<p><strong>ಚಿಂಚೋಳಿ</strong>: ಬೆಟ್ಟ ಗುಡ್ಡ ಹಾಗೂ ಹಸಿರು ಕಾನನದಿಂದ ಬಯಲು ಸೀಮೆಯ ಮಿನಿ ಮಲೆನಾಡು ಎಂಬ ಖ್ಯಾತಿಯ ಚಿಂಚೋಳಿಯ ವನ್ಯಜೀವಿ ಧಾಮ ಮುಂಗಾರು ಮಳೆಗೆ ಮೈದುಂಬಿಕೊಂಡಿದೆ.</p>.<p>ಎಲೆ ಉದುರುವ ಕಾಡುಗಳಲ್ಲಿ ಗುರುತಿಸಲ್ಪಡುವ ಚಿಂಚೋಳಿಯ ವನ್ಯಜೀವಿ ಧಾಮದ ಕಾಡು ಹಸಿರ ಸಿರಿಯಿಂದ ಮಿನುಗುತ್ತಿದೆ.</p>.<p>ವರ್ಷದಲ್ಲಿ ಎರಡ್ಮೂರು ತಿಂಗಳು ಮಾತ್ರ ಬರಡಾಗಿ ಗೋಚರಿಸುವ ಈ ಕಾಡು, ಚೈತ್ರ ಮಾಸದಿಂದ ಋತುಮಾನಕ್ಕೆ ಅನುಗುಣವಾಗಿ ಚಿಗುರೊಡೆದು ನಳನಳಿಸುತ್ತದೆ.</p>.<p>ತೆಲಂಗಾಣ ಗಡಿಗೆ ಹೊಂದಿಕೊಂಡ ವನ್ಯಜೀವಿ ಧಾಮದಲ್ಲಿ ಹಲವು ವಿಶಿಷ್ಟ ಜೀವಿಗಳು ಆಸರೆ ಪಡೆದಿದ್ದಲ್ಲದೇ, ಅವಸಾನದ ಅಂಚಿನಲ್ಲಿರುವ ವಿವಿಧ ಅಪರೂಪದ ಸಸ್ಯಗಳಿಂದ ಜೀವ ವೈವಿಧ್ಯತೆಯ ತಾಣವಾಗಿ ಗಮನ ಸೆಳೆದಿದೆ.</p>.<p>ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮವಾಗಿರುವ ಈ ಸಸ್ಯಕಾಶಿ ಪರಿಸರ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. 13,488 ಹೆಕ್ಟೇರ್ ವಿಶಾಲವಾದ ವನ್ಯಜೀವಿ ಧಾಮದಲ್ಲಿ ಚಿರತೆ, ನೀಲಗಾಯ, ಹೈನಾ, ಕಾಡುಕೋಣ, ತೋಳ, ಚೌಸಿಂಗಾ, ಚುಕ್ಕೆ ಜಿಂಕೆ, ಕಾಡು ಕುರಿ, ನರಿ, ಕಾಡು ಹಂದಿ, ಮುಳ್ಳು ಹಂದಿ, ಚಿಪ್ಪು ಹಂದಿ, ಮೊಲ ಮೊದಲಾದ ಪ್ರಾಣಿಗಳಿವೆ.</p>.<p>ದಿಂಡಿಲು, ತೇಗ, ರಕ್ತಚಂದನ, ಹಿಪ್ಪೆ, ಠಾಣೆ, ನೆಲ್ಲಿ, ಸ್ವಾಮಿ, ಬಸವನಪಾದ, ಹೊಂಗೆ, ಬೇವು, ಶಮಿ, ಕರಿ ಮತ್ತಿ, ಆಲ, ಅರಳೆ ಮೊದಲಾದ ಗಿಡಮರಗಳು ಕಾಡನ್ನು ಸಮೃದ್ಧಗೊಳಿಸಿವೆ.</p>.