<p><strong>ಕಲಬುರಗಿ:</strong> ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಯುವಜನೋತ್ಸವದ ಎರಡನೇ ದಿನವೂ ಸಡಗರ ಮನೆ ಮಾಡಿತ್ತು.</p><p>ಜ್ಞಾನಗಂಗಾ ಆವರಣದ ಕಾರ್ಯಸೌಧದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗಾಯನ, ಕ್ಲಾಸಿಕ್ ಇನ್ಸ್ಟ್ರುಮೆಂಟ್ ವಾದನ, ಏಕವ್ಯಕ್ತಿ ಲಘು ಸಂಗೀತ ರಂಗು ತುಂಬಿತ್ತು.</p><p>ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏಕಾಂಕ ನಾಟಕ, ಮಿಮಿಕ್ರಿ, ಮೈಮ್, ಜನಪದ ಬುಡಕಟ್ಟು ನೃತ್ಯದ ಝಲಕ್ ಕಂಡುಬಂತು. ಭಾಸ್ಕರ್ ಸಭಾಂಗಣದಲ್ಲಿ ಬುದ್ಧಿಶಕ್ತಿ ಒರೆಗೆ ಹಚ್ಚುವ ರಸಪ್ರಶ್ನೆ ಸ್ಪರ್ಧೆ ಜರುಗಿದವು. </p><p>ಇದರೊಂದಿಗೆ ವಾಕ್ಪಟುತ್ವ ಸ್ಪರ್ಧೆ, ಚರ್ಚಾ ಸ್ಪರ್ಧೆ, ಅಂತಿಮಮಟ್ಟದ ರಸಪ್ರಶ್ನೆ ಹಾಗೂ ಹಿಂದಿ ಚರ್ಚಾ ಸ್ಪರ್ಧೆಗಳು ಜರುಗಿದವು. ಎಲ್ಲ ಬಗೆಯ ಸ್ಪರ್ಧೆಗಳಲ್ಲಿ ಯುವ ಪ್ರತಿಭೆಗಳು ಉತ್ಸಾಹದಿಂದ ಭಾಗವಹಿಸಿ, ಯುವಜನೋತ್ಸವಕ್ಕೆ ಮೆರುಗು ತಂದರು.</p><p>ಬೇರೆ ಸಭಾಂಗಣದಲ್ಲಿ ನಿಗದಿತ ಸಮಯಕ್ಕೆ ಸ್ಪರ್ಧೆಗಳು ಮುಗಿಯುತ್ತಿದ್ದಂತೆ ಯುವ ಸಮೂಹ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಧಾವಿಸಿದರು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಶಿಳ್ಳೆ, ಕೂಗಾಟ, ಹಾಗೂ ಚಪ್ಪಾಳೆ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. </p><p><strong>ಗಮನಸೆಳೆದ ‘ದಲಿತ ಭಾರತ’ ನಾಟಕ:</strong> ಯುವಜನೋತ್ಸವದಲ್ಲಿ ಕಲಬುರಗಿಯ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ‘ದಲಿತ ಭಾರತ’ ನಾಟಕ ಎಲ್ಲರ ಮೆಚ್ಚುಗೆ ಪಡೆಯಿತು. ನಾಟಕಕ್ಕೆ ರಂಗಕರ್ಮಿ ವಿಶ್ವರಾಜ ಪಾಟೀಲ ನಿರ್ದೇಶನವಿತ್ತು.</p>
<p><strong>ಕಲಬುರಗಿ:</strong> ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಯುವಜನೋತ್ಸವದ ಎರಡನೇ ದಿನವೂ ಸಡಗರ ಮನೆ ಮಾಡಿತ್ತು.</p><p>ಜ್ಞಾನಗಂಗಾ ಆವರಣದ ಕಾರ್ಯಸೌಧದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗಾಯನ, ಕ್ಲಾಸಿಕ್ ಇನ್ಸ್ಟ್ರುಮೆಂಟ್ ವಾದನ, ಏಕವ್ಯಕ್ತಿ ಲಘು ಸಂಗೀತ ರಂಗು ತುಂಬಿತ್ತು.</p><p>ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏಕಾಂಕ ನಾಟಕ, ಮಿಮಿಕ್ರಿ, ಮೈಮ್, ಜನಪದ ಬುಡಕಟ್ಟು ನೃತ್ಯದ ಝಲಕ್ ಕಂಡುಬಂತು. ಭಾಸ್ಕರ್ ಸಭಾಂಗಣದಲ್ಲಿ ಬುದ್ಧಿಶಕ್ತಿ ಒರೆಗೆ ಹಚ್ಚುವ ರಸಪ್ರಶ್ನೆ ಸ್ಪರ್ಧೆ ಜರುಗಿದವು. </p><p>ಇದರೊಂದಿಗೆ ವಾಕ್ಪಟುತ್ವ ಸ್ಪರ್ಧೆ, ಚರ್ಚಾ ಸ್ಪರ್ಧೆ, ಅಂತಿಮಮಟ್ಟದ ರಸಪ್ರಶ್ನೆ ಹಾಗೂ ಹಿಂದಿ ಚರ್ಚಾ ಸ್ಪರ್ಧೆಗಳು ಜರುಗಿದವು. ಎಲ್ಲ ಬಗೆಯ ಸ್ಪರ್ಧೆಗಳಲ್ಲಿ ಯುವ ಪ್ರತಿಭೆಗಳು ಉತ್ಸಾಹದಿಂದ ಭಾಗವಹಿಸಿ, ಯುವಜನೋತ್ಸವಕ್ಕೆ ಮೆರುಗು ತಂದರು.</p><p>ಬೇರೆ ಸಭಾಂಗಣದಲ್ಲಿ ನಿಗದಿತ ಸಮಯಕ್ಕೆ ಸ್ಪರ್ಧೆಗಳು ಮುಗಿಯುತ್ತಿದ್ದಂತೆ ಯುವ ಸಮೂಹ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಧಾವಿಸಿದರು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಶಿಳ್ಳೆ, ಕೂಗಾಟ, ಹಾಗೂ ಚಪ್ಪಾಳೆ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. </p><p><strong>ಗಮನಸೆಳೆದ ‘ದಲಿತ ಭಾರತ’ ನಾಟಕ:</strong> ಯುವಜನೋತ್ಸವದಲ್ಲಿ ಕಲಬುರಗಿಯ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ‘ದಲಿತ ಭಾರತ’ ನಾಟಕ ಎಲ್ಲರ ಮೆಚ್ಚುಗೆ ಪಡೆಯಿತು. ನಾಟಕಕ್ಕೆ ರಂಗಕರ್ಮಿ ವಿಶ್ವರಾಜ ಪಾಟೀಲ ನಿರ್ದೇಶನವಿತ್ತು.</p>