ಜಿಲ್ಲೆಯ ಮುಗಳನಾಗಾಂವ ಗ್ರಾಮದ ಸುರೇಶ ಕಂಬಾರ ಹಾಗೂ ಮಹಾದೇವಿ ದಂಪತಿಯ ಪುತ್ರ ಸಿದ್ದು (7) ಮೃತಪಟ್ಟ ಬಾಲಕ. ಕಳೆದ ಒಂದು ವಾರದಿಂದ ನಗರದಲ್ಲಿ ಮಳೆ ಸುರಿಯುತ್ತಿದ್ದು, ವಿದ್ಯುತ್ ವೈರ್ಗಳಲ್ಲಿ ದೋಷ ಕಾಣಿಸಿಕೊಂಡು ವಿದ್ಯುತ್ ಶಾಕ್ ಹೊಡೆಯುತ್ತಿದೆ. ಹೈಮಾಸ್ಟ್ ಕಂಬದ ಬಳಿ ಒಬ್ಬನೇ ಆಟವಾಡಲು ಹೋದ ಬಾಲಕ ಕಂಬದ ಕೆಳಭಾಗದಲ್ಲಿ ಅಳವಡಿಸಲಾದ ವಿದ್ಯುತ್ ಬಾಕ್ಸ್ ಬಳಿ ಕೈ ಇಟ್ಟಿದ್ದರಿಂದ ವಿದ್ಯುತ್ ಶಾಕ್ ಹೊಡೆದಿದೆ.