<p>ತೆಲಂಗಾಣದ ಹೈದರಾಬಾದ್ ಸೇರಿದಂತೆ ವಿವಿಧ ಜಿಲ್ಲೆ ಮತ್ತು ನಗರ ಹಾಗೂ ರಾಜ್ಯದ ಕಲಬುರಗಿ, ಬೀದರ್ ಜಿಲ್ಲೆಯ ಹಸಿರು ಪ್ರಿಯರು, ವಿದ್ಯಾರ್ಥಿಗಳು ಬಂದು ಕಾಡಿನ ಸೊಬಗು ಕಣ್ತುಂಬಿಕೊಳ್ಳುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ ಮೃಗಶಿರಾ ಮಳೆ ನಿರೀಕ್ಷೆಯಂತೆ ಉತ್ತಮವಾಗಿ ಸುರಿದಿದೆ. ಇನ್ನಷ್ಟು ಮಳೆ ಸುರಿದರೆ ಜುಲೈ ತಿಂಗಳಿನಿಂದ ಜಲಪಾತಗಳು ಪುನರ್ ಜನ್ಮ ಪಡೆದು ಪ್ರವಾಸಿಗರಿಗೆ ಮುದ ನೀಡಲಿವೆ.</p>.<p>ಮಾಣಿಕಪುರ ಮತ್ತು ಎತ್ತಿಪೋತೆ ಜಲಪಾತಗಳು, ಚಂದ್ರಂಪಳ್ಳಿ ಜಲಾಶಯ, ಗೊಟ್ಟಮಗೊಟ್ಟ, ಲಾಲಾ ತಾಲಾಬ್, ನವಿಲು ಗುಡ್ಡ, ಮಹಿಶಮ್ಮನ ಬೆಟ್ಟ, ಪ್ರಕೃತಿಧಾಮ, ಚಿಕ್ಕಲಿಂಗದಳ್ಳಿ ಕೆರೆ, ಬೈರಂಪಳ್ಳಿ ಬೃಹತ್ ಆಲದ ಮರ, ಸಾಲೇಬೀರನಹಳ್ಳಿ ಕೆರೆ ಪ್ರಮುಖ ಹಸಿರು ತಾಣಗಳಾಗಿವೆ. </p>.<p>ಅಪರೂಪದ ಜೀವ ವೈವಿಧ್ಯ ತಾಣ ಪರಿಸರ ಪ್ರವಾಸ ಅಭಿವೃದ್ಧಿಗೆ ವಿಪುಲ ಅವಕಾಶ ಕಾಡು ಸುತ್ತುವರಿಗೆ ಚಾರಣದ ಹಿತಾನುಭವ </p>.<p> <strong>ಪ್ರಸಕ್ತ ವರ್ಷ ಸುರಿದ ಮಳೆಯಿಂದ ವನ್ಯಜೀವಿ ಧಾಮದ ಕಾಡು ಹಚ್ಚ ಹಸಿರ ಸಿರಿಯಿಂದ ಕಂಗೊಳಿಸುತ್ತಿದೆ. ಇನ್ನಷ್ಟು ಮಳೆಯಾದರೆ ಹುಲ್ಲು ಬೆಳೆದರೆ ನೆಲವೂ ಹಸಿರಾಗಿ ಪ್ರವಾಸಿಗರನ್ನು ಸೆಳೆಯಲಿದೆ </strong></p><p><strong>-ಭಾಗಪ್ಪಗೌಡ ವಲಯ ಅರಣ್ಯಾಧಿಕಾರಿ</strong></p>.<p><strong>ಚಿಂಚೋಳಿ ವನ್ಯಜೀವಿ ಧಾಮವು ಅಪರೂಪದ ಸಸ್ಯ ಹಾಗೂ ಜೀವಿಗಳನ್ನು ಪೋಷಿಸಿಕೊಂಡು ಬರುತ್ತಿದ್ದು ಅರಣ್ಯ ಇಲಾಖೆ ಪ್ರಯತ್ನದಿಂದ ಕಾಡು ಮತ್ತಷ್ಟು ಸಮೃದ್ಧವಾಗಿದೆ </strong></p><p><strong>-ದೀಪಕನಾಗ್ ಪುಣ್ಯಶೆಟ್ಟಿ ಜಿ.ಪಂ. ಮಾಜಿ ಅಧ್ಯಕ್ಷ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ಬೆಟ್ಟ ಗುಡ್ಡ ಹಾಗೂ ಹಸಿರು ಕಾನನದಿಂದ ಬಯಲು ಸೀಮೆಯ ಮಿನಿ ಮಲೆನಾಡು ಎಂಬ ಖ್ಯಾತಿಯ ಚಿಂಚೋಳಿಯ ವನ್ಯಜೀವಿ ಧಾಮ ಮುಂಗಾರು ಮಳೆಗೆ ಮೈದುಂಬಿಕೊಂಡಿದೆ.</p>.<p>ಎಲೆ ಉದುರುವ ಕಾಡುಗಳಲ್ಲಿ ಗುರುತಿಸಲ್ಪಡುವ ಚಿಂಚೋಳಿಯ ವನ್ಯಜೀವಿ ಧಾಮದ ಕಾಡು ಹಸಿರ ಸಿರಿಯಿಂದ ಮಿನುಗುತ್ತಿದೆ.</p>.<p>ವರ್ಷದಲ್ಲಿ ಎರಡ್ಮೂರು ತಿಂಗಳು ಮಾತ್ರ ಬರಡಾಗಿ ಗೋಚರಿಸುವ ಈ ಕಾಡು, ಚೈತ್ರ ಮಾಸದಿಂದ ಋತುಮಾನಕ್ಕೆ ಅನುಗುಣವಾಗಿ ಚಿಗುರೊಡೆದು ನಳನಳಿಸುತ್ತದೆ.</p>.<p>ತೆಲಂಗಾಣ ಗಡಿಗೆ ಹೊಂದಿಕೊಂಡ ವನ್ಯಜೀವಿ ಧಾಮದಲ್ಲಿ ಹಲವು ವಿಶಿಷ್ಟ ಜೀವಿಗಳು ಆಸರೆ ಪಡೆದಿದ್ದಲ್ಲದೇ, ಅವಸಾನದ ಅಂಚಿನಲ್ಲಿರುವ ವಿವಿಧ ಅಪರೂಪದ ಸಸ್ಯಗಳಿಂದ ಜೀವ ವೈವಿಧ್ಯತೆಯ ತಾಣವಾಗಿ ಗಮನ ಸೆಳೆದಿದೆ.</p>.<p>ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮವಾಗಿರುವ ಈ ಸಸ್ಯಕಾಶಿ ಪರಿಸರ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. 13,488 ಹೆಕ್ಟೇರ್ ವಿಶಾಲವಾದ ವನ್ಯಜೀವಿ ಧಾಮದಲ್ಲಿ ಚಿರತೆ, ನೀಲಗಾಯ, ಹೈನಾ, ಕಾಡುಕೋಣ, ತೋಳ, ಚೌಸಿಂಗಾ, ಚುಕ್ಕೆ ಜಿಂಕೆ, ಕಾಡು ಕುರಿ, ನರಿ, ಕಾಡು ಹಂದಿ, ಮುಳ್ಳು ಹಂದಿ, ಚಿಪ್ಪು ಹಂದಿ, ಮೊಲ ಮೊದಲಾದ ಪ್ರಾಣಿಗಳಿವೆ.</p>.<p>ದಿಂಡಿಲು, ತೇಗ, ರಕ್ತಚಂದನ, ಹಿಪ್ಪೆ, ಠಾಣೆ, ನೆಲ್ಲಿ, ಸ್ವಾಮಿ, ಬಸವನಪಾದ, ಹೊಂಗೆ, ಬೇವು, ಶಮಿ, ಕರಿ ಮತ್ತಿ, ಆಲ, ಅರಳೆ ಮೊದಲಾದ ಗಿಡಮರಗಳು ಕಾಡನ್ನು ಸಮೃದ್ಧಗೊಳಿಸಿವೆ.</p>.<p>ತೆಲಂಗಾಣದ ಹೈದರಾಬಾದ್ ಸೇರಿದಂತೆ ವಿವಿಧ ಜಿಲ್ಲೆ ಮತ್ತು ನಗರ ಹಾಗೂ ರಾಜ್ಯದ ಕಲಬುರಗಿ, ಬೀದರ್ ಜಿಲ್ಲೆಯ ಹಸಿರು ಪ್ರಿಯರು, ವಿದ್ಯಾರ್ಥಿಗಳು ಬಂದು ಕಾಡಿನ ಸೊಬಗು ಕಣ್ತುಂಬಿಕೊಳ್ಳುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ ಮೃಗಶಿರಾ ಮಳೆ ನಿರೀಕ್ಷೆಯಂತೆ ಉತ್ತಮವಾಗಿ ಸುರಿದಿದೆ. ಇನ್ನಷ್ಟು ಮಳೆ ಸುರಿದರೆ ಜುಲೈ ತಿಂಗಳಿನಿಂದ ಜಲಪಾತಗಳು ಪುನರ್ ಜನ್ಮ ಪಡೆದು ಪ್ರವಾಸಿಗರಿಗೆ ಮುದ ನೀಡಲಿವೆ.</p>.<p>ಮಾಣಿಕಪುರ ಮತ್ತು ಎತ್ತಿಪೋತೆ ಜಲಪಾತಗಳು, ಚಂದ್ರಂಪಳ್ಳಿ ಜಲಾಶಯ, ಗೊಟ್ಟಮಗೊಟ್ಟ, ಲಾಲಾ ತಾಲಾಬ್, ನವಿಲು ಗುಡ್ಡ, ಮಹಿಶಮ್ಮನ ಬೆಟ್ಟ, ಪ್ರಕೃತಿಧಾಮ, ಚಿಕ್ಕಲಿಂಗದಳ್ಳಿ ಕೆರೆ, ಬೈರಂಪಳ್ಳಿ ಬೃಹತ್ ಆಲದ ಮರ, ಸಾಲೇಬೀರನಹಳ್ಳಿ ಕೆರೆ ಪ್ರಮುಖ ಹಸಿರು ತಾಣಗಳಾಗಿವೆ. </p>.<p>ಅಪರೂಪದ ಜೀವ ವೈವಿಧ್ಯ ತಾಣ ಪರಿಸರ ಪ್ರವಾಸ ಅಭಿವೃದ್ಧಿಗೆ ವಿಪುಲ ಅವಕಾಶ ಕಾಡು ಸುತ್ತುವರಿಗೆ ಚಾರಣದ ಹಿತಾನುಭವ </p>.<p> <strong>ಪ್ರಸಕ್ತ ವರ್ಷ ಸುರಿದ ಮಳೆಯಿಂದ ವನ್ಯಜೀವಿ ಧಾಮದ ಕಾಡು ಹಚ್ಚ ಹಸಿರ ಸಿರಿಯಿಂದ ಕಂಗೊಳಿಸುತ್ತಿದೆ. ಇನ್ನಷ್ಟು ಮಳೆಯಾದರೆ ಹುಲ್ಲು ಬೆಳೆದರೆ ನೆಲವೂ ಹಸಿರಾಗಿ ಪ್ರವಾಸಿಗರನ್ನು ಸೆಳೆಯಲಿದೆ </strong></p><p><strong>-ಭಾಗಪ್ಪಗೌಡ ವಲಯ ಅರಣ್ಯಾಧಿಕಾರಿ</strong></p>.<p><strong>ಚಿಂಚೋಳಿ ವನ್ಯಜೀವಿ ಧಾಮವು ಅಪರೂಪದ ಸಸ್ಯ ಹಾಗೂ ಜೀವಿಗಳನ್ನು ಪೋಷಿಸಿಕೊಂಡು ಬರುತ್ತಿದ್ದು ಅರಣ್ಯ ಇಲಾಖೆ ಪ್ರಯತ್ನದಿಂದ ಕಾಡು ಮತ್ತಷ್ಟು ಸಮೃದ್ಧವಾಗಿದೆ </strong></p><p><strong>-ದೀಪಕನಾಗ್ ಪುಣ್ಯಶೆಟ್ಟಿ ಜಿ.ಪಂ. ಮಾಜಿ ಅಧ್ಯಕ್ಷ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>