ಡಾ.ಎಸ್.ಆರ್.ನಿರಂಜನ ಅವರ ಅವಧಿ ಮುಗಿದ ಬಳಿಕ ಪೂರ್ಣಾವಧಿ ಕುಲಪತಿ ನೇಮಕವಾಗಿಲ್ಲ. ಹೀಗಾಗಿ, ಪ್ರೊ.ಎಸ್.ಪಿ.ಮೇಲಕೇರಿ, ಪ್ರೊ.ಪರಿಮಳಾ ಅಂಬೇಕರ್, ಪ್ರೊ.ರಾಜನಾಳ್ಕರ ಲಕ್ಷ್ಮಣ ಅವರು ಹಂಗಾಮಿ ಕುಲಪತಿಯಾಗಿ ಈಗಾಗಲೇ ಕಾರ್ಯನಿರ್ವಹಿಸಿದ್ದು, ಮಾಲೆ ನಾಲ್ಕನೇ ಹಂಗಾಮಿ ಕುಲಪತಿ.
‘ಡೀನ್ ಆಗಿದ್ದಾರೆ ಎಂಬ ಕಾರಣಕ್ಕೆ ಸಹಾಯಕ ಪ್ರಾಧ್ಯಾಪಕರಿಗೆ ಈ ಹುದ್ದೆ ನೀಡಿರುವುದು ಸರಿಯಲ್ಲ’ ಎಂದು ಕೆಲ ಪ್ರಾಧ್ಯಾಪಕರು ಅಭಿಪ್ರಾಯಪಟ್ಟರೆ, ‘ವಿಶ್ವವಿದ್ಯಾಲಯದ ಡೀನ್ಗಳ ಪೈಕಿ ಹಿರಿಯ ಡೀನ್ ಆಗಿರುವ ಮಾಲೆ ಅವರನ್ನು ರಾಜ್ಯಪಾಲರು ನಿಯಮಾನುಸಾರವೇ ಹಂಗಾಮಿ ಕುಲಪತಿಯನ್ನಾಗಿ ನೇಮಕ ಮಾಡಿದ್ದಾರೆ’ ಎಂದುಕೆಲ ಪ್ರಾಧ್ಯಾಪಕರು ಸಮರ್ಥಿಸಿಕೊಂಡಿದ್ದಾರೆ.