<p><strong>ಕಲಬುರಗಿ:</strong> ‘ಕವಿ, ಬರಹಗಾರರು ಬಹಳ ಪರಿಶ್ರಮದಿಂದ ಕಾರ್ಯಕ್ರಮ ಮಾಡುತ್ತಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ರಾಷ್ಟ್ರಮಟ್ಟದ ಪ್ರಶಸ್ತಿಗಳು ಕೂಡ ಸಿಗಲಿ’ ಎಂದು ಮಾಜಿ ಉಪ ಮೇಯರ್ ನಾಗವೇಣಿ ತಿಪ್ಪಣ್ಣಪ್ಪ ಕಮಕನೂರ ಆಶಿಸಿದರು.</p>.<p>ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ರಂಗಮಿತ್ರ ನಾಟ್ಯ ಸಂಘ, ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕವಿಸಂಗಮ-2026 ನಮ್ಮ ನಾಟಕ ನಮ್ಮ ಹಕ್ಕು ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕವಿಗಳು, ನಾಟಕ ಬರಹಗಾರರು ತಮ್ಮ ಜೀವನದ ನೋವುಗಳನ್ನು ಹೇಳಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬಾರದು’ ಎಂದು ಹೇಳಿದರು.</p>.<p>ನಾಟಕ ಬರಹಗಾರರ ಕವಿಗಳ ಸಂಘದ ರಾಜ್ಯಾಧ್ಯಕ್ಷ ಶಂಕರಜಿ ಹೂವಿನಹಿಪ್ಪರಗಿ ಮಾತನಾಡಿ, ‘ಸಂಘದಲ್ಲಿ 400 ಜನ ಸದಸ್ಯರಿದ್ದು, ಕವಿ ಬರಹಗಾರರಿಗೆ ಸಮಾಜದಲ್ಲಿ ಗೌರವ ಸಿಗುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸಂಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದೆ’ ಎಂದು ತಿಳಿಸಿದರು.</p>.<p>ಪ್ರಶಸ್ತಿ ಪ್ರದಾನ: 50 ಜನ ಸಾಧಕರಿಗೆ ‘ಶ್ರೀವಿಜಯರತ್ನ’ ಹಾಗೂ 26 ಜನರಿಗೆ ‘ಕನ್ನಡ ಕವಿರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಎಲ್.ಬಿ.ಶೇಕ್ ಮಾಸ್ತರ್, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಮಲ್ಲೇಶ್ ಕೋನಾಳ ಯಾದಗಿರಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.</p>.<p>ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ಯಾ, ಹಳ್ಳೊಳ್ಳಿಯ ಶಿರಸಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಂಗಮಿತ್ರ ನಾಟ್ಯ ಸಂಘದ ಜಿಲ್ಲಾಧ್ಯಕ್ಷ ಶಾಮರಾವ ಎಸ್.ಕೊರವಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕುಮಾರಿ ವಿಜಯಲಕ್ಷ್ಮಿ, ಗುರಪ್ಪ ಪಾಟೀಲ, ಡಿ.ಆರ್.ಪೂಜಾರಿ, ಜಗನ್ನಾಥ ಕಟ್ಟಿ, ರಾಮರಾವ ಪಾಟೀಲ, ಗೌತಮ ಬೊಮ್ಮನಳ್ಳಿ ಇದ್ದರು.</p>.<p>ಭವಾನಿ ಎಲ್.ಅವಂಟಿ ಭರತನಾಟ್ಯ, ಮಾರುತಿ ಹುಲಕಟ್ಟಿ ವೀರಗಾಸೆ ಪ್ರದರ್ಶಿಸಿದರು. ಬಾಲಕರಾದ ಸಮೀರ್ ಶೇಕ್ ಮತ್ತು ತನ್ವೀರ್ ಶೇಕ್ ಪ್ರಾರ್ಥಿಸಿದರು. ಪ್ರೇಮಾ ಬೆಳಗಲಿ ಸಂಘದ ಗೀತೆ ಹಾಡಿದರು. ಲಕ್ಷ್ಮಣ ಅವಂಟಿ ಸ್ವಾಗತಿಸಿದರು. ಬಿ.ಎಚ್.ನಿರಗುಡಿ ಮತ್ತು ಸುಜಾತಾ ಪಾಟೀಲ ನಿರೂಪಿಸಿದರು.</p>.<p><strong>ಹಲವರಿಂದ ದೇಣಿಗೆ</strong> </p><p>ಜಿ.ಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಬಂಧು ಪ್ರಿಂಟರ್ಸ್ ಮಾಲೀಕ ರಮೇಶ ಜಿ.ತಿಪ್ಪನೂರ ಅಫಜಲಪುರದ ಸಿದ್ರಾಮೇಶ್ವರ ನಾಟ್ಯ ಸಂಘದ ಮಾಲೀಕ ಚಂದ್ರಶೇಖರ ಕರಜಗಿ ಅವರು ನಾಟಕ ಬರಹಗಾರರು ಮತ್ತು ಕವಿಗಳ ಸಂಕಷ್ಟಕ್ಕೆ ನೆರವಾಗಲಿ ಎಂದು ಸಂಘಕ್ಕೆ ತಲಾ ₹25 ಸಾವಿರ ದೇಣಿಗೆ ನೀಡಿದರು. ಅವರಂತೆ ಅನೇಕರು ₹11 ಸಾವಿರ ₹5 ಸಾವಿರ ದೇಣಿಗೆ ಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಕವಿ, ಬರಹಗಾರರು ಬಹಳ ಪರಿಶ್ರಮದಿಂದ ಕಾರ್ಯಕ್ರಮ ಮಾಡುತ್ತಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ರಾಷ್ಟ್ರಮಟ್ಟದ ಪ್ರಶಸ್ತಿಗಳು ಕೂಡ ಸಿಗಲಿ’ ಎಂದು ಮಾಜಿ ಉಪ ಮೇಯರ್ ನಾಗವೇಣಿ ತಿಪ್ಪಣ್ಣಪ್ಪ ಕಮಕನೂರ ಆಶಿಸಿದರು.</p>.<p>ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ರಂಗಮಿತ್ರ ನಾಟ್ಯ ಸಂಘ, ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕವಿಸಂಗಮ-2026 ನಮ್ಮ ನಾಟಕ ನಮ್ಮ ಹಕ್ಕು ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕವಿಗಳು, ನಾಟಕ ಬರಹಗಾರರು ತಮ್ಮ ಜೀವನದ ನೋವುಗಳನ್ನು ಹೇಳಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬಾರದು’ ಎಂದು ಹೇಳಿದರು.</p>.<p>ನಾಟಕ ಬರಹಗಾರರ ಕವಿಗಳ ಸಂಘದ ರಾಜ್ಯಾಧ್ಯಕ್ಷ ಶಂಕರಜಿ ಹೂವಿನಹಿಪ್ಪರಗಿ ಮಾತನಾಡಿ, ‘ಸಂಘದಲ್ಲಿ 400 ಜನ ಸದಸ್ಯರಿದ್ದು, ಕವಿ ಬರಹಗಾರರಿಗೆ ಸಮಾಜದಲ್ಲಿ ಗೌರವ ಸಿಗುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸಂಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದೆ’ ಎಂದು ತಿಳಿಸಿದರು.</p>.<p>ಪ್ರಶಸ್ತಿ ಪ್ರದಾನ: 50 ಜನ ಸಾಧಕರಿಗೆ ‘ಶ್ರೀವಿಜಯರತ್ನ’ ಹಾಗೂ 26 ಜನರಿಗೆ ‘ಕನ್ನಡ ಕವಿರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಎಲ್.ಬಿ.ಶೇಕ್ ಮಾಸ್ತರ್, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಮಲ್ಲೇಶ್ ಕೋನಾಳ ಯಾದಗಿರಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.</p>.<p>ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ಯಾ, ಹಳ್ಳೊಳ್ಳಿಯ ಶಿರಸಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಂಗಮಿತ್ರ ನಾಟ್ಯ ಸಂಘದ ಜಿಲ್ಲಾಧ್ಯಕ್ಷ ಶಾಮರಾವ ಎಸ್.ಕೊರವಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕುಮಾರಿ ವಿಜಯಲಕ್ಷ್ಮಿ, ಗುರಪ್ಪ ಪಾಟೀಲ, ಡಿ.ಆರ್.ಪೂಜಾರಿ, ಜಗನ್ನಾಥ ಕಟ್ಟಿ, ರಾಮರಾವ ಪಾಟೀಲ, ಗೌತಮ ಬೊಮ್ಮನಳ್ಳಿ ಇದ್ದರು.</p>.<p>ಭವಾನಿ ಎಲ್.ಅವಂಟಿ ಭರತನಾಟ್ಯ, ಮಾರುತಿ ಹುಲಕಟ್ಟಿ ವೀರಗಾಸೆ ಪ್ರದರ್ಶಿಸಿದರು. ಬಾಲಕರಾದ ಸಮೀರ್ ಶೇಕ್ ಮತ್ತು ತನ್ವೀರ್ ಶೇಕ್ ಪ್ರಾರ್ಥಿಸಿದರು. ಪ್ರೇಮಾ ಬೆಳಗಲಿ ಸಂಘದ ಗೀತೆ ಹಾಡಿದರು. ಲಕ್ಷ್ಮಣ ಅವಂಟಿ ಸ್ವಾಗತಿಸಿದರು. ಬಿ.ಎಚ್.ನಿರಗುಡಿ ಮತ್ತು ಸುಜಾತಾ ಪಾಟೀಲ ನಿರೂಪಿಸಿದರು.</p>.<p><strong>ಹಲವರಿಂದ ದೇಣಿಗೆ</strong> </p><p>ಜಿ.ಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಬಂಧು ಪ್ರಿಂಟರ್ಸ್ ಮಾಲೀಕ ರಮೇಶ ಜಿ.ತಿಪ್ಪನೂರ ಅಫಜಲಪುರದ ಸಿದ್ರಾಮೇಶ್ವರ ನಾಟ್ಯ ಸಂಘದ ಮಾಲೀಕ ಚಂದ್ರಶೇಖರ ಕರಜಗಿ ಅವರು ನಾಟಕ ಬರಹಗಾರರು ಮತ್ತು ಕವಿಗಳ ಸಂಕಷ್ಟಕ್ಕೆ ನೆರವಾಗಲಿ ಎಂದು ಸಂಘಕ್ಕೆ ತಲಾ ₹25 ಸಾವಿರ ದೇಣಿಗೆ ನೀಡಿದರು. ಅವರಂತೆ ಅನೇಕರು ₹11 ಸಾವಿರ ₹5 ಸಾವಿರ ದೇಣಿಗೆ ಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>