<p><strong>ವಾಡಿ:</strong> ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ ಎನ್ನುವ ಹಾಗೇ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಅರಿವಿನ ಹಣತೆ ಹಚ್ಚುತ್ತಾ ಸಾಗುತ್ತಿದ್ದಾರೆ ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಸಿದ್ಧತೋಟೇಂದ್ರ ಶಿವಾಚಾರ್ಯರು.</p>.<p>ಇನ್ನುಳಿದ ಮಠಾಧೀಶರ ಹಾಗೇ ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತರಾಗದೇ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಬಹುಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿರುವ ಇವರು ಸಮಕಾಲೀನ ಸಮಾಜ ಸುಧಾರಕರಲ್ಲಿ ಅಗ್ರಗಣ್ಯರು.</p>.<p>ವಿಜ್ಞಾನ, ಸಿನಿಮಾರಂಗ, ಧರ್ಮ, ಕ್ರೀಡಾಲೋಕ, ಬಾಹ್ಯಕಾಶ, ರಾಜಕೀಯ ರಂಗ ಹೀಗೆ ಸಮಾಜದ ಪ್ರತಿ ಕ್ಷೇತ್ರದ ಮಹಾನೀಯ ವ್ಯಕ್ತಿಗಳನ್ನು ತಮ್ಮ ಮಠದ ಆವರಣದಲ್ಲಿ ಜರುಗುವ ಪ್ರತಿ ಕಾರ್ಯಕ್ರಮಕ್ಕೂ ಪ್ರೀತಿಯ ಸ್ವಾಗತ ನೀಡಿ ಭಕ್ತರಿಗೆ ಹತ್ತಿರವಾಗಿಸುವ ಮಹಾನ್ ಕಾರ್ಯ ನಡೆಸುತ್ತಾ ಬರುತ್ತಾ ಭಕ್ತರ ಮನ ತಣಿಸುತ್ತಿದ್ದಾರೆ.</p>.<p>ನಾವು ದೂರದಿಂದಲೂ ನೋಡಲು ಸಾಧ್ಯವಾಗದ ಮಹಾನ್ ಪುರುಷರನ್ನು ನಮ್ಮ ಹತ್ತಿರಕ್ಕೆ ಕರೆತಂದು ನಮ್ಮ ಬದುಕು ಪಾವನ ಮಾಡುತ್ತಿರುವ ಮಹಾನೀಯರು ನಮ್ಮ ಸಿದ್ಧ ತೋಟೇಂದ್ರರು ಎಂದು ಸ್ಥಳೀಯರು ಹೆಮ್ಮೆಯಿಂದ ನೆನೆಯುತ್ತಾರೆ.</p>.<div><blockquote>ನಾಲವಾರದ ನಂದಾದೀಪವೆಂದೇ ಖ್ಯಾತಿ ಪಡೆದ ಸಿದ್ಧ ತೋಟೇಂದ್ರರು ಕಲೆ ಸಾಹಿತ್ಯ ಸಂಸ್ಕೃತಿಯ ಪೋಷಕರು ಹೌದು. ಸಮಾಜದ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. </blockquote><span class="attribution">ಗುರುಗೌಡ ಇಟಗಿ ,ಯುವ ಮುಖಂಡ </span></div>.<div><blockquote>ರಾಜ್ಯದಲ್ಲಿಯೇ ಅಪರೂಪದ ಮಠ ಇದಾಗಿದ್ದು ಭಕ್ತರ ಅಜ್ಞಾನದ ಬದಲು ಅರಿವಿನ ಹಣತೆ ಹಚ್ಚಲು ತಮ್ಮ ಬದುಕು ಮುಡುಪಾಗಿಸಿದ ಸಿದ್ಧ ತೋಟೇಂದ್ರರು ಮಠಾಧೀಶರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ. </blockquote><span class="attribution">ಶಾಂತಗೌಡ ಭಕ್ತ ಅಲ್ಲೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ:</strong> ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ ಎನ್ನುವ ಹಾಗೇ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಅರಿವಿನ ಹಣತೆ ಹಚ್ಚುತ್ತಾ ಸಾಗುತ್ತಿದ್ದಾರೆ ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಸಿದ್ಧತೋಟೇಂದ್ರ ಶಿವಾಚಾರ್ಯರು.</p>.<p>ಇನ್ನುಳಿದ ಮಠಾಧೀಶರ ಹಾಗೇ ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತರಾಗದೇ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಬಹುಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿರುವ ಇವರು ಸಮಕಾಲೀನ ಸಮಾಜ ಸುಧಾರಕರಲ್ಲಿ ಅಗ್ರಗಣ್ಯರು.</p>.<p>ವಿಜ್ಞಾನ, ಸಿನಿಮಾರಂಗ, ಧರ್ಮ, ಕ್ರೀಡಾಲೋಕ, ಬಾಹ್ಯಕಾಶ, ರಾಜಕೀಯ ರಂಗ ಹೀಗೆ ಸಮಾಜದ ಪ್ರತಿ ಕ್ಷೇತ್ರದ ಮಹಾನೀಯ ವ್ಯಕ್ತಿಗಳನ್ನು ತಮ್ಮ ಮಠದ ಆವರಣದಲ್ಲಿ ಜರುಗುವ ಪ್ರತಿ ಕಾರ್ಯಕ್ರಮಕ್ಕೂ ಪ್ರೀತಿಯ ಸ್ವಾಗತ ನೀಡಿ ಭಕ್ತರಿಗೆ ಹತ್ತಿರವಾಗಿಸುವ ಮಹಾನ್ ಕಾರ್ಯ ನಡೆಸುತ್ತಾ ಬರುತ್ತಾ ಭಕ್ತರ ಮನ ತಣಿಸುತ್ತಿದ್ದಾರೆ.</p>.<p>ನಾವು ದೂರದಿಂದಲೂ ನೋಡಲು ಸಾಧ್ಯವಾಗದ ಮಹಾನ್ ಪುರುಷರನ್ನು ನಮ್ಮ ಹತ್ತಿರಕ್ಕೆ ಕರೆತಂದು ನಮ್ಮ ಬದುಕು ಪಾವನ ಮಾಡುತ್ತಿರುವ ಮಹಾನೀಯರು ನಮ್ಮ ಸಿದ್ಧ ತೋಟೇಂದ್ರರು ಎಂದು ಸ್ಥಳೀಯರು ಹೆಮ್ಮೆಯಿಂದ ನೆನೆಯುತ್ತಾರೆ.</p>.<div><blockquote>ನಾಲವಾರದ ನಂದಾದೀಪವೆಂದೇ ಖ್ಯಾತಿ ಪಡೆದ ಸಿದ್ಧ ತೋಟೇಂದ್ರರು ಕಲೆ ಸಾಹಿತ್ಯ ಸಂಸ್ಕೃತಿಯ ಪೋಷಕರು ಹೌದು. ಸಮಾಜದ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. </blockquote><span class="attribution">ಗುರುಗೌಡ ಇಟಗಿ ,ಯುವ ಮುಖಂಡ </span></div>.<div><blockquote>ರಾಜ್ಯದಲ್ಲಿಯೇ ಅಪರೂಪದ ಮಠ ಇದಾಗಿದ್ದು ಭಕ್ತರ ಅಜ್ಞಾನದ ಬದಲು ಅರಿವಿನ ಹಣತೆ ಹಚ್ಚಲು ತಮ್ಮ ಬದುಕು ಮುಡುಪಾಗಿಸಿದ ಸಿದ್ಧ ತೋಟೇಂದ್ರರು ಮಠಾಧೀಶರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ. </blockquote><span class="attribution">ಶಾಂತಗೌಡ ಭಕ್ತ ಅಲ್ಲೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>