ಘಟನೆ ಹಿನ್ನೆಲೆ: ಚಾಮನೂರು ಗ್ರಾಮದ ಕುರುಬ ಸಮಾಜಕ್ಕೆ ಸೇರಿದ ಸೂರ್ಯಕಾಂತ ಪೂಜಾರಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂಗೀತಾ ಮಾಲಗತ್ತಿ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಿಗೆ ಒಂದು ವರ್ಷದ ಗಂಡು ಮಗು ಇದೆ. ಮಗುವಿನ ನಾಮಕರಣಕ್ಕೆ ಗ್ರಾಮಕ್ಕೆ ಬಂದಿದ್ದಾಗ ಮಹಿಳೆಯ ಪೋಷಕರು ಹಲ್ಲೆ ನಡೆಸಿದ್ದರು. ಅಂತರ್ಜಾತಿ ವಿವಾಹದ ದ್ವೇಷದಿಂದಾಗಿ ಹಲ್ಲೆ ಮಾಡಲಾಗಿತ್ತು. ಘಟನೆಯಲ್ಲಿ ಯುವಕ ಸೂರ್ಯಕಾಂತ ತಂದೆ ದಶರಥ ಪೂಜಾರಿ, ಸಹೋದರ ತಿಪ್ಪಣ್ಣ ಪೂಜಾರಿ ಹಾಗೂ ಸಂಗೀತಾ ಮೇಲೆ ಹಲ್ಲೆ ನಡೆಸಲಾಗಿತ್ತು.