ಬ್ರಹ್ಮಕುಮಾರಿ ಸಂಸ್ಥೆಯ ಮೈಸೂರುಉಪವಲಯದ ಮುಖ್ಯಸ್ಥರಾದ ರಾಜಯೋಗಿನಿ ಲಕ್ಷ್ಮಿ ಅಕ್ಕ ಮಾತನಾಡಿ,ಕರ್ನಾಟಕ ಸೇರಿ ಇಡೀ ಭಾರತ ಹಾಗೂ ವಿಶ್ವದಲ್ಲಿ ನಡೆಯುತ್ತಿರುವ ಹಿಂಸಾಚಾರ, ಭ್ರಷ್ಟಾಚಾರ, ಕೊಲೆ ಇತ್ಯಾದಿಗಳನ್ನು ಕಂಡರೆ ದಯೆ, ಕರುಣೆ, ಬಂಧುತ್ವ ಕಾಣೆಯಾಗಿದೆ ಅನಿಸುತ್ತಿದೆ. ಅದನ್ನು ಮತ್ತೆ ಪ್ರತಿಷ್ಠಾಪಿಸಲುಆಧ್ಯಾತ್ಮಿಕ ಸಶಕ್ತೀಕರಣದಆವಶ್ಯಕತೆ ಇದೆ. ಅದಕ್ಕೆ ತಾವೆಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.