ಪಕ್ಷದ ಅಫಜಲಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಕುಮಾರ ನಾಟೀಕಾರ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲಿ ಅಭಿಯಾನಕ್ಕೆ ಬಂಡೆಪ್ಪ ಕಾಶೆಂಪೂರ ಚಾಲನೆ ನೀಡಲಿದ್ದು, ದೇವಲ ಗಾಣಗಾಪುರದ ಅಮರ್ಜಾ, ಭೀಮಾ ನದಿ ಸಂಗಮ ಸ್ಥಳದಲ್ಲಿ ನಾಸಿರ್ ಹುಸೇನ್ ಉಸ್ತಾದ್ ಅವರು ಚಾಲನೆ ನೀಡಲಿದ್ದಾರೆ. ನಂತರ ಜಾಗೃತಿ ಮೂಡಿಸುವ ವಾಹನಗಳಲ್ಲಿ ಪಕ್ಷದ ಮುಖಂಡರು ಸೊನ್ನ ಭೀಮಾ ಬ್ಯಾರೇಜ್, ಅಮರ್ಜಾ ಜಲಾಶಯ, ಕೆಳದಂಡೆ ಮಲ್ಲಾಮಾರಿ ಸೇರಿದಂತೆ ವಿವಿಧ ಯೋಜನೆಗಳಿರುವ ಅಣೆಕಟ್ಟೆ, ಬ್ರಿಡ್ಜ್ ಕಂ ಬ್ಯಾರೇಜ್ಗೆ ತೆರಳಿ ಅರಿವು ಮೂಡಿಸಲಿದ್ದಾರೆ. ಈ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ದಿನಾಂಕ ಶೀಘ್ರದಲ್ಲೇ ಅಂತಿಮವಾಗಲಿದೆ’ ಎಂದು ಹೇಳಿದರು.