<p><strong>ಕಲಬುರಗಿ:</strong> ಇಲ್ಲಿನ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ ಮೇಳಕ್ಕೆ ಬಂದಿರುವ ಅಭ್ಯರ್ಥಿಗಳು ಊಟಕ್ಕಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಿದ್ದಾರೆ.</p><p>ಅತ್ತ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದರೆ, ಇತ್ತ ಹಸಿವು ತಣಿಸಿಕೊಳ್ಳಲು ಯುವಜನರು ಕಾದುನಿಂತಿದ್ದರು.</p><p>ಅಭ್ಯರ್ಥಿಗಳಿಗೆ ಉಣಬಡಿಸಲು ಗೋದಿ ಹುಗ್ಗಿ, ಮೊಸರನ್ನ, ವೆಜ್ ಪುಲಾವ್, ಸಾಂಬರ್ ಸಿದ್ಧವಾಗಿದೆ. ಅದನ್ನು ಉಣಬಡಿಸಲು ಸಿಬ್ಬಂದಿ ಹಿರಿಯ ಅಧಿಕಾರಿಗಳ ಆದೇಶಕ್ಕಾಗಿ ಕಾದು ನಿಂತಿದ್ದಾರೆ.</p><p>ವೇದಿಕೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭಾಷಣ ಮುಗಿಯುವ ತನಕ ಊಟ ವಿತರಣೆಗೆ ಮಾಡದಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಆಹಾರ ವಿತರಣೆಗೆ ಸಜ್ಜಾಗಿರುವ ಸಿಬ್ಬಂದಿ ಪ್ರಜಾವಾಣಿಗೆ ತಿಳಿಸಿದರು.</p><p>'ಯಾವುದೇ ಕಾರಣಕ್ಕೂ ಊಟ ವಿತರಿಸಬೇಡಿ. ಸಾಧ್ಯವಾದರೆ ಪೊಲೀಸರ ನೆರವಿನೊಂದಿಗೆ ಯುವ ಜನರನ್ನು ಕಾರ್ಯಕ್ರಮದ ವೇದಿಕೆಯತ್ತ ಕಳುಹಿಸಿಕೊಡಿ' ಎಂದು ಹಿರಿಯ ಅಧಿಕಾರಿಗಳು ವಾಟ್ಸ್ ಆ್ಯಪ್ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.</p><p>ಪೊಲೀಸರ ಮಧ್ಯ ಪ್ರವೇಶದ ಬಳಿಕ ಮಧ್ಯಾಹ್ನ 2.32ಕ್ಕೆ ಊಟ ವಿತರಣೆ ಶುರುವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಇಲ್ಲಿನ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ ಮೇಳಕ್ಕೆ ಬಂದಿರುವ ಅಭ್ಯರ್ಥಿಗಳು ಊಟಕ್ಕಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಿದ್ದಾರೆ.</p><p>ಅತ್ತ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದರೆ, ಇತ್ತ ಹಸಿವು ತಣಿಸಿಕೊಳ್ಳಲು ಯುವಜನರು ಕಾದುನಿಂತಿದ್ದರು.</p><p>ಅಭ್ಯರ್ಥಿಗಳಿಗೆ ಉಣಬಡಿಸಲು ಗೋದಿ ಹುಗ್ಗಿ, ಮೊಸರನ್ನ, ವೆಜ್ ಪುಲಾವ್, ಸಾಂಬರ್ ಸಿದ್ಧವಾಗಿದೆ. ಅದನ್ನು ಉಣಬಡಿಸಲು ಸಿಬ್ಬಂದಿ ಹಿರಿಯ ಅಧಿಕಾರಿಗಳ ಆದೇಶಕ್ಕಾಗಿ ಕಾದು ನಿಂತಿದ್ದಾರೆ.</p><p>ವೇದಿಕೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭಾಷಣ ಮುಗಿಯುವ ತನಕ ಊಟ ವಿತರಣೆಗೆ ಮಾಡದಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಆಹಾರ ವಿತರಣೆಗೆ ಸಜ್ಜಾಗಿರುವ ಸಿಬ್ಬಂದಿ ಪ್ರಜಾವಾಣಿಗೆ ತಿಳಿಸಿದರು.</p><p>'ಯಾವುದೇ ಕಾರಣಕ್ಕೂ ಊಟ ವಿತರಿಸಬೇಡಿ. ಸಾಧ್ಯವಾದರೆ ಪೊಲೀಸರ ನೆರವಿನೊಂದಿಗೆ ಯುವ ಜನರನ್ನು ಕಾರ್ಯಕ್ರಮದ ವೇದಿಕೆಯತ್ತ ಕಳುಹಿಸಿಕೊಡಿ' ಎಂದು ಹಿರಿಯ ಅಧಿಕಾರಿಗಳು ವಾಟ್ಸ್ ಆ್ಯಪ್ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.</p><p>ಪೊಲೀಸರ ಮಧ್ಯ ಪ್ರವೇಶದ ಬಳಿಕ ಮಧ್ಯಾಹ್ನ 2.32ಕ್ಕೆ ಊಟ ವಿತರಣೆ ಶುರುವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>