ಸರ್ಕಾರೇತರ ಕಂಪನಿಯ ಮುಖ್ಯಸ್ಥ ಎಂದು ಹೇಳಿಕೊಂಡ ಅಶೋಕ ಅವರು ಚಂಡಿಗಢ ಮೂಲದ ಕಂಪನಿಯಿಂದ ಮೊಬೈಲ್ ಟವರ್ ಅಳವಡಿಸಿ ಲಕ್ಷಾಂತರ ರೂಪಾಯ ಕೊಡಿಸುವುದಾಗಿ ಗುಂಡಪ್ಪ ಅವರನ್ನು ನಂಬಿಸಿದ್ದ. 20 ವರ್ಷದ ಒಪ್ಪಂದಕ್ಕೆ ₹65 ಲಕ್ಷ ನೀಡುತ್ತಾರೆ. ಮುಂಗಡವಾಗಿ ₹10 ಲಕ್ಷ ಕೊಡುವರು ಎಂದು ಹುಸಿ ಭರವಸೆ ಕೊಟ್ಟ ಅಶೋಕ ಅವರು ರೈತರಿಂದ ₹27 ಸಾವಿರ ಪಡೆದಿದ್ದರು. ಇಲ್ಲಿಯವರೆಗೂ ಟವರ್ ಅಳವಡಿಸದೆ ಮತ್ತು ಪಡೆದ ಹಣವನ್ನೂ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ದೂರು ನೀಡಿದ್ದಾರೆ.