ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದ ಬಸವ ನಗರಕ್ಕೆ ಹೊಂದಿಕೊಂಡ ಹೌಸಿಂಗ್ ಬೋರ್ಡ್ ಲೇಔಟ್ನಲ್ಲಿರುವ ಸಂಸದ ಉಮೇಶ ಜಾಧವ ಮನೆಯ ಪಕ್ಕದಲ್ಲಿ ಹಂದಿಯೊಂದು ಎರಡು ನಾಯಿ ಮರಿಗಳಿಗೆ ಭಾನುವಾರ ಹಾಲುಣಿಸಿದೆ.
ಚುಮು ಚುಮು ಚಳಿಯಲ್ಲಿ ಬಿಸಿಲಿನಿಂದ ದೇಹ ಕಾಯಿಸಿಕೊಳ್ಳಲು ಬಯಲಿಗೆ ನಿಂತಿದ್ದ ಹಂದಿ ಬಳಿಗೆ ತೆರಳಿದ ಎರಡು ನಾಯಿ ಮರಿಗಳು ಹಾಲು ಕುಡಿದವು. ಎರಡೂ ಮರಿಗಳು ಒಂದರ ನಂತರ ಒಂದಂತೆ ಹಾಲು ಕುಡಿದು ಹೊಟ್ಟೆ ತುಂಬಿಸಿಕೊಂಡವು.