ಬೆಣ್ಣೆತೊರಾ ಜಲಾಶಯದಿಂದ 12 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ನದಿಯಲ್ಲಿ ಪ್ರವಾಹ ಭಾರೀ ಹೆಚ್ಚಳವಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದೆ. ನದಿಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. ಇಂಗಳಗಿ, ಕಡಬೂರು, ಕುಂದನೂರು ಸಹಿತ ನದಿ ದಂಡೆಯ ಜನರು ಅತ್ಯಂತ ಜಾಗೃತೆಯಿಂದ ಇರಬೇಕು. ಈ ರಸ್ತೆಯ ಮೇಲೆ ಸಂಚರಿಸುವ ಸಾಹಸ ಮಾಡಬಾರದು ಎಂದು ಸ್ಥಳೀಯ ಪಿಎಸ್ಐ ವಿಜಯಕುಮಾರ ಭಾವಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.