<p>ಕಲಬುರಗಿ: ನಗರದ ಅಕ್ಕಮಹಾದೇವಿ ಕಾಲೊನಿಯ ಮನೆಯೊಂದರಲ್ಲಿ ಸೆಂಟ್ರಿಂಗ್ ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.</p>.<p>ಅಂಬಿಕಾ ನಗರದ ನಿವಾಸಿ ದೀಪಕ್ ಸಹದೇವ (35) ಮೃತ ಕಾರ್ಮಿಕ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ನಾಮದೇವ ಜಾಧವ ಅವರ ಮನೆಯಲ್ಲಿ ದೀಪಕ್ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಕಬ್ಬಿಣ ತುಂಡರಿಸುವಾಗ ಯಂತ್ರದ ವೈರ್ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ಮಾಂಗಲ್ಯ ಸರ ಕಳವು:</strong> ಅಫಜಲಪುರ ತಾಲ್ಲೂಕಿನ ಮಲ್ಲಾಬಾದ್ ಗ್ರಾಮದ ಜಾತ್ರೆಯಲ್ಲಿ ಶಿವಲೀಲಾ ಶಿವಲಿಂಗಪ್ಪ ಅವರ ಕೊರಳಲ್ಲಿದ್ದ ₹2.20 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ.</p>.<p>ಗ್ರಾಮದ ವಿಜಯಲಕ್ಷ್ಮಿ ದೇವಿಯ ಜಾತ್ರೆಯ ಅಂಗವಾಗಿ ದೇವಸ್ಥಾನದ ಆರತಿ ಪೂಜೆಯ ವೇಳೆ ಶಿವಲೀಲಾ ಅವರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕೆಲ ಹೊತ್ತಿನ ಬಳಿಕ ನೋಡಿದಾಗಿ ಅವರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ಟವರ್ ಅಳವಡಿಕೆ ಆಮಿಷಯೊಡ್ಡಿ ರೈತರಿಗೆ ವಂಚನೆ:</strong> ಕೃಷಿ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸುವುದಾಗಿ ಹುಸಿ ಭರವಸೆ ಕೊಟ್ಟು ಹಣ ಪಡೆದು ಆಳಂದ ತಾಲ್ಲೂಕಿನ ಜಿಡಗಾ ಗ್ರಾಮದ ರೈತ ಗುಂಡಪ್ಪ ಗುರುಶಾಂತಪ ಅವರಿಗೆ ವ್ಯಕ್ತಿಯೊಬ್ಬರು ವಂಚಿಸಿದ್ದಾರೆ.</p>.<p>ಗುಂಡಪ್ಪ ನೀಡಿದ ದೂರಿನ ಅನ್ವಯ ಕಮಲಾಪುರದ ಅಶೋಕ ಕುಮಾರ ಅವರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಸರ್ಕಾರೇತರ ಕಂಪನಿಯ ಮುಖ್ಯಸ್ಥ ಎಂದು ಹೇಳಿಕೊಂಡ ಅಶೋಕ ಅವರು ಚಂಡಿಗಢ ಮೂಲದ ಕಂಪನಿಯಿಂದ ಮೊಬೈಲ್ ಟವರ್ ಅಳವಡಿಸಿ ಲಕ್ಷಾಂತರ ರೂಪಾಯ ಕೊಡಿಸುವುದಾಗಿ ಗುಂಡಪ್ಪ ಅವರನ್ನು ನಂಬಿಸಿದ್ದ. 20 ವರ್ಷದ ಒಪ್ಪಂದಕ್ಕೆ ₹65 ಲಕ್ಷ ನೀಡುತ್ತಾರೆ. ಮುಂಗಡವಾಗಿ ₹10 ಲಕ್ಷ ಕೊಡುವರು ಎಂದು ಹುಸಿ ಭರವಸೆ ಕೊಟ್ಟ ಅಶೋಕ ಅವರು ರೈತರಿಂದ ₹27 ಸಾವಿರ ಪಡೆದಿದ್ದರು. ಇಲ್ಲಿಯವರೆಗೂ ಟವರ್ ಅಳವಡಿಸದೆ ಮತ್ತು ಪಡೆದ ಹಣವನ್ನೂ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ನಗರದ ಅಕ್ಕಮಹಾದೇವಿ ಕಾಲೊನಿಯ ಮನೆಯೊಂದರಲ್ಲಿ ಸೆಂಟ್ರಿಂಗ್ ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.</p>.<p>ಅಂಬಿಕಾ ನಗರದ ನಿವಾಸಿ ದೀಪಕ್ ಸಹದೇವ (35) ಮೃತ ಕಾರ್ಮಿಕ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ನಾಮದೇವ ಜಾಧವ ಅವರ ಮನೆಯಲ್ಲಿ ದೀಪಕ್ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಕಬ್ಬಿಣ ತುಂಡರಿಸುವಾಗ ಯಂತ್ರದ ವೈರ್ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ಮಾಂಗಲ್ಯ ಸರ ಕಳವು:</strong> ಅಫಜಲಪುರ ತಾಲ್ಲೂಕಿನ ಮಲ್ಲಾಬಾದ್ ಗ್ರಾಮದ ಜಾತ್ರೆಯಲ್ಲಿ ಶಿವಲೀಲಾ ಶಿವಲಿಂಗಪ್ಪ ಅವರ ಕೊರಳಲ್ಲಿದ್ದ ₹2.20 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ.</p>.<p>ಗ್ರಾಮದ ವಿಜಯಲಕ್ಷ್ಮಿ ದೇವಿಯ ಜಾತ್ರೆಯ ಅಂಗವಾಗಿ ದೇವಸ್ಥಾನದ ಆರತಿ ಪೂಜೆಯ ವೇಳೆ ಶಿವಲೀಲಾ ಅವರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕೆಲ ಹೊತ್ತಿನ ಬಳಿಕ ನೋಡಿದಾಗಿ ಅವರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ಟವರ್ ಅಳವಡಿಕೆ ಆಮಿಷಯೊಡ್ಡಿ ರೈತರಿಗೆ ವಂಚನೆ:</strong> ಕೃಷಿ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸುವುದಾಗಿ ಹುಸಿ ಭರವಸೆ ಕೊಟ್ಟು ಹಣ ಪಡೆದು ಆಳಂದ ತಾಲ್ಲೂಕಿನ ಜಿಡಗಾ ಗ್ರಾಮದ ರೈತ ಗುಂಡಪ್ಪ ಗುರುಶಾಂತಪ ಅವರಿಗೆ ವ್ಯಕ್ತಿಯೊಬ್ಬರು ವಂಚಿಸಿದ್ದಾರೆ.</p>.<p>ಗುಂಡಪ್ಪ ನೀಡಿದ ದೂರಿನ ಅನ್ವಯ ಕಮಲಾಪುರದ ಅಶೋಕ ಕುಮಾರ ಅವರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಸರ್ಕಾರೇತರ ಕಂಪನಿಯ ಮುಖ್ಯಸ್ಥ ಎಂದು ಹೇಳಿಕೊಂಡ ಅಶೋಕ ಅವರು ಚಂಡಿಗಢ ಮೂಲದ ಕಂಪನಿಯಿಂದ ಮೊಬೈಲ್ ಟವರ್ ಅಳವಡಿಸಿ ಲಕ್ಷಾಂತರ ರೂಪಾಯ ಕೊಡಿಸುವುದಾಗಿ ಗುಂಡಪ್ಪ ಅವರನ್ನು ನಂಬಿಸಿದ್ದ. 20 ವರ್ಷದ ಒಪ್ಪಂದಕ್ಕೆ ₹65 ಲಕ್ಷ ನೀಡುತ್ತಾರೆ. ಮುಂಗಡವಾಗಿ ₹10 ಲಕ್ಷ ಕೊಡುವರು ಎಂದು ಹುಸಿ ಭರವಸೆ ಕೊಟ್ಟ ಅಶೋಕ ಅವರು ರೈತರಿಂದ ₹27 ಸಾವಿರ ಪಡೆದಿದ್ದರು. ಇಲ್ಲಿಯವರೆಗೂ ಟವರ್ ಅಳವಡಿಸದೆ ಮತ್ತು ಪಡೆದ ಹಣವನ್ನೂ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>