ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿ ಕಲಾವಿದರ ತಾಣ. ಎಸ್.ಎಂ.ಪಂಡಿತ್, ಜೆ.ಎಸ್.ಖಂಡೇರಾವ ಹಾಗೂ ಡಾ. ವಿ.ಜಿ.ಅಂದಾನಿ ಅವರಂಥ ಕಲಾವಿದರನ್ನು ನೀಡಿದೆ. ಬಸವರಾಜ ಜಾನೆ ಅವರು ಕೂಡ ಉತ್ತಮ ಕಲಾವಿದರಾಗಿದ್ದಾರೆ. 2016 ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸಹ ಪಡೆದಿದ್ದಾರೆ’ ಎಂದರು.