಳ್ಳಿ ದೇಗಲಮಡಿ, ಖುದಾವಂದಪುರ, ತುಮಕುಂಟಾ ಸೇರಿದಂತೆ ಹಲವಾರು ಕಡೆ ಉತ್ತಮ ಮಳೆಯಾಗಿದೆ.</p>.<p>ಬೀಜ ಗೊಬ್ಬರ ಸಂಗ್ರಹಿಸಿಕೊಂಡ ರೈತರು ಬಿತ್ತನೆಗೆ ಅಣಿಯಾಗುತ್ತಿರುವ ಹೊತ್ತಲ್ಲಿ ಸುರಿದ ಮಳೆ ರೈತರಿಗೆ ಸಂತಸ ತಂದರೆ, ಈಗಾಗಲೇ ಬಿತ್ತನೆ ನಡೆಸಿದ ರೈತರಿಗೆ ಬಂಪರ್ ಖುಷಿ ಉಂಟು ಮಾಡಿದೆ.</p>.<p>ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಉಲ್ಲಾಸಗೊಂಡಿದ್ದ ರೈತರು ಬಿತ್ತನೆಯಲ್ಲಿ ತೊಡಗಿದ್ದರು ಈಗ ಸುರಿದ ಮೃಗಶಿರಾ ಮಳೆ ಮುಂಗಾರು ಹಂಗಾಮಿಗೆ ವರವಾಗಿ ಪರಿಣಮಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ತಾಲ್ಲೂಕಿನಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಇದರಿಂದ ಮುಂಗಾರು ಚಟುವಟಿಕೆಗಳು ಬಿರುಸು ಪಡೆಯುವಂತಾಗಿದೆ.</p>.<p>ಮೃಗಶಿರಾ(ಮಿರುಗಾ) ಮಳೆ ಪ್ರಾರಂಭವಾದ ಮೇಲೆ ಮಳೆಯ ಕೊರತೆ ಎದುರಾಗಿತ್ತು ಆದರೆ ಮೃಗಶಿರಾ ಮಳೆಯ ಎರಡನೇ ಚರಣದಲ್ಲಿ ಉತ್ತಮ ಮಳೆ ಸುರಿಯುವ ಮೂಲಕ ಮುಂಗಾರು ಬಿತ್ತನೆ ನಡೆಸಿದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.</p>.<p>ಗುಡುಗು ಮಿಂಚಿನೊಂದಿಗೆ ಸುರಿದ ಜೋರು ಮಳೆಯಿಂದ ಚಿಂಚೋಳಿ, ಚಂದಾಪುರ, ಸುಲೇಪೇಟ, ಚಿಮ್ಮನಚೋಡ, ಐನಾಪುರ, ಚಂದನಕೇರಾ, ಯಲಕಪಳ್ಳಿ, ಐನೋಳ್ಳಿ, ನರನಾಳ ಮೊದಲಾದ ಕಡೆಗಳಲ್ಲಿ ಜೋರು ಮಳೆ ಸುರಿದು ಚರಂಡಿಗಳು ತುಂಬಿ ಹರಿದವು.</p>.<p>ರೈತರ ಹೊಲದಲ್ಲಿ ಉಳುಮೆ ಮಾಡಿದ ಸಾಲುಗಳಲ್ಲಿ ನೀರು ಹರಿದು ಹದವಾದ ಮಳೆಯಿಂದ ವರುಣದೇವ ಭೂಮಿಯನ್ನು ತಣಿಸಿದನು.</p>.<p>ತಾಲ್ಲೂಕಿನ ಮರಪಳ್ಳಿ, ಗಡಿಕೇಶ್ವಾರ, ರಾಯಕೋಡ, ಪೋಲಕಪಳ್ಳಿ, ಚಿಮ್ಮಾಈದಲಾಯಿ, ಅಣವಾರ, ಕನಕಪುರ, ಗಂಗನಪಳ್ಳಿ, ಗಾರಂಪಳ್ಳಿ, ಗೌಡನಹಳ್ಳಿ ದೇಗಲಮಡಿ, ಖುದಾವಂದಪುರ, ತುಮಕುಂಟಾ ಸೇರಿದಂತೆ ಹಲವಾರು ಕಡೆ ಉತ್ತಮ ಮಳೆಯಾಗಿದೆ.</p>.<p>ಬೀಜ ಗೊಬ್ಬರ ಸಂಗ್ರಹಿಸಿಕೊಂಡ ರೈತರು ಬಿತ್ತನೆಗೆ ಅಣಿಯಾಗುತ್ತಿರುವ ಹೊತ್ತಲ್ಲಿ ಸುರಿದ ಮಳೆ ರೈತರಿಗೆ ಸಂತಸ ತಂದರೆ, ಈಗಾಗಲೇ ಬಿತ್ತನೆ ನಡೆಸಿದ ರೈತರಿಗೆ ಬಂಪರ್ ಖುಷಿ ಉಂಟು ಮಾಡಿದೆ.</p>.<p>ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಉಲ್ಲಾಸಗೊಂಡಿದ್ದ ರೈತರು ಬಿತ್ತನೆಯಲ್ಲಿ ತೊಡಗಿದ್ದರು ಈಗ ಸುರಿದ ಮೃಗಶಿರಾ ಮಳೆ ಮುಂಗಾರು ಹಂಗಾಮಿಗೆ ವರವಾಗಿ ಪರಿಣಮಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>