ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ | ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣದ ಸ್ಪರ್ಶ: ಸಂಸದ ಉಮೇಶ ಜಾಧವ

ಕಲಬುರಗಿ, ವಾಡಿ, ಶಹಾಬಾದ್, ಗಾಣಗಾಪುರ ರೋಡ್ ನಿಲ್ದಾಣಗಳ ಮೇಲ್ದರ್ಜೆ ಕಾಮಗಾರಿಗೆ ಪ್ರಧಾನಿ ಚಾಲನೆ
Published : 6 ಆಗಸ್ಟ್ 2023, 14:24 IST
Last Updated : 6 ಆಗಸ್ಟ್ 2023, 14:24 IST
ಫಾಲೋ ಮಾಡಿ
Comments
ಕಲಬುರಗಿಯ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಅಮೃತ ಭಾರತ ನಿಲ್ದಾಣ ಯೋಜನೆಯ ಅಡಿಗಲ್ಲು ಕಾರ್ಯಕ್ರಮವನ್ನು ಸಂಸದ ಡಾ.ಉಮೇಶ ಜಾಧವ ಉದ್ಘಾಟಿಸಿದರು. ವಿಧಾನ ಪರಿಷತ್ತು ಸದಸ್ಯ ಬಿ.ಜಿ.ಪಾಟೀಲ ಮೇಯರ್ ವಿಶಾಲ ದರ್ಗಿ ವಿಧಾನ ಪರಿಷತ್ತು ಸದಸ್ಯ ಶಶೀಲ್ ನಮೋಶಿ ಇದ್ದರು –ಪ್ರಜಾವಾಣಿ ಚಿತ್ರ
ಕಲಬುರಗಿಯ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಅಮೃತ ಭಾರತ ನಿಲ್ದಾಣ ಯೋಜನೆಯ ಅಡಿಗಲ್ಲು ಕಾರ್ಯಕ್ರಮವನ್ನು ಸಂಸದ ಡಾ.ಉಮೇಶ ಜಾಧವ ಉದ್ಘಾಟಿಸಿದರು. ವಿಧಾನ ಪರಿಷತ್ತು ಸದಸ್ಯ ಬಿ.ಜಿ.ಪಾಟೀಲ ಮೇಯರ್ ವಿಶಾಲ ದರ್ಗಿ ವಿಧಾನ ಪರಿಷತ್ತು ಸದಸ್ಯ ಶಶೀಲ್ ನಮೋಶಿ ಇದ್ದರು –ಪ್ರಜಾವಾಣಿ ಚಿತ್ರ
‘ಪಶ್ಚಿಮ ಬಂಗಾಳದಂತೆ ಗೂಂಡಾಗಿರಿ ರಾಜಕೀಯ’
‘ಗ್ರಾಮ ಪಂಚಾಯಿತಿಯ ಅಮಾಯಕ ಸದಸ್ಯರಿಗೆ ಚಾಕು ಚೂರಿ ತೋರಿಸಿ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳದಂತೆ ಗೂಂಡಾಗಿರಿ ರಾಜಕೀಯ ನಡೆಯುತ್ತಿದೆ’ ಎಂದು ಸಂಸದ ಡಾ. ಉಮೇಶ ಜಾಧವ ಆರೋಪಿಸಿದರು. ಮಾಧ್ಯಮಗಳ ಜತೆ ಮಾತನಾಡಿದ ಅವರು ‘ಕಲಬರಗಿ ದಕ್ಷಿಣ ಚಿಂಚೋಳಿ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಅಪಹರಣ ಮಾಡಿ ಹೆದರಿಸಿ ಬೆದರಿಸಿ ಚುನಾವಣೆ ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಇದು ನಾಚಿಕೆಗೇಡಿನ ಕೆಲಸ. ಇದಕ್ಕೆ ಕಡಿವಾಣ ಹಾಕು ಕ್ರಮಕ್ಕೆ ಮುಂದಾಗಬೇಕು’ ಎಂದರು. ‘ಜವಳಿ ಪಾರ್ಕ್‌ಗಾಗಿ ಹೂಡಿಕೆದಾರರನ್ನು ಸೆಳೆಯಲು ಎಸ್‌ಪಿವಿ(ವಿಶೇಷ ಉದ್ದೇಶದ ವ್ಯವಸ್ಥೆ) ರಚಿಸಲಾಗುತ್ತಿದೆ. ಬಹಳಷ್ಟು ಕಾರ್ಯವಿಧಾನಗಳು ಇರುವುದರಿಂದ ಹಂತ–ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು. ರಾಜ್ಯದ ಸಹಕಾರದ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಭರವಸೆ ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT