<p><strong>ಕಾಳಗಿ:</strong> ಸರ್ಕಾರಿ ಶಾಲೆ ಎಂದರೆ ಅದೇಷ್ಟೊ ಜನರು ಈಗಲೂ ಮೂಗು ಮುರಿಯುತ್ತಾರೆ. ಅದರಲ್ಲಿಯೂ ಕಾಳಗಿ ತಾಲ್ಲೂಕಿನ ಮಂಗಲಗಿ ಊರು ಎಂದರೆ ಹೌಹಾರುವ ಜನರೇ ಹೆಚ್ಚು. ಆದರೆ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆ ಎಲ್ಲದಕ್ಕೂ ಅಪವಾದ ಎಂಬಂತೆ ಬೆಳೆಯುತ್ತಿದೆ ಎಂದರೆ ಆಶ್ಚರ್ಯದ ಸಂಗತಿಯಾಗಿದೆ.</p>.<p>ಹೌದು, ಮಂಗಲಗಿ ಊರಿನಿಂದ ಕೊಡದೂರ ಮಾರ್ಗದಲ್ಲಿ ಒಂದು ಕಿ.ಮೀ ದೂರದಲ್ಲಿ ಅಡವಿಯಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಇದಕ್ಕೆ ಸಾಕ್ಷಿ.</p>.<p>1948ರ ನವೆಂಬರ್ 28ರಂದು ಪ್ರಾರಂಭಗೊಂಡಿರುವ ಈ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಇಲ್ಲಿವರೆಗೂ ಕನಿಷ್ಠ 5ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ವರ್ಷ 1ರಿಂದ 8ನೇ ತರಗತಿವರೆಗೆ ಒಟ್ಟು 224 ಮಕ್ಕಳು, 6ಜನ ಕಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2 ತರಗತಿ ಕೊಠಡಿಗಳಿದ್ದು ವಿಶಾಲವಾದ ಆಟದ ಮೈದಾನವಿದೆ.</p>.<p>ಶಾಲೆಯ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಅತಿಥಿ ಶಿಕ್ಷಕರಿಂದ ಸಂಗ್ರಹವಾಗಿರುವ ಒಟ್ಟು 2,000 ಪುಸಕ್ತಗಳು ತುಂಬಿಕೊಂಡಿರುವ ಸುಸಜ್ಜಿತ ಗ್ರಂಥಾಲಯದಲ್ಲಿ ಮಕ್ಕಳೇ ಎಲ್ಲಾ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.</p>.<p>ವಿಜ್ಞಾನ ಶಿಕ್ಷಕಿ ಯಶೋಧಾ ಬದಾಮಿ ಅವರು ವಿಜ್ಞಾನದ ಯಾವುದೇ ಪ್ರಯೋಗ ಮಾಡಲು ಮಕ್ಕಳಿಗೆ ಪ್ರಯೋಗಾಲಯಕ್ಕೆ ಕರೆದೊಯ್ಯುವ ರೂಢಿ ಹಾಕಿದ್ದಾರೆ. 5 ಗಣಕ ಯಂತ್ರಗಳಿರುವ ಕಂಪ್ಯೂಟರ್ ಕೇಂದ್ರದಲ್ಲಿ ಮಕ್ಕಳು ಗಣಕಯಂತ್ರ ಬಳಕೆ ಮಾಡುವುದರಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಗ್ರಾಮೀಣ ಪ್ರದೇಶದ ಶಾಲೆಗಳಲ್ಲೇ ಇಲ್ಲಿ ವಿಶೇಷ.</p>.<p>ವಿದ್ಯಾರ್ಥಿಗಳು ಈ ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದರೂ ಕೂಡ ಎಲ್ಲವುದರ ಜತೆಗೆ ಕ್ರೀಡೆಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ ಪಾಲ್ಗೊಂಡು ಹೋಬಳಿ ಮಟ್ಟದಿಂದ ಜಿಲ್ಲಾ ಸ್ತರದವರೆಗೆ ಅನೇಕ ಪ್ರಶಸ್ತಿಗಳು ತಮ್ಮದಾಗಿಸಿ ಕೊಂಡಿದ್ದಾರೆ.</p>.<p>ಒಟ್ಟಾರೆ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸಮಪರ್ಕವಾಗಿ ಉಪಯೋಗಿಸಿಕೊಳ್ಳುತ್ತಿರುವ ಇಲ್ಲಿನ ಶಿಕ್ಷಕರು ಮತ್ತು ಮಕ್ಕಳು ಸರ್ಕಾರಿ ಶಾಲೆ ಬೇರೆ ಯಾವ ಶಾಲೆಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸಮಾಜಕ್ಕೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.</p>.<p>ಈಚೆಗಷ್ಟೇ ಈ ಶಾಲೆ ಹಸಿರು ಪರಿಸರ ಮಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದಕ್ಕೆಲ್ಲ ಮಕ್ಕಳ ಶ್ರಮವೇ ಮುಖ್ಯಕಾರಣ’ ಎಂದು ಶಿಕ್ಷಕ ಸುರೇಶ ಮಡಿವಾಳ ಹೆಮ್ಮೆಯಿಂದ ನುಡಿದರು. ಶಾಲೆಯ ಪ್ರತಿಯೊಂದು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಗ್ರಾಮಸ್ಥರು ಶಾಲೆಯ ಬಗ್ಗೆ ಅಷ್ಟೇ ಖುಷಿಯನ್ನು ವ್ಯಕ್ತಪಡಿಸುತ್ತಾರೆ.</p>.<p>ಈ ನಡುವೆ ಶಾಲೆಯಲ್ಲಿ ಕಲಿತಿರುವ ಹಳೆಯ ವಿದ್ಯಾರ್ಥಿಗಳು (ಈಗ ಅವರು ಹಿರಿಯರು) ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಈಚೆಗೆ ಏರ್ಪಡಿಸಲಾಗಿತ್ತು. ಹಿರಿಯರು ತಮ್ಮ ಶಾಲೆ ಬಗೆಗಿನ ಹಳೆಯ ನೆನಪು ಮೆಲಕು ಹಾಕಿದ್ದು ಚಿಕ್ಕವರಿಗೆ ದಿಕ್ಸೂಚಿಯಾಗಿತ್ತು ಎನ್ನುತ್ತಾರೆ ಶಿಕ್ಷಣಪ್ರೇಮಿ ಮೋನಪ್ಪ ಬಡಿಗೇರ.</p>.<p><strong>ಕೈ ತೋಟದ ಜೊತೆಗೆ ಬದುಕಿನ ಪಾಠ</strong></p>.<p>ಇಲ್ಲಿನ ಮಕ್ಕಳಿಗೆ ಕೇವಲ ಅಕ್ಷರಭ್ಯಾಸ ಹೇಳಿ ಕೊಡದೆ ಬದುಕಿಗೆ ಬೇಕಾದ ಶಿಕ್ಷಣವನ್ನು ಕಲಿಸುತ್ತಿರುವವುದು ವಿಶೇಷ. ಶಿಕ್ಷಕರು ಮಕ್ಕಳೊಂದಿಗೆ ಶಾಲಾ ಆವರಣದಲ್ಲಿ ಕೈತೋಟ ನಿರ್ಮಿಸಿ ಅವರಿಂದಲೇ ಅದರ ನಿರ್ವಹಣೆ ಮಾಡಿಸುತ್ತಾರೆ.</p>.<p>ಔಷಧಿ ಸಸ್ಯಗಳು, ಹೂವಿನ ಗಿಡಗಳು, ತರಕಾರಿ, ಅಲಂಕಾರಿಕ ಗಿಡಗಳು, ಹೊಂಗೆ ಮರ ಸೇರಿದಂತೆ 188 ಬಗೆಯ ಗಿಡಗಳು ಇಲ್ಲಿ ನಳನಳಿಸುತ್ತಿವೆ. ಬೋರವೆಲ್ ನೀರು, ಇಂಗುಗುಂಡಿ, ತುಂತುರು ಹನಿ ನೀರಾವರಿ ವ್ಯವಸ್ಥೆ ಮಕ್ಕಳು ಮಾಡಿದ್ದಾರೆ ಎನ್ನುತ್ತಾರೆ ಶಿಕ್ಷಕರು.</p>.<p>**</p>.<p>ಈ ಶಾಲೆಯಲ್ಲಿ ಉತ್ತಮವಾಗಿ ಗ್ರಂಥಾಲಯ ಮತ್ತು ಪ್ರಯೋಗಾಲಯ ವ್ಯವಸ್ಥೆ ಇದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.<br /><em><strong>ಬಾಬಾಗೌಡ ಬಿರಾದಾರ, ಮುಖ್ಯಶಿಕ್ಷಕ</strong></em></p>.<p>**</p>.<p>ನಮ್ಮ ಶಾಲೆಯಲ್ಲಿ ಅಕ್ಷರಭ್ಯಾಸದ ಜತೆಗೆ ಕೈತೋಟ ಮಾಡುವುದನ್ನು ಮತ್ತು ಬಿಡುವಿನ ವೇಳೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.<br /><em><strong>ನಾಗಮ್ಮ ಮುನ್ನೆಪ್ಪ, 7ನೇ ತರಗತಿ ವಿದ್ಯಾರ್ಥಿನಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ಸರ್ಕಾರಿ ಶಾಲೆ ಎಂದರೆ ಅದೇಷ್ಟೊ ಜನರು ಈಗಲೂ ಮೂಗು ಮುರಿಯುತ್ತಾರೆ. ಅದರಲ್ಲಿಯೂ ಕಾಳಗಿ ತಾಲ್ಲೂಕಿನ ಮಂಗಲಗಿ ಊರು ಎಂದರೆ ಹೌಹಾರುವ ಜನರೇ ಹೆಚ್ಚು. ಆದರೆ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆ ಎಲ್ಲದಕ್ಕೂ ಅಪವಾದ ಎಂಬಂತೆ ಬೆಳೆಯುತ್ತಿದೆ ಎಂದರೆ ಆಶ್ಚರ್ಯದ ಸಂಗತಿಯಾಗಿದೆ.</p>.<p>ಹೌದು, ಮಂಗಲಗಿ ಊರಿನಿಂದ ಕೊಡದೂರ ಮಾರ್ಗದಲ್ಲಿ ಒಂದು ಕಿ.ಮೀ ದೂರದಲ್ಲಿ ಅಡವಿಯಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಇದಕ್ಕೆ ಸಾಕ್ಷಿ.</p>.<p>1948ರ ನವೆಂಬರ್ 28ರಂದು ಪ್ರಾರಂಭಗೊಂಡಿರುವ ಈ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಇಲ್ಲಿವರೆಗೂ ಕನಿಷ್ಠ 5ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ವರ್ಷ 1ರಿಂದ 8ನೇ ತರಗತಿವರೆಗೆ ಒಟ್ಟು 224 ಮಕ್ಕಳು, 6ಜನ ಕಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2 ತರಗತಿ ಕೊಠಡಿಗಳಿದ್ದು ವಿಶಾಲವಾದ ಆಟದ ಮೈದಾನವಿದೆ.</p>.<p>ಶಾಲೆಯ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಅತಿಥಿ ಶಿಕ್ಷಕರಿಂದ ಸಂಗ್ರಹವಾಗಿರುವ ಒಟ್ಟು 2,000 ಪುಸಕ್ತಗಳು ತುಂಬಿಕೊಂಡಿರುವ ಸುಸಜ್ಜಿತ ಗ್ರಂಥಾಲಯದಲ್ಲಿ ಮಕ್ಕಳೇ ಎಲ್ಲಾ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.</p>.<p>ವಿಜ್ಞಾನ ಶಿಕ್ಷಕಿ ಯಶೋಧಾ ಬದಾಮಿ ಅವರು ವಿಜ್ಞಾನದ ಯಾವುದೇ ಪ್ರಯೋಗ ಮಾಡಲು ಮಕ್ಕಳಿಗೆ ಪ್ರಯೋಗಾಲಯಕ್ಕೆ ಕರೆದೊಯ್ಯುವ ರೂಢಿ ಹಾಕಿದ್ದಾರೆ. 5 ಗಣಕ ಯಂತ್ರಗಳಿರುವ ಕಂಪ್ಯೂಟರ್ ಕೇಂದ್ರದಲ್ಲಿ ಮಕ್ಕಳು ಗಣಕಯಂತ್ರ ಬಳಕೆ ಮಾಡುವುದರಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಗ್ರಾಮೀಣ ಪ್ರದೇಶದ ಶಾಲೆಗಳಲ್ಲೇ ಇಲ್ಲಿ ವಿಶೇಷ.</p>.<p>ವಿದ್ಯಾರ್ಥಿಗಳು ಈ ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದರೂ ಕೂಡ ಎಲ್ಲವುದರ ಜತೆಗೆ ಕ್ರೀಡೆಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ ಪಾಲ್ಗೊಂಡು ಹೋಬಳಿ ಮಟ್ಟದಿಂದ ಜಿಲ್ಲಾ ಸ್ತರದವರೆಗೆ ಅನೇಕ ಪ್ರಶಸ್ತಿಗಳು ತಮ್ಮದಾಗಿಸಿ ಕೊಂಡಿದ್ದಾರೆ.</p>.<p>ಒಟ್ಟಾರೆ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸಮಪರ್ಕವಾಗಿ ಉಪಯೋಗಿಸಿಕೊಳ್ಳುತ್ತಿರುವ ಇಲ್ಲಿನ ಶಿಕ್ಷಕರು ಮತ್ತು ಮಕ್ಕಳು ಸರ್ಕಾರಿ ಶಾಲೆ ಬೇರೆ ಯಾವ ಶಾಲೆಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸಮಾಜಕ್ಕೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.</p>.<p>ಈಚೆಗಷ್ಟೇ ಈ ಶಾಲೆ ಹಸಿರು ಪರಿಸರ ಮಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದಕ್ಕೆಲ್ಲ ಮಕ್ಕಳ ಶ್ರಮವೇ ಮುಖ್ಯಕಾರಣ’ ಎಂದು ಶಿಕ್ಷಕ ಸುರೇಶ ಮಡಿವಾಳ ಹೆಮ್ಮೆಯಿಂದ ನುಡಿದರು. ಶಾಲೆಯ ಪ್ರತಿಯೊಂದು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಗ್ರಾಮಸ್ಥರು ಶಾಲೆಯ ಬಗ್ಗೆ ಅಷ್ಟೇ ಖುಷಿಯನ್ನು ವ್ಯಕ್ತಪಡಿಸುತ್ತಾರೆ.</p>.<p>ಈ ನಡುವೆ ಶಾಲೆಯಲ್ಲಿ ಕಲಿತಿರುವ ಹಳೆಯ ವಿದ್ಯಾರ್ಥಿಗಳು (ಈಗ ಅವರು ಹಿರಿಯರು) ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಈಚೆಗೆ ಏರ್ಪಡಿಸಲಾಗಿತ್ತು. ಹಿರಿಯರು ತಮ್ಮ ಶಾಲೆ ಬಗೆಗಿನ ಹಳೆಯ ನೆನಪು ಮೆಲಕು ಹಾಕಿದ್ದು ಚಿಕ್ಕವರಿಗೆ ದಿಕ್ಸೂಚಿಯಾಗಿತ್ತು ಎನ್ನುತ್ತಾರೆ ಶಿಕ್ಷಣಪ್ರೇಮಿ ಮೋನಪ್ಪ ಬಡಿಗೇರ.</p>.<p><strong>ಕೈ ತೋಟದ ಜೊತೆಗೆ ಬದುಕಿನ ಪಾಠ</strong></p>.<p>ಇಲ್ಲಿನ ಮಕ್ಕಳಿಗೆ ಕೇವಲ ಅಕ್ಷರಭ್ಯಾಸ ಹೇಳಿ ಕೊಡದೆ ಬದುಕಿಗೆ ಬೇಕಾದ ಶಿಕ್ಷಣವನ್ನು ಕಲಿಸುತ್ತಿರುವವುದು ವಿಶೇಷ. ಶಿಕ್ಷಕರು ಮಕ್ಕಳೊಂದಿಗೆ ಶಾಲಾ ಆವರಣದಲ್ಲಿ ಕೈತೋಟ ನಿರ್ಮಿಸಿ ಅವರಿಂದಲೇ ಅದರ ನಿರ್ವಹಣೆ ಮಾಡಿಸುತ್ತಾರೆ.</p>.<p>ಔಷಧಿ ಸಸ್ಯಗಳು, ಹೂವಿನ ಗಿಡಗಳು, ತರಕಾರಿ, ಅಲಂಕಾರಿಕ ಗಿಡಗಳು, ಹೊಂಗೆ ಮರ ಸೇರಿದಂತೆ 188 ಬಗೆಯ ಗಿಡಗಳು ಇಲ್ಲಿ ನಳನಳಿಸುತ್ತಿವೆ. ಬೋರವೆಲ್ ನೀರು, ಇಂಗುಗುಂಡಿ, ತುಂತುರು ಹನಿ ನೀರಾವರಿ ವ್ಯವಸ್ಥೆ ಮಕ್ಕಳು ಮಾಡಿದ್ದಾರೆ ಎನ್ನುತ್ತಾರೆ ಶಿಕ್ಷಕರು.</p>.<p>**</p>.<p>ಈ ಶಾಲೆಯಲ್ಲಿ ಉತ್ತಮವಾಗಿ ಗ್ರಂಥಾಲಯ ಮತ್ತು ಪ್ರಯೋಗಾಲಯ ವ್ಯವಸ್ಥೆ ಇದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.<br /><em><strong>ಬಾಬಾಗೌಡ ಬಿರಾದಾರ, ಮುಖ್ಯಶಿಕ್ಷಕ</strong></em></p>.<p>**</p>.<p>ನಮ್ಮ ಶಾಲೆಯಲ್ಲಿ ಅಕ್ಷರಭ್ಯಾಸದ ಜತೆಗೆ ಕೈತೋಟ ಮಾಡುವುದನ್ನು ಮತ್ತು ಬಿಡುವಿನ ವೇಳೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.<br /><em><strong>ನಾಗಮ್ಮ ಮುನ್ನೆಪ್ಪ, 7ನೇ ತರಗತಿ ವಿದ್ಯಾರ್ಥಿನಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>