<p><strong>ಕಾಳಗಿ:</strong> ‘ತರಬೇತಿ ಪಡೆದು ಶಿಸ್ತಿನ ಸಿಪಾಯಿಗಳಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಿದ್ದಿರಿ. ವಿವಿಧ ಬಂದೋಬಸ್ತಿನ ಕರ್ತವ್ಯದ ವೇಳೆ ಜಾತಿ, ಧರ್ಮ, ವೈಯಕ್ತಿಕ ಹಿತಾಸಕ್ತಿ ತೋರದೆ ಸಂವಿಧಾನದಡಿಯಲ್ಲಿ ಕೆಲಸ ಮಾಡುವುದು ತಮ್ಮ ಆದ್ಯಕರ್ತವ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಕರೆ ನೀಡಿದರು.</p>.<p>ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಗೃಹರಕ್ಷಕ ದಳದ 10 ದಿನದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.</p>.<p>‘ಸಮವಸ್ತ್ರ ಧರಿಸಿದ ಮೇಲೆ ತಮ್ಮ ಚಲನ-ವಲನದ ಮೇಲೆ ಗಮನವಿರಬೇಕು. ಗಣೇಶ ಉತ್ಸವ, ಜಾತ್ರೆ, ರಾಜಕೀಯ ಮತ್ತಿತರ ಬಂದೋಬಸ್ತ್ಗೆ ತಮ್ಮನ್ನು ನಿಯೋಜಿಸಲಾಗುತ್ತದೆ. ಈ ವೇಳೆ ಪ್ರಮಾಣಿಕ ಸೇವೆಗೆ ಸನ್ನದ್ಧರಾಗಬೇಕು. ಯಾರನ್ನು ಹೆದರಿಸುವ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಪ್ರಯತ್ನ ಕಂಡುಬಂದರೆ ಆ ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>‘ಈ ನೇಮಕಾತಿ ಪಾರದರ್ಶಕವಾಗಿ ನಡೆದಿದ್ದು, ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಲಾಗುವುದು. ಜಿಲ್ಲೆಯಲ್ಲಿ ಎರಡು ಪೊಲೀಸ್ ಘಟಕವಿದ್ದು, ಹೆಚ್ಚು ಕರ್ತವ್ಯ ನಿರ್ವಹಿಸಿದರೆ ಅಧಿಕ ಗೌರವಧನ ಪಡೆಯುತ್ತಿರಿ’ ಎಂದು ತಿಳಿಸಿದರು.</p>.<p>ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಸಂತೋಷಕುಮಾರ ಪಾಟೀಲ ಅಧ್ಯಕ್ಷೀಯ ಮಾತನಾಡಿ ‘ಗೃಹರಕ್ಷಕ ದಳ ಸಿಬ್ಬಂದಿ ದೈಹಿಕ, ಮಾನಸಿಕ ಸದೃಢರಾಗಿ ಶಿಸ್ತು, ಸಮಯ ಪಾಲನೆ, ದಕ್ಷತೆ ರೂಢಿಸಿಕೊಂಡು ಸೇವೆ ಸಲ್ಲಿಸಿ’ ಎಂದು ಕರೆ ನೀಡಿದರು.</p>.<p>ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಸಂತೋಷ ಮಂಕಾಣಿ ವೇದಿಕೆಯಲ್ಲಿದ್ದರು. ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ ಉಪಸ್ಥಿತರಿದ್ದರು.</p>.<p>ಶಿಬಿರಾರ್ಥಿ ಭಾಗ್ಯಶ್ರೀ, ಮಹೇಶ, ತ್ರಿವೇಣಿ ಅನಿಸಿಕೆ ವ್ಯಕ್ತಪಡಿಸಿದರು. ಪುತಳಾಬಾಯಿ ಪ್ರಾರ್ಥಿಸಿದರು. ಬೋಧಕ ಹಣಮಂತರಾಯಗೌಡ ಸ್ವಾಗತಿಸಿದರು. ಪಿ.ಎಲ್.ಸಿ ಚಂದ್ರಕಾಂತ ಹಾವನೂರ ನಿರೂಪಿಸಿದರು. ಕಲಬುರಗಿ ಡಿಎಆರ್ ಸಿಬ್ಬಂದಿ 200 ಗೃಹರಕ್ಷಕ ದಳ ಸಿಬ್ಬಂದಿಗೆ ತರಬೇತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ‘ತರಬೇತಿ ಪಡೆದು ಶಿಸ್ತಿನ ಸಿಪಾಯಿಗಳಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಿದ್ದಿರಿ. ವಿವಿಧ ಬಂದೋಬಸ್ತಿನ ಕರ್ತವ್ಯದ ವೇಳೆ ಜಾತಿ, ಧರ್ಮ, ವೈಯಕ್ತಿಕ ಹಿತಾಸಕ್ತಿ ತೋರದೆ ಸಂವಿಧಾನದಡಿಯಲ್ಲಿ ಕೆಲಸ ಮಾಡುವುದು ತಮ್ಮ ಆದ್ಯಕರ್ತವ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಕರೆ ನೀಡಿದರು.</p>.<p>ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಗೃಹರಕ್ಷಕ ದಳದ 10 ದಿನದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.</p>.<p>‘ಸಮವಸ್ತ್ರ ಧರಿಸಿದ ಮೇಲೆ ತಮ್ಮ ಚಲನ-ವಲನದ ಮೇಲೆ ಗಮನವಿರಬೇಕು. ಗಣೇಶ ಉತ್ಸವ, ಜಾತ್ರೆ, ರಾಜಕೀಯ ಮತ್ತಿತರ ಬಂದೋಬಸ್ತ್ಗೆ ತಮ್ಮನ್ನು ನಿಯೋಜಿಸಲಾಗುತ್ತದೆ. ಈ ವೇಳೆ ಪ್ರಮಾಣಿಕ ಸೇವೆಗೆ ಸನ್ನದ್ಧರಾಗಬೇಕು. ಯಾರನ್ನು ಹೆದರಿಸುವ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಪ್ರಯತ್ನ ಕಂಡುಬಂದರೆ ಆ ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>‘ಈ ನೇಮಕಾತಿ ಪಾರದರ್ಶಕವಾಗಿ ನಡೆದಿದ್ದು, ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಲಾಗುವುದು. ಜಿಲ್ಲೆಯಲ್ಲಿ ಎರಡು ಪೊಲೀಸ್ ಘಟಕವಿದ್ದು, ಹೆಚ್ಚು ಕರ್ತವ್ಯ ನಿರ್ವಹಿಸಿದರೆ ಅಧಿಕ ಗೌರವಧನ ಪಡೆಯುತ್ತಿರಿ’ ಎಂದು ತಿಳಿಸಿದರು.</p>.<p>ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಸಂತೋಷಕುಮಾರ ಪಾಟೀಲ ಅಧ್ಯಕ್ಷೀಯ ಮಾತನಾಡಿ ‘ಗೃಹರಕ್ಷಕ ದಳ ಸಿಬ್ಬಂದಿ ದೈಹಿಕ, ಮಾನಸಿಕ ಸದೃಢರಾಗಿ ಶಿಸ್ತು, ಸಮಯ ಪಾಲನೆ, ದಕ್ಷತೆ ರೂಢಿಸಿಕೊಂಡು ಸೇವೆ ಸಲ್ಲಿಸಿ’ ಎಂದು ಕರೆ ನೀಡಿದರು.</p>.<p>ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಸಂತೋಷ ಮಂಕಾಣಿ ವೇದಿಕೆಯಲ್ಲಿದ್ದರು. ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ ಉಪಸ್ಥಿತರಿದ್ದರು.</p>.<p>ಶಿಬಿರಾರ್ಥಿ ಭಾಗ್ಯಶ್ರೀ, ಮಹೇಶ, ತ್ರಿವೇಣಿ ಅನಿಸಿಕೆ ವ್ಯಕ್ತಪಡಿಸಿದರು. ಪುತಳಾಬಾಯಿ ಪ್ರಾರ್ಥಿಸಿದರು. ಬೋಧಕ ಹಣಮಂತರಾಯಗೌಡ ಸ್ವಾಗತಿಸಿದರು. ಪಿ.ಎಲ್.ಸಿ ಚಂದ್ರಕಾಂತ ಹಾವನೂರ ನಿರೂಪಿಸಿದರು. ಕಲಬುರಗಿ ಡಿಎಆರ್ ಸಿಬ್ಬಂದಿ 200 ಗೃಹರಕ್ಷಕ ದಳ ಸಿಬ್ಬಂದಿಗೆ ತರಬೇತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>