<p><strong>ಕಲಬುರಗಿ: </strong>ಕರ್ನಾಟಕ ಭೂ ಮಂಜೂರಾತಿ ಗುತ್ತಿಗೆ ನಿಯಮಾವಳಿ ಉಲ್ಲಂಘಿಸಿ ಜಮೀನನ್ನು ಇನ್ನೊಬ್ಬರಿಗೆ ಅನಧಿಕೃತವಾಗಿ ಪರಭಾರೆ ಮಾಡಿದ ಕರ್ನಾಟಕ ಕೋ–ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆ ಇವರಿಂದ 4 ಎಕರೆ ಸರ್ಕಾರಿ ಗೈರಾಣು ಜಮೀನು ಮರಳಿ ಸರ್ಕಾರಕ್ಕೆ ವಾಪಸ್ ಪಡೆಯುವಂತೆ ಕಲಬುರಗಿ ತಹಶೀಲ್ದಾರ್ಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೋಮವಾರ ಆದೇಶಿಸಿದ್ದಾರೆ.</p>.<p>ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆಗೆ ಪ್ರಾದೇಶಿಕ ವಿತರಣಾ ಕೇಂದ್ರ ಸ್ಥಾಪನೆ, ದಾಲ್ ಮಿಲ್ ಹಾಗೂ ಇತರೆ ಗೋಡೌನ್ ನಿರ್ಮಾಣಕ್ಕೆ ತಾಲ್ಲೂಕಿನ ಬಡೇಪೂರ ಗ್ರಾಮದ ಸರ್ಕಾರಿ ಗೈರಾಣು ಜಮೀನು ಸರ್ವೇ 84/2 ಮತ್ತು 84/4 ರಲ್ಲಿನ ತಲಾ 2 ಎಕರೆ ಸೇರಿ ಒಟ್ಟು 4 ಎಕರೆ ಗುತ್ತಿಗೆ ನೀಡಿ 1984ರ ಜುಲೈ 11ರಂದು ಅಂದಿನ ಜಿಲ್ಲಾಧಿಕಾರಿಗಳು ಮಂಜೂರಾತಿ ನೀಡಿದರು.</p>.<p>ಗುತ್ತಿಗೆ ಮಂಜೂರಾತಿ ಆದೇಶದಲ್ಲಿ ಭೂಮಿ ಪಡೆದ ನಂತರ 5 ವರ್ಷಗಳ ಅವಧಿಗೆ ಯಾರಿಗೂ ಭೂಮಿ ಪರಭಾರೆ ಮಾಡಬಾರದು ಮತ್ತು 5 ವರ್ಷದ ನಂತರ 15 ವರ್ಷದೊಳಗೆ ಭೂಮಿ ಪರಭಾರೆ ಮಾಡಬೇಕಾದರೆ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯ. ಯಾವ ಉದ್ದೇಶಕ್ಕೆ ಜಮೀನು ಮಂಜೂರು ಮಾಡಿದಿಯೋ ಅದೇ ಉದ್ದೇಶಕ್ಕೆ ಬಳಸಬೇಕು ಸೇರಿದಂತೆ ಇನ್ನಿತರ 5 ಅಂಶಗಳ ಷರತ್ತು ವಿಧಿಸಲಾಗಿತ್ತು.</p>.<p>ಈ ಷರತ್ತುಗಳನ್ನು ಉಲ್ಲಂಘಿಸಿದ ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಇವರು, ಸರ್ವೆ ನಂ. 84/4ರಲ್ಲಿನ 2 ಎಕರೆ ಜಮೀನನ್ನು ಜೈ ಭವಾನಿ ಕಲ್ಯಾಣ ಮಂಟಪಕ್ಕೆ ಪರಭಾರೆ ಮಾಡಿ 20 ವರ್ಷದ ಅವಧಿಗೆ ಗುತ್ತಿಗೆ ಕರಾರು ಮಾಡಿಕೊಂಡು ಕಲಬುರಗಿ ಉಪ ನೊಂದಣಾಧಿಕಾರಿಗಳ ಕಚೇರಿ ನೋಂದಣಿ ಮಾಡಿದ್ದಾರೆ. ಜೊತೆಗೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಲ್ಯಾಣ ಮಂಟಪ ಎಂದು ಸಹ ನೋಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಸಹಾಯಕ ಆಯುಕ್ತರು ವರದಿ ನೀಡಿದ್ದರು.</p>.<p>ಈ ವರದಿಯನ್ವಯ ಬಡೇಪೂರ ಗ್ರಾಮದ 4 ಎಕರೆ ಜಮೀನಿನ ಗುತ್ತಿಗೆ (ಲೀಸ್) ರದ್ದುಗೊಳಿಸಿ, ಯಾವುದೇ ನೋಟಿಸು ಅಥವಾ ಪರಿಹಾರ ನೀಡದೆ ಮರಳಿ ಕಂದಾಯ ಇಲಾಖೆಯ ವಶಕ್ಕೆ ಜಮೀನು ಪಡೆಯುವಂತೆ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ: </strong>ಕರ್ನಾಟಕ ಭೂ ಮಂಜೂರಾತಿ ಗುತ್ತಿಗೆ ನಿಯಮಾವಳಿ ಉಲ್ಲಂಘಿಸಿ ಜಮೀನನ್ನು ಇನ್ನೊಬ್ಬರಿಗೆ ಅನಧಿಕೃತವಾಗಿ ಪರಭಾರೆ ಮಾಡಿದ ಕರ್ನಾಟಕ ಕೋ–ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆ ಇವರಿಂದ 4 ಎಕರೆ ಸರ್ಕಾರಿ ಗೈರಾಣು ಜಮೀನು ಮರಳಿ ಸರ್ಕಾರಕ್ಕೆ ವಾಪಸ್ ಪಡೆಯುವಂತೆ ಕಲಬುರಗಿ ತಹಶೀಲ್ದಾರ್ಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೋಮವಾರ ಆದೇಶಿಸಿದ್ದಾರೆ.</p>.<p>ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆಗೆ ಪ್ರಾದೇಶಿಕ ವಿತರಣಾ ಕೇಂದ್ರ ಸ್ಥಾಪನೆ, ದಾಲ್ ಮಿಲ್ ಹಾಗೂ ಇತರೆ ಗೋಡೌನ್ ನಿರ್ಮಾಣಕ್ಕೆ ತಾಲ್ಲೂಕಿನ ಬಡೇಪೂರ ಗ್ರಾಮದ ಸರ್ಕಾರಿ ಗೈರಾಣು ಜಮೀನು ಸರ್ವೇ 84/2 ಮತ್ತು 84/4 ರಲ್ಲಿನ ತಲಾ 2 ಎಕರೆ ಸೇರಿ ಒಟ್ಟು 4 ಎಕರೆ ಗುತ್ತಿಗೆ ನೀಡಿ 1984ರ ಜುಲೈ 11ರಂದು ಅಂದಿನ ಜಿಲ್ಲಾಧಿಕಾರಿಗಳು ಮಂಜೂರಾತಿ ನೀಡಿದರು.</p>.<p>ಗುತ್ತಿಗೆ ಮಂಜೂರಾತಿ ಆದೇಶದಲ್ಲಿ ಭೂಮಿ ಪಡೆದ ನಂತರ 5 ವರ್ಷಗಳ ಅವಧಿಗೆ ಯಾರಿಗೂ ಭೂಮಿ ಪರಭಾರೆ ಮಾಡಬಾರದು ಮತ್ತು 5 ವರ್ಷದ ನಂತರ 15 ವರ್ಷದೊಳಗೆ ಭೂಮಿ ಪರಭಾರೆ ಮಾಡಬೇಕಾದರೆ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯ. ಯಾವ ಉದ್ದೇಶಕ್ಕೆ ಜಮೀನು ಮಂಜೂರು ಮಾಡಿದಿಯೋ ಅದೇ ಉದ್ದೇಶಕ್ಕೆ ಬಳಸಬೇಕು ಸೇರಿದಂತೆ ಇನ್ನಿತರ 5 ಅಂಶಗಳ ಷರತ್ತು ವಿಧಿಸಲಾಗಿತ್ತು.</p>.<p>ಈ ಷರತ್ತುಗಳನ್ನು ಉಲ್ಲಂಘಿಸಿದ ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಇವರು, ಸರ್ವೆ ನಂ. 84/4ರಲ್ಲಿನ 2 ಎಕರೆ ಜಮೀನನ್ನು ಜೈ ಭವಾನಿ ಕಲ್ಯಾಣ ಮಂಟಪಕ್ಕೆ ಪರಭಾರೆ ಮಾಡಿ 20 ವರ್ಷದ ಅವಧಿಗೆ ಗುತ್ತಿಗೆ ಕರಾರು ಮಾಡಿಕೊಂಡು ಕಲಬುರಗಿ ಉಪ ನೊಂದಣಾಧಿಕಾರಿಗಳ ಕಚೇರಿ ನೋಂದಣಿ ಮಾಡಿದ್ದಾರೆ. ಜೊತೆಗೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಲ್ಯಾಣ ಮಂಟಪ ಎಂದು ಸಹ ನೋಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಸಹಾಯಕ ಆಯುಕ್ತರು ವರದಿ ನೀಡಿದ್ದರು.</p>.<p>ಈ ವರದಿಯನ್ವಯ ಬಡೇಪೂರ ಗ್ರಾಮದ 4 ಎಕರೆ ಜಮೀನಿನ ಗುತ್ತಿಗೆ (ಲೀಸ್) ರದ್ದುಗೊಳಿಸಿ, ಯಾವುದೇ ನೋಟಿಸು ಅಥವಾ ಪರಿಹಾರ ನೀಡದೆ ಮರಳಿ ಕಂದಾಯ ಇಲಾಖೆಯ ವಶಕ್ಕೆ ಜಮೀನು ಪಡೆಯುವಂತೆ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>