‘ಗ್ರಾಮ ಮಟ್ಟದಲ್ಲಿ ಈಗ ಕೋವಿಡ್ ವಿಪರೀತವಾಗಿದೆ. ಹೀಗಾಗಿ, ರೋಗದ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಸೋಂಕಿತರನ್ನು ಗುರುತಿಸಿವುದು, ಲಾಕ್ಡೌನ್ ಮತ್ತು ಕೋವಿಡ್ ವಲಯಗಳಲ್ಲಿ ಅವಶ್ಯಕ ಸೇವೆಗಳನ್ನು ಮುಟ್ಟಿಸುವುದು, ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಆಹಾರ ಪದಾರ್ಥ ತಲುಪಿಸುವುದು, ಕಂದಾಯ ಬಿಲ್ ಸಂಗ್ರಹ, ಗ್ರಾಮ ಆರೋಗ್ಯ ಸೇವಾ ಕೇಂದ್ರ, ಕ್ವಾರಂಟೈನ್ ಕೇಂದ್ರಗಳಲ್ಲಿ ಮೇಲ್ವಿಚಾಣೆ... ಹೀಗೆ ಹಲವು ಕಠಿಣ ಕೆಲಗಳಲ್ಲಿಯೂ ಪಂಚಾಯಿತಿ ನೌಕರರು ಭಾಗಿಯಾಗಿದ್ದಾರೆ. ರಜೆ ಪಡೆಯದೇ ಜೀವದ ಹಂಗು ತೊರೆದು ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಕನಿಷ್ಠ ಒಂದು ಮಾಸ್ಕ್ ಕೂಡ ನೀಡಲಾಗುತ್ತಿಲ್ಲ. ಆದರೂ ಸರ್ಕಾರಗಳು ಈವರೆಗೆ ನಮ್ಮನ್ನು ವಾರಿಯರ್ಸ್ ಎಂದು ಪರಿಗಣಿಸಿರಲಿಲ್ಲ. ಈಗ ಜೀವವಿಮೆಗೆ ಒಳಪಡಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಹಲವು ನೌಕರರು ಕೋವಿಡ್ ಕಾರಣ ಮೃತಪಟ್ಟಿದ್ದಾರೆ. ಅವರಿಗೂ ವಿಮೆ ಒಳಪಡಬೇಕು ಎಂಬುದು ನಮ್ಮ ಕೋರಿಕೆ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎಚ್. ಶಿವಾನಂದ ಮನವಿ ಮಾಡಿದ್ದಾರೆ.