ರಾಜಾಪುರ, ಕಂದಗೂಳ, ತೆಂಗಳಿ, ಭರತನೂರ, ಕಲಗುರ್ತಿ, ಕಣಸೂರ, ಹೆಬ್ಬಾಳ ಗ್ರಾಮ ಸೇರಿದಂತೆ ಒಟ್ಟು 148 ಮನೆಗಳಿಗೆ ನೀರು ನುಗ್ಗಿದೆ. ಕಣಸೂರ ಮತ್ತು ತೆಂಗಳಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿ ಹೆಬ್ಬಾಳದಲ್ಲೂ ತಯಾರಿ ಮಾಡಿಕೊಳ್ಳಲಾಗಿದೆ. ಒಟ್ಟು 9 ಮನೆಗಳು ಕುಸಿದು ಬಿದ್ದಿವೆ. ಅಲ್ಲಾಪುರ ಡ್ಯಾಂ ಕೆಳಗಿನ ಹೊಲಗಳು ನೀರುಪಾಲಾಗಿವೆ.