<p><strong>ಕಲಬುರ್ಗಿ:</strong> ನಗರದ ಜಿಲ್ಲಾ ನ್ಯಾಯಾಲಯ ಮುಂಭಾಗ ಹೊಂದಿಕೊಂಡಂತೆ ಹಾಗೂ ಕೇಂದ್ರ ಬಸ್ ನಿಲ್ದಾಣ ರಸ್ತೆ ಬದಿ ಅಲ್ಲಲ್ಲಿ ಅಕ್ರಮವಾಗಿ ಹಾಕಿದ್ದ 70ಕ್ಕೂ ಅಧಿಕ ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.</p>.<p>ಹಲವು ತಿಂಗಳ ಬಳಿಕ ನಡೆದ ಅತಿ ದೊಡ್ಡ ತೆರವು ಕಾರ್ಯಾಚರಣೆ ಇದಾಗಿದೆ.</p>.<p>ಬೆಳಿಗ್ಗೆಯೇ ಪಾಲಿಕೆಯ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಜೆಸಿಬಿಗಳು ಒಂದೊಂದಾಗಿ ಗೂಡಂಗಡಿಯ ಮುಂಭಾಗದ ಶಟರ್ಗಳನ್ನು ಕಿತ್ತು ಹಾಕಿದವು.</p>.<p>ಜಿಲ್ಲಾ ನ್ಯಾಯಾಲಯದ ಮುಂಭಾಗ ಮತ್ತು ಡಿ.ಸಿ. ಕಚೇರಿ ಹಿಂಭಾಗದಿಂದ ಹಾದು ಹೋಗುವ ರಸ್ತೆ ಬದಿ ಹಾಕಿಕೊಂಡಿದ ಝೆರಾಕ್ಸ್, ದಸ್ತು ಬರಹಗಾರರ ಕಚೇರಿ, ಹೋಟೆಲ್ಗಳನ್ನು ತೆರವುಗೊಳಿಸಲಾಯಿತು. ಈ ಅಂಗಡಿಗಳನ್ನು ಇಟ್ಟುಕೊಳ್ಳಲು ಪಾಲಿಕೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಪಾಲಿಕೆಯ ಎಂಜಿನಿಯರ್ ತಿಳಿಸಿದರು.</p>.<p>ಮಂಗಳವಾರ ಈ ರಸ್ತೆಯಲ್ಲೂ ಇರುವ ಕಬ್ಬಿನ ಹಾಲಿನ ಅಂಗಡಿ, ಎಳನೀರು ಅಂಗಡಿ, ಪೀಠೋಪಕರಣ ಅಂಗಡಿ, ಗೃಹ ಬಳಕೆ ವಸ್ತುಗಳ ಮಾರಾಟ ಮಾಡುವ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಈ ವೇಳೆಯಲ್ಲಿ ಕೆಲವು ಅಂಗಡಿದಾರರು ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ನಗರದ ಜಿಲ್ಲಾ ನ್ಯಾಯಾಲಯ ಮುಂಭಾಗ ಹೊಂದಿಕೊಂಡಂತೆ ಹಾಗೂ ಕೇಂದ್ರ ಬಸ್ ನಿಲ್ದಾಣ ರಸ್ತೆ ಬದಿ ಅಲ್ಲಲ್ಲಿ ಅಕ್ರಮವಾಗಿ ಹಾಕಿದ್ದ 70ಕ್ಕೂ ಅಧಿಕ ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.</p>.<p>ಹಲವು ತಿಂಗಳ ಬಳಿಕ ನಡೆದ ಅತಿ ದೊಡ್ಡ ತೆರವು ಕಾರ್ಯಾಚರಣೆ ಇದಾಗಿದೆ.</p>.<p>ಬೆಳಿಗ್ಗೆಯೇ ಪಾಲಿಕೆಯ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಜೆಸಿಬಿಗಳು ಒಂದೊಂದಾಗಿ ಗೂಡಂಗಡಿಯ ಮುಂಭಾಗದ ಶಟರ್ಗಳನ್ನು ಕಿತ್ತು ಹಾಕಿದವು.</p>.<p>ಜಿಲ್ಲಾ ನ್ಯಾಯಾಲಯದ ಮುಂಭಾಗ ಮತ್ತು ಡಿ.ಸಿ. ಕಚೇರಿ ಹಿಂಭಾಗದಿಂದ ಹಾದು ಹೋಗುವ ರಸ್ತೆ ಬದಿ ಹಾಕಿಕೊಂಡಿದ ಝೆರಾಕ್ಸ್, ದಸ್ತು ಬರಹಗಾರರ ಕಚೇರಿ, ಹೋಟೆಲ್ಗಳನ್ನು ತೆರವುಗೊಳಿಸಲಾಯಿತು. ಈ ಅಂಗಡಿಗಳನ್ನು ಇಟ್ಟುಕೊಳ್ಳಲು ಪಾಲಿಕೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಪಾಲಿಕೆಯ ಎಂಜಿನಿಯರ್ ತಿಳಿಸಿದರು.</p>.<p>ಮಂಗಳವಾರ ಈ ರಸ್ತೆಯಲ್ಲೂ ಇರುವ ಕಬ್ಬಿನ ಹಾಲಿನ ಅಂಗಡಿ, ಎಳನೀರು ಅಂಗಡಿ, ಪೀಠೋಪಕರಣ ಅಂಗಡಿ, ಗೃಹ ಬಳಕೆ ವಸ್ತುಗಳ ಮಾರಾಟ ಮಾಡುವ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಈ ವೇಳೆಯಲ್ಲಿ ಕೆಲವು ಅಂಗಡಿದಾರರು ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>