ಕಲಬುರಗಿ: ಮರಳು ಅಕ್ರಮ ಸಾಗಾಟ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಜೇವರ್ಗಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಭೀಮನಗೌಡ ಬಿರಾದಾರ, ನೆಲೋಗಿ ಠಾಣೆ ಪಿಎಸ್ಐ ಗೌತಮ್ ಹಾಗೂ ಕಾನ್ಸ್ಟೆಬಲ್ ರಾಜಶೇಖರ ಅವರನ್ನು ಎಸ್ಪಿ ಇಶಾ ಪಂತ್ ಅವರು ಅಮಾನತುಗೊಳಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.
ಜೇವರ್ಗಿ ತಾಲ್ಲೂಕಿನ ಹುಲ್ಲೂರು ಗ್ರಾಮದ ಬಳಿ ಭೀಮಾ ನದಿಯ ದಡದಲ್ಲಿ ಶೇಖರಿಸಿ ಇಟ್ಟಿದ್ದ ಮರಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಮುಂದಾದ ಪೊಲೀಸ್ ಕಾನ್ಸ್ಟೆಬಲ್ ಮಯೂರ ಚವ್ಹಾಣ ಅವರ ಮೇಲೆ ಹಾಯಿಸಿ ಚಾಲಕ ಕೊಲೆ ಮಾಡಿದ್ದ. ಹೀಗಾಗಿ, ಅಕ್ರಮ ತಡೆಯಲು ಮುಂದಾಗದ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ... ಕಲಬುರಗಿ | ಮರಳು ಅಕ್ರಮ ಸಾಗಾಣಿಕೆ: ಪಿಎಸ್ಐ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು