ನಗರದ ಬಂಬೂ ಬಜಾರ್ ಹತ್ತಿರ 30ಕ್ಕೂ ಹೆಚ್ಚು ಜನರು ಕುಲುಮೆ ನಂಬಿಕೊಂಡು ಬದುಕು ನಡೆಸುತ್ತಿದ್ದಾರೆ.ಚೂರಿ, ಕೂಡುಗೋಲು, ಕೊಡಲಿ, ಗುದ್ದಲಿ, ಪಿಕಾಸಿ, ನೆಗಿಲು ಚಿಪ್ಪುಗಳು, ಚಕ್ರದ ಪಟ್ಟಿ ಹೀಗೆ ಕೃಷಿಗೆ ಸಂಬಂಧಿಸಿದ ಪರಿಕರಣಗಳನ್ನು ಇಲ್ಲಿ ದುರಸ್ತಿ ಮಾಡಲಾಗುತ್ತದೆ. ಆದರೆಕಳೆದ ಒಂದೂವರೆ ತಿಂಗಳಿಂದ ಯಾವುದೇ ವ್ಯಾಪಾರ ನಡೆಯುತ್ತಿಲ್ಲ. ಇದರಿಂದ ಇಲ್ಲಿನ ಕಾರ್ಮಿಕರು ಅತಂತ್ರರಾಗಿದ್ದಾರೆ